ಪಿಎಸ್ಐ ನೇಮಕಾತಿ ಮರು ಪರೀಕ್ಷೆ ಬಗ್ಗೆ ಶೀಘ್ರವೇ ತೀರ್ಮಾನ: ಆರಗ ಜ್ಞಾನೇಂದ್ರ
ಬೆಂಗಳೂರು, ಆಗಸ್ಟ್ 03: ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಿಂದ ರದ್ದು ಪಡಿಸಿರುವ ಪರೀಕ್ಷೆಯ ಮರುಪರೀಕ್ಷೆಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಭೇಟಿಯಾದ ಪಿಎಸ್ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ, ಈ ಕುರಿತು ಭರವಸೆ ನೀಡಿದ್ದು, ಮರು ಪರೀಕ್ಷೆ ನಡೆಸಲು ಶೀಘ್ರದಲ್ಲಿಯೇ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಗೃಹ
ಸಚಿವರ
ಭರವಸೆಯ
ಮಾತು
ಪಿಎಸ್ಐ
ನೇಮಕಾತಿ
ಪರೀಕ್ಷೆಯಲ್ಲಿ
ಅಕ್ರಮ
ನಡೆದ
ಬಗ್ಗೆ
ಸಿಐಡಿ
ಪೊಲೀಸರು
ತನಿಖೆ
ನಡೆಸುತ್ತಿದ್ದು,
ಈ
ಪ್ರಕ್ರಿಯೆ
ಮುಗಿದ
ನಂತರ
ಮರು
ಪರೀಕ್ಷೆ
ನಡೆಸುವ
ಬಗ್ಗೆ
ಪ್ರಕಟಣೆ
ಹೊರಡಿಸಲಾಗುವುದು,
ರದ್ದಾದ
ಪರೀಕ್ಷೆ
ಬರೆದಿದ್ದ
ಹಾಗೂ
ಅಕ್ರಮದಲ್ಲಿ
ಭಾಗಿಯಾಗದಿದ್ದ
ಎಲ್ಲಾ
56000
ಅಭ್ಯರ್ಥಿಗಳು
ಮರು
ಪರೀಕ್ಷೆ
ತೆಗೆದುಕೊಳ್ಳಲು
ಅರ್ಹತೆ
ಹೊಂದಿದ್ದು,
ಯಾವುದೇ
ಆತಂಕ
ಬೇಡ
ಎಂದು
ಸಚಿವ
ಆರಗ
ಜ್ಞಾನೇಂದ್ರ
ಭರವಸೆ
ನೀಡಿದರು.
ಮರು ಪರೀಕ್ಷೆ ನಡೆಸುವುದು ತಡವಾದರೆ, ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ, ಪರೀಕ್ಷೆ ತಯಾರಿ ಮುಂದುವರೆಸಿ, ಎಂದು ಸಚಿವರು ಕಿವಿಮಾತು ಹೇಳಿದರು.
ದೂರವಾಗಿಲ್ಲ
ಪಿಎಸ್ಐ
ಅಭ್ಯರ್ಥಿಗಳ
ಆತಂಕ
ಆದರೆ,
ಪಿಎಸ್ಐ
ಪರೀಕ್ಷೆಯ
ನೇಮಕಾತಿ
ಹಗರಣದಲ್ಲಿ
ನಿಷ್ಠೆಯಿಂದ
ಪರೀಕ್ಷೆಯನ್ನು
ಬರೆದವರಿಗೆ
ಪರೀಕ್ಷೆಯನ್ನು
ರದ್ದು
ಮಾಡಿದ್ದರಿಂದ
ಅನ್ಯಾಯವಾಗಿದೆ.
ಆದರೂ
ಪರೀಕ್ಷೆಯಲ್ಲಿ
ಆಯ್ಕೆಯಾಗಿದ್ದವರ
ಪೈಕಿ
ಹಲವಾರು
ಅಭ್ಯರ್ಥಿಗಳು
ಅಕ್ರಮದಲ್ಲಿ
ಪಾಲ್ಗೊಂಡಿದ್ದರು.
ಅಕ್ರಮದಲ್ಲಿ
ಪಾಲ್ಗೊಂಡಿದ್ದ
ಅಭ್ಯರ್ಥಿಗಳು
ಅರೆಸ್ಟ್
ಆಗಿದ್ದಾರೆ.
ಇದರಿಂದಾಗಿ
ಚೇಜ್
ಬಾರ್
ಆಗುತ್ತೆ
ಎಂದು
ಆತಂಕಗೊಂಡಿದ್ದ
ಅಭ್ಯರ್ಥಿಗಳಿಗೆ
ಗೃಹಸಚಿವರು
ಭರವಸೆಯನ್ನು
ತುಂಬಿದ್ದಾರೆ.
ಆದರೆ
ಪಿಎಸ್ಐ
ನೇಮಕಾತಿ
ಹಗರಣದ
ಯಾವಾಗ
ತನಿಖೆ
ಮುಗಿಯಲಿದೆಯೋ
ಯಾವಾಗ
ಪರೀಕ್ಷೆ
ನಡೆಯುತ್ತೋ
ಅನ್ನೋ
ಆತಂಕ
ಮಾತ್ರ
ಅಭ್ಯರ್ಥಿಗಳಿಗೆ
ಇದ್ದೇ
ಇದೆ.