ಕಸ ವಿಂಗಡನೆ ಮಾಡುವಂತೆ ಪ್ರಚಾರ ಮಾಡ್ತಾರೆ ಪುನೀತ್
ಬೆಂಗಳೂರು, ಫೆಬ್ರವರಿ 06 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಸ ವಿಂಗಡನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಆಂದೋಲನ ಕೈಗೊಳ್ಳಲಿದೆ. ನಟ ಪುನೀತ್ ರಾಜ್ಕುಮಾರ್ ಅವರು ಈ ಆಂದೋಲನದ ರಾಯಭಾರಿಯಾಗಿದ್ದಾರೆ.
ಬಿಬಿಎಂಪಿ
ಮೇಯರ್
ಮಂಜುನಾಥ
ರೆಡ್ಡಿ
ಅವರು
ಈ
ಕುರಿತು
ಮಾಹಿತಿ
ನೀಡಿದ್ದಾರೆ.
'ಮೂಲದಲ್ಲಿಯೇ
ಕಸವನ್ನು
ವಿಂಗಡೆನೆ
ಮಾಡುವ
ಕುರಿತು
ಜನರಲ್ಲಿ
ಅರಿವು
ಮೂಡಿಸಲು
ಪಾಲಿಕೆ
ಪ್ರಚಾರ
ಆಂದೋಲನ
ನಡೆಸಲಿದೆ.
ಪುನೀತ್
ರಾಜ್ಕುಮಾರ್
ಅವರು
ಇದರ
ರಾಯಭಾರಿಯಾಗಿದ್ದು,
ಹಲವು
ನಟ-ನಟಿಯರು
ಈ
ಆಂದೋಲನದಲ್ಲಿ
ಪಾಲ್ಗೊಳ್ಳಲಿದ್ದಾರೆ'
ಎಂದು
ಮಂಜುನಾಥ
ರೆಡ್ಡಿ
ಹೇಳಿದರು.
[ಬೆಂಗಳೂರು
:
ತ್ಯಾಜ್ಯ
ವಿಂಗಡನೆ
ಕಡ್ಡಾಯ,
ತಪ್ಪಿದರೆ
ದಂಡ]
ಪಾಲಿಕೆಯ ಆರೋಗ್ಯ ವಿಭಾಗದ ಡಾ.ಯತೀಶ್ ಕುಮಾರ್ ಅವರು ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ಪುನೀತ್ ರಾಜ್ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದು, ಕಸ ವಿಂಗಡೆನೆ ಕುರಿತ ಜಾಹೀರಾತು ಮತ್ತು ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. [ಬೆಂಗಳೂರಿಗರೇ ದಾರಿಯಲ್ಲಿ ಕಸ ಕಂಡ್ರೆ ಸೆಲ್ಫಿ ತಗೊಳ್ಳಿ!]
ಪುನೀತ್ ರಾಜ್ಕುಮಾರ್ ಅವರು ಈ ಆಂದೋಲನದ ರಾಯಭಾರಿಯಾಗಿದ್ದು, ಹಿರಿಯ ನಟಿ ಮತ್ತು ವಿಧಾನಪರಿಷತ್ ಸದಸ್ಯೆ ಜಯಮಾಲಾ, ತಾರಾ ಮುಂತಾದ ಸಿನಿಮಾ ಮತ್ತು ಕಿರುತೆರೆ ನಟ-ನಟಿಯರು ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ. [ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]
ಕರ್ನಾಟಕ ಹೈಕೋರ್ಟ್ ಆದೇಶದಂತೆ ಬೆಂಗಳೂರು ನಗರದಲ್ಲಿ 2016ರ ಜನವರಿ 1ರಿಂದಲೇ ಕಸ ವಿಂಗಡಣೆಯನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ. ಮೂಲದಲ್ಲಿಯೇ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದೆ.