ಬೆಂಗಳೂರಲ್ಲಿ ತರಕಾರಿ ಬೆಲೆ ಭಾರಿ ಇಳಿಕೆ, ಸೊಪ್ಪುಗಳು ದುಬಾರಿ
ಬೆಂಗಳೂರು, ಸೆ.22: ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಮಳೆಯಾಗಿರುವ ಹಿನ್ನೆಲೆಯಲ್ಲಿ ತರಕಾರಿಗಳ ಬೆಳೆ ಉತ್ತಮವಾಗಿದ್ದು, ಮೂರ್ನಾಲ್ಕು ವಾರಗಳಿಂದ ತರಕಾರಿಗಳ ದರದಲ್ಲಿ ಇಳಿಕೆ ಕಂಡಿದೆ.
ತರಕಾರಿ ಬೆಳೆಗಳಿ ಇದೀಗ ಉತ್ತಮ ಫಸಲು ನೀಡಿವೆ, ಮಾರುಕಟ್ಟೆಗೂ ಯಥೇಚ್ಛ ಪ್ರಮಾಣದಲ್ಲಿ ಬರುತ್ತಿರುವುದರಿಂದ ಬೀನ್ಸ್, ಹಾಗಲಕಾಯಿ, ಟೊಮೆಟೊ, ಬೀಟ್ರೂಟ್ ಇನ್ನೂ ಹಲವು ತರಕಾರಿಗಳ ಬೆಲೆ ಇಳಿಕೆಯಾಗಿದೆ.
ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ
ಆಗಸ್ಟ್ ನಲ್ಲಿ ಹೂಕೋಸು, ಎಲೆಕೋಸು, ಬದನೆಕಾಯಿ, ಸೊಪ್ಪು ಸೇರಿದಂತೆ ವಿವಿಧ ತರಕಾರಿಗಳು 50 ರೂ ದಾಟಿದ್ದವು. ಆಗ ಹೆಚ್ಚಿದ ಮಳೆಯಿಂದಾಗಿ ಈಗಿನ ಬೆಳೆಗಳಿಗೆ ಪೂರಕವಾಗಿದೆ. ಭೂಮಿಯ ವಾತಾವರಣ ತಂಪಾಗಿದೆ.
ದಂಟು ಸೊಪ್ಪು 33 ರೂ., ಮೆಂತ್ಯೆ ಸೊಪ್ಪು 63 ರೂ, ಕೊತ್ತಂಬರಿ ಸೊಪ್ಪಿನ ದರವೂ ಏರಿಕೆಯಾಗಿದ್ದು ಕೆಜಿಗೆ 45 ರೂ. ಇದೆ. ಹಾಗಲಕಾಯಿ ಇದೀಗ 60 ರೂ.ನಿಂದ 24 ರೂ.ಗಳಿಗೆ ಇಳಿದಿದೆ. ಮೂಲಂಗಿ 30ರಿಂದ 24 ರೂಗೆ ಇಳಿದಿದೆ. ಒಟ್ಟಿನಲ್ಲಿ ಕೆಲವು ಸೊಪ್ಪುಗಳನ್ನು ಹೊರತುಪಡಿಸಿ ಎಲ್ಲಾ ತರಕಾರಿಗಳು 30 ರೂಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ಗಣೇಶ ಚತುರ್ಥಿ: ಹೂವು-ಹಣ್ಣು ಪೆಟ್ರೋಲ್ ನಷ್ಟೇ ದುಬಾರಿ
ತರಕಾರಿ ದರ ಹಾಪ್ಕಾಮ್ಸ್ : ಟೊಮೆಟೋ 13 ರೂ., ಬೀನ್ಸ್ 26ರೂ, ಸೌತೆಕಾಯಿ 17 ರೂ., ಬೀಟ್ರೂಟ್ 24 ರೂ, ಕ್ಯಾರೇಟ್ 48 ರೂ, ಆಲೂಗಡ್ಡೆ 32 ರೂಗೆ ದೊರೆಯಲಿದೆ.