ಹಾರೋಹಳ್ಳಿ ಕಸಾಯಿಖಾನೆ ವಿರುದ್ಧ ಪ್ರತಿಭಟನೆ
ಅಕ್ಟೋಬರ್ 30ರಂದು ಹಾರೋಹಳ್ಳಿ ಬಸ್ ನಿಲ್ದಾಣದಲ್ಲಿ ಬೃಹತ್ ಪ್ರತಿಭ ಟನಾ ಮೆರವಣಿಗೆ ನಡೆಸಲಾಗುವುದು ಎಂದು ಕಸಾಯಿಖಾನೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಮಲ್ಲಪ್ಪ ತಿಳಿಸಿದ್ದಾರೆ.
ಬೆಂಗಳೂರು ಹಾಗೂ ಕನಕಪುರ ರಾಷ್ಟ್ರೀಯ ಹೆದ್ದಾರಿಯ ಬಳಿಯ ಕೈಗಾರಿಕಾ ಪ್ರದೇಶದ ಸುಮಾರು 40 ಎಕರೆ ಜಾಗದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಿಸಲು ಬಿಬಿಎಂಪಿ ಜಮೀನು ವಶಕ್ಕೆ ತೆಗೆದುಕೊಂಡಿದ್ದನ್ನು ಖಂಡಿಸಿ ಜೆಡಿಎಸ್ ಮುಖಂಡ ಪಿಜಿಆರ್ ಸಿಂಧ್ಯಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಬಿಬಿಎಂಪಿ ತನ್ನ ಉದ್ದೇಶಿತ ನಿರ್ಮಾಣ ಕಾರ್ಯದಿಂದ ಹಿಂದೆ ಸರಿದಿರಲಿಲ್ಲ.
ಹಾರೋಹಳ್ಳಿ
ದೊಡ್ಡಗುಡಿ
(ಅರುಣಾಚಲೇಶ್ವರ)
ದೇವಸ್ಥಾನದಲ್ಲಿ
ಕಸಾಯಿಖಾನೆ
ವಿರುದ್ಧ
ನಡೆಸುವ
ಪ್ರತಿಭಟನೆ
ಕುರಿತಂತೆ
ಪೂರ್ವಭಾವಿ
ಸಭೆ
ನಡೆಸಲಾಯಿತು.
'ಹಾರೋಹಳ್ಳಿ
ವ್ಯಾಪ್ತಿಯಲ್ಲಿ
40
ಎಕರೆ
ಭೂ
ಪ್ರದೇಶದಲ್ಲಿ
ಈ
ಬೃಹತ್
ಯಾಂತ್ರೀಕೃತ
ಕಸಾಯಿಖಾನೆ
ತೆರೆಯಲು
ಬಿ.ಬಿ.ಎಂ.ಪಿ.
ತೀರ್ಮಾ
ನಿಸಿದೆ.
ಇದಕ್ಕಾಗಿ
ಎಲ್ಲಾ
ಸಿದ್ಧತೆಗಳನ್ನು
ನಡೆಸಿದೆ.
ಸಂಬಂಧಪಟ್ಟವರು ಪೋಲಿಸರು ಸರ್ಪಕಾವಲಿನಲ್ಲಿ ಭೂಮಿ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಇದಕ್ಕೆ ಇನ್ನೂ ಪರವಾನಗಿ ನೀಡಿಲ್ಲ. ಸ್ಥಳೀಯವಾಗಿ ನಿರಾಕ್ಷೇಪಣಾ ಪತ್ರ ವನ್ನು ಪಡೆಯಲಾಗಿಲ್ಲ. ಆದರೆ ಬಿಬಿಎಂಪಿ ದುಂಡಾವರ್ತನೆಯಿಂದ ಕಸಾಯಿ ಖಾನೆ ತೆರೆಯಲು ತುದಿಗಾಲಲ್ಲಿ ನಿಂತಿದೆ ಎಂದು ಎಂ ಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕವಾಗಿ ತೊಂದರೆಯಾಗುವ ಹಾಗೂ ಸುತ್ತಲ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುವ ಈ ಕಸಾಯಿಖಾನೆ ನಿರ್ಮಾಣ ವನ್ನು ತಡೆಯುವುದೇ ಹೋರಾಟ ಸಮಿತಿಯ ಉದ್ದೇಶವಾಗಿದೆ. ಇದಕ್ಕೆ ಹೋಬಳಿಯ ಜನತೆ ಸೇರಿದಂತೆ ತಾಲ್ಲೂ ಕಿನ ಜನತೆ ಪಕ್ಷಾತೀತವಾಗಿ, ಜಾತ್ಯಾ ತೀತ, ಧರ್ಮಾತೀತವಾಗಿ ಬೆಂಬಲ ನೀಡಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಹಾರೋಹಳ್ಳಿಯ ಮೊದಲ ಹಂತದ ಕೈಗಾರಿಕಾ ಪ್ರದೇಶ ಸುಮಾರು 4,000 ಎಕರೆಯಿದ್ದು, ಅನೇಕ ಕೈಗಾರಿಕೆಗಳು ಆರಂಭವಾಗಿದೆ. ಸ್ಥಳೀಯರಿಗೆ ಉದ್ಯೋಗವಕಾಶಗಳು ಲಭಿಸಿದ್ದು, ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಾಯಕವಾಗಿದೆ.
ಸುಮಾರು 20,000 ಜನ ಸಂಖ್ಯೆಯುಳ್ಳ ಹಾರೋಹಳ್ಳಿ ಗ್ರಾಮಸ್ಥರಲ್ಲದೆ, ಬೆಂಗಳೂರಿನಿಂದ ಕೆಲಸದ ನಿಮಿತ್ತ ಇಲ್ಲಿಗೆ ಪ್ರತಿನಿತ್ಯ ಬರುವ ಸುಮಾರು 3 ರಿಂದ 4 ಸಾವಿರ ನೌಕಕರು ಕೂಡಾ ಈ ಕಸಾಯಿಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿ. ಕೃಷ್ಣಭಟ್ ಎಂಬುವರು ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ದಾಖಲಿಸಿ ಬೆಂಗಳೂರಿನಲ್ಲಿರುವ ಎಲ್ಲಾ ಕಸಾಯಿಖಾನೆಗಳನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸಲು ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ಕೋರ್ಟ್, ನಗರ ಹೊರವಲಯದಲ್ಲಿ ಸ್ಥಾಪನೆ ಮಾಡುವಂತೆ ಆದೇಶ ನೀಡಿತ್ತು. ಆದರೆ, ಹಾರೋಹಳ್ಳಿಯಲ್ಲಿ ಕೈಗಾರಿಕಾ ವಲಯದಲ್ಲಿ ಕಸಾಯಿಖಾನೆ ಸ್ಥಾಪನೆ ಮಾಡಲು ಹೊರಟಿರುವುದು ಸುತ್ತಮುತ್ತಲಿನ ರೈತರು, ಪರಿಸರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಕೈಗಾರಿಕೆಗಳ ಒಳಿವಿಗಾಗಿ ಈ ಉದ್ದೇಶಿತ ಯೋಜನೆಯನ್ನು ಕೈಬಿಡಬೇಕೆಂದು ಸಿಂಧ್ಯ ಅವರು ಕಳೆದ ಎರಡು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ.