ಭೂಗಳ್ಳರ ವಿರುದ್ಧದ ಹೋರಾಟ ಇಂದು ಅಂತ್ಯ
ಬೆಂಗಳೂರು, ಅ. 15 : ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭೂ ಕಬಳಿಕೆ ವಿರೋಧಿ ಸಮಿತಿ ಸದಸ್ಯರು ನಡೆಸುತ್ತಿದ್ದ ಹೋರಾಟ ಇಂದು ಅಂತ್ಯಗೊಳ್ಳಲಿದೆ. ಭೂಗಳ್ಳರ ವಿರುದ್ಧ ಶೀಘ್ರ ಕಾರ್ಯಾಚರಣೆ ನಡೆಸಲು ಹೊಸ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದ್ದು ಇಂದು ಹೋರಾಟ ಅಂತ್ಯಗೊಳಿಸುತ್ತೇವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದ್ದಾರೆ.
ಕಳೆದ
37
ದಿನಗಳಿಂದ
ನಗರದ
ಟೌನ್ಹಾಲ್
ಬಳಿ
ನಕಲಿ
ದಾಖಲೆ
ಸೃಷ್ಟಿಸಿ
ಸರ್ಕಾರಿ
ಜಮೀನು
ಕಬಳಿಸಿದ
ವ್ಯಕ್ತಿಗಳ
ವಿರುದ್ಧ
ಕ್ರಮಕೈಗೊಳ್ಳುವಂತೆ
ಒತ್ತಾಯಿಸಿ
ಭೂ
ಕಬಳಿಕೆ
ವಿರೋಧಿ
ಹೋರಾಟ
ಸಮಿತಿ
ಸದಸ್ಯರು
ಹೋರಾಟ
ನಡೆಸುತ್ತಿದ್ದರು.
ಹಿರಿಯ
ಸ್ವಾತಂತ್ರ್ಯ
ಹೋರಾಟಗಾರ
ಎಚ್.ಎಸ್.
ದೊರೆಸ್ವಾಮಿ
ಇದರ
ನೇತೃತ್ವ
ವಹಿಸಿದ್ದರು.
[ಭೂಗಳ್ಳರ
ವಿರುದ್ಧ
ಆಪ್
ಆಮರಣಾಂತ
ಉಪವಾಸ]
ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ-2007ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಅಲ್ಲದೆ, ಭೂಗಳ್ಳರ ವಿರುದ್ಧ ಶೀಘ್ರ ಕಾರ್ಯಾಚರಣೆ ನಡೆಸಲು ಹೊಸ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಆದ್ದರಿಂದ ಬುಧವಾರ ಹೋರಾಟವನ್ನು ಅಂತ್ಯಗೊಳಿಸುತ್ತೇವೆ ಎಂದು ದೊರೆಸ್ವಾಮಿ ಹೇಳಿದ್ದಾರೆ. [ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಸಿಎಂ ಆದೇಶ]
ಈಗಾಗಲೇ ಸರ್ಕಾರ ಭೂ ಒತ್ತುವರಿ ತೆರವು ಸಂಬಂಧ ಎ.ಟಿ.ರಾಮಸ್ವಾಮಿ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲು ಒಪ್ಪಿದೆ ನೀಡಿದೆ. ಜತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇಬ್ಬರು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲು ಆದೇಶ ಹೊರಡಿಸಿದೆ.
ಸಿಎಂ
ಮನವಿ
ಮಾಡಿದ್ದರು
:
ಸರ್ಕಾರಿ
ಭೂ
ಒತ್ತುವರಿ
ತೆರವು
ವಿಚಾರದಲ್ಲಿ
ಕಠಿಣವಾಗಿ
ವರ್ತಿಸಿ.
ಪೊಲೀಸ್
ಸಹಕಾರದೊಂದಿಗೆ
ಕ್ರಮ
ಕೈಗೊಳ್ಳಿ.
ಯಾವುದೇ
ಒತ್ತಡಕ್ಕೆ
ಮಣಿಯಬೇಡಿ.
ಸರ್ಕಾರಿ
ಭೂಮಿ
ವಶಕ್ಕೆ
ಪಡೆದು
ತಂತಿ
ಬೇಲಿ
ಹಾಕಿ
ಭದ್ರಪಡಿಸಿ
ಎಂದು
ಅಧಿಕಾರಿಗಳಿಗೆ
ಸೋಮವಾರ
ಸಿಎಂ
ಸಿದ್ದರಾಮಯ್ಯ
ಅವರು
ಸೂಚನೆ
ನೀಡಿದ್ದರು.
ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ಎ.ಟಿ.ರಾಮಸ್ವಾಮಿ ವರದಿ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಭೂ ಒತ್ತುವರಿದಾರರ ವಿರುದ್ಧ ಕ್ರಮಕ್ಕೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಬೇಡಿಕೆ ಈಡೇರಿದ್ದು, ಪ್ರತಿಭಟನೆ ವಾಪಸ್ ಪಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದರು.