ಕ್ಷುಲ್ಲಕ ಕಾರಣಕ್ಕೆ ಇಬ್ಬರಿಗೆ ಚಾಕು ಇರಿದ ಪಿಯುಸಿ ವಿದ್ಯಾರ್ಥಿ!
ಬೆಂಗಳೂರು, ಮೇ 29: ಕ್ಷುಲ್ಲಕ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿಯೊಬ್ಬ ರೌಡಿಸಂ ಪ್ರದರ್ಶಿಸಿ ಇಬ್ಬರು ಅಮಾಯಕ ಕಾಲೇಜು ಹುಡುಗರಿಗೆ ಚೂರಿ ಇರಿದಿರುವ ಘಟನೆ ನಗರದಲ್ಲಿ ಇಂದು ನಡೆದಿದೆ.
ಜಯನಗರದ ಎಸ್ಎಸ್ಎಂಆರ್ವಿ ಕಾಲೇಜಿನ ವಿದ್ಯಾರ್ಥಿ ಮಹೇಂದ್ರ ಎಂಬಾತ ಈ ಘಟನೆಯ ಕೇಂದ್ರ ಬಿಂದು. ಕಾಲೇಜಿನಲ್ಲಿ ನಡೆದ ಗಲಾಟೆ ಕುರಿತು ಶಿಕ್ಷಕರಿಗೆ ದೂರು ನೀಡಿದ್ದಾರೆಂದು ಇಬ್ಬರು ಸಹಪಾಠಿಗಳಿಗೆ ಚಾಕು ಇರಿದಿದ್ದಾನೆ.
ಬೆಂಗಳೂರು: ಸೈಕೋ ಕಿಲ್ಲರ್ ದೊರೆ ಬಂಧನ
ಮೊನ್ನೆಯಷ್ಟೆ ಮಹೇಂದ್ರ ಎಂಬಾತ ತರಗತಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಈ ಬಗ್ಗೆ ಇಬ್ಬರು ವಿದ್ಯಾರ್ಥಿಗಳು ಶಿಕ್ಷಕಿಯ ಬಳಿ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಮಹೇಂದ್ರ 20 ಜನ ಇತರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ದೂರು ನೀಡಿದ ವಿದ್ಯಾರ್ಥಿಗಳಿಗೆ ಚಾಕು ಇರಿದಿದ್ದಾನೆ.
ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Comments
English summary
PUC student of SSMRV college Jayanagar stubbed two fellow students today. He was abgry on them for giving complaint to teacher about him.
Story first published: Tuesday, May 29, 2018, 19:06 [IST]