ಜು.8 ರಂದು ಬಿಎಎಸ್ವೈ ಭವಿಷ್ಯ ನಿರ್ಧಾರ ಪ್ರಕಟಿಸಲಿರುವ ವಿಶೇಷ ನ್ಯಾಯಾಲಯ
ಬೆಂಗಳೂರು, ಜೂ. 11: ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬೆಳವಣಿಗೆ ನಡುವೆ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪ ಪ್ರಕರಣದ ತೀರ್ಪು ಶೀಘ್ರದಲ್ಲಿಯೇ ಹೊರ ಬೀಳಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸುಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರಿನ ತೀರ್ಪು ಜುಲೈ 08 ರಂದು ಹೊರ ಬೀಳಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ಅಭಿಯೋಜನಾ ಮಂಜೂರಾತಿ ನೀಡಲು ರಾಜ್ಯಪಾಲ ವಜುಬಾಯಿ ವಾಲಾ ನಿರಾಕರಣೆ ಮಾಡಿರುವುದು ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯಡಿಯೂರಪ್ಪ ಬದಲಾವಣೆ ನಡುವೆ ದೂರು: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಚಟುವಟಿಕೆ ಹಲವು ತಿಂಗಳಿನಿಂದಲೂ ಗರಿಗೆದರಿವೆ. ಈ ಬಗ್ಗೆ ಪಕ್ಷದ ಶಾಸಕರಲ್ಲಿ ಭುಗಿಲೆದ್ದಿದ್ದ ವಿವಾದ ಶಮನ ಮಾಡಲು ಕೇಂದ್ರ ಬಿಜೆಪಿ ಉಸ್ತುವಾರಿ ನಾಯಕರೇ ರಾಜ್ಯಕ್ಕೆ ಬಂದಿದ್ದರು. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕೂಗು ನಡುವೆ ಯಡಿಯೂರಪ್ಪ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣವೊಂದು ಚರ್ಚೆಗೆ ಬಂದಿದೆ. ಖಾಸಗಿ ದೂರು ಸಲ್ಲಿಸುವ ಮೂಲಕ ಹಲವು ಜನ ಪ್ರತಿನಿಧಿಗಳ ನಿದ್ದೆ ಗೆಡಿಸಿದ್ದ ಟಿ.ಜೆ. ಅಬ್ರಹಾಂ ಅವರು ಮುಖ್ಯಮಂತ್ರಿ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯಕ್ಕೂ ದೂರು ನೀಡಿದ್ದರು. ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜು. 8 ರಂದು ತೀರ್ಪು ಕಾಯ್ದಿರಿಸಿದೆ.
ಏನಿದು ಅಕ್ರಮ
ಕರ್ನಾಟಕದ
ಮುಖ್ಯಮಂತ್ರಿ
ಬಿ.ಎಸ್.
ಯಡಿಯೂರಪ್ಪ
ಹಾಗೂ
ಕುಟುಂಬದ
ಸದಸ್ಯರು
ಭ್ರಷ್ಟಚಾರದ
ಮೂಲಕ
ಪಡೆದಿರುವ
ಕೋಟ್ಯಂತರ
ರೂಪಾಯಿ
ಹಣ
ವಹಿವಾಟು
ನಡೆದಿದೆ.
ಕೋಲ್ಕತಾ
ಮೂಲದ
ಶೆಲ್
ಕಂಪನಿ
ಹಾಗೂ
ಯಡಿಯೂರಪ್ಪ
ಕುಟುಂಬ
ಒಡೆತನಕ್ಕೆ
ಸೇರಿದ
ಹಲವು
ಕಂಪನಿ
ನಡುವೆ
ಹಣಕಾಸಿನ
ವಹಿವಾಟು
ನಡೆದಿದ್ದು,
ಇದೆಲ್ಲವೂ
ಕಾನೂನು
ಬಾಹಿರ
ಬೇನಾಮಿ
ವ್ಯವಹಾರ
ನಡೆಸಿ
ಅಕ್ರಮ
ಎಸಗಿದ್ದಾರೆ
ಎಂದು
ದೂರಿನಲ್ಲಿ
ಆರೋಪಿಸಲಾಗಿದೆ.
ದೂರಿನ
ಪ್ರಕಾರ
ಮುಖ್ಯಮಂತ್ರಿ
ಬಿ.
ಎಸ್.
ಯಡಿಯೂರಪ್ಪ
ಮೊದಲನೇ
ಆರೋಪಿ.
ಬಿ.ವೈ.
ವಿಜಯೇಂದ್ರ
ಎರಡನೇ
ಆರೋಪಿ.
ಯಡಿಯೂರಪ್ಪ
ಅವರ
ಮೊಮ್ಮಗ
ಶಶಿಧರ್
ಮರಡಿ,
ವಿರುಪಾಕ್ಷಪ್ಪ
ಯಮಕನಮರಡಿ
ಅವರ
ಅಳಿಯ
ಸಂಜಯ್
ಶ್ರೀ,
ಚಂದ್ರಕಾಂತ್
ರಾಮಲಿಂಗಂ,
ವಿರುಪಾಕ್ಷಪ್ಪ
ಯಮಕನಮಾರಡಿ
ವಿರುದ್ಧ
ದೂರು
ಸಲ್ಲಿಕೆಯಾಗಿದೆ.
ಬೇನಾಮಿ
ವಹಿವಾಟಿನ
ಕುರಿತು
ಸಾಕ್ಷಾಧಾರ
ಆಧರಿಸಿ
ದೂರು
ನೀಡಿದ್ದಾರೆ.
ರಾಮಲಿಂಗಂ ಕಂಪನಿ ಜತೆ 12 ಕೋಟಿ ರೂ. ವ್ಯವಹಾರ
ರಾಮಲಿಂಗಂ ಕನ್ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ರಾಮಲಿಂಗಂ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ಮೂಲಕ ಪ್ರಭಾವ ಬೀರಿ ಹಲವು ಗುತ್ತಿಗೆ ಪಡೆದುಕೊಂಡಿದ್ದಾರೆ. ಕಡತಗಳ್ನು ತ್ವರಿತ ವಿಲೇವಾರಿ, ಬಿಲ್ ಪಾವತಿ ಹೀಗೆ ನಾನಾ ಕಾರ್ಯಗಳನ್ನು ಮಾಡಿಸಿಕೊಂಡು ಅದಕ್ಕೆ ಪ್ರತಿಯಾಗಿ ಲಂಚನ್ನು ನೀಡಲಾಗಿದೆ. ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಪುತ್ರ ಶಶಿಧರ್ ಮರಡಿ ಮೂಲಕ ಪ್ರಭಾವ ಬೀರಿಸಿ ಚಂದ್ರಕಾಂತ್ ರಾಮಲಿಂಗಂ ಕೋಟ್ಯಂತರ ರೂಪಾಯಿ ಅಕ್ರಮ ಹಣ ಪಾವತಿ ಮಾಡಿದ್ದಾರೆ. ಈ ಸಂಬಂಧ ಶಶಿಧರ್ ಮರಡಿ ಹಾಗೂ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವೆ ವಾಟ್ಸಪ್ ಸಂದೇಶ ವಿನಿಮಯವಾಗಿದ್ದು ಅದರ ಪ್ರಕಾರ, ಮುಖ್ಯಮಂತ್ರಿಗಳ ಪ್ರಭಾವ ಬಳಿಸಿ ಹಲವು ಗುತ್ತಿಗೆಗಳನ್ನು ರಾಮಲಿಂಗಂ ಕಂಪನಿಗೆ ಕೊಡಿಸಿರುವ ಬಗ್ಗೆ ವಾಟ್ಸಪ್ ನಲ್ಲಿ ಸಂದೇಶ ವಿನಿಯಮ ಮಾಡಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶಶಿಧರ್ ಮರಡಿ ಐದು ಕೋಟಿ ರೂ. ಹಣವನ್ನು ನೀಡಲು ಸೂಚನೆ ಮಾಡಿ ವಾಟ್ಸಾಪ್ ಸಂದೇಶ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಚಂದ್ರಕಾಂತ್ ರಾಮಲಿಂಗಂ ಐದು ದಿನದಲ್ಲಿ ಅಷ್ಟು ಹಣ ಅರೇಂಜ್ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ. 2019 ಅಕ್ಟೋಬರ್ ನಲ್ಲಿ ನಡೆದಿರುವ ಈ ವಾಟ್ಸಪ್ ಸಂದೇಶದಲ್ಲಿ ಯಡಿಯೂರಪ್ಪ ಕುಟುಂಬ ಸದಸ್ಯರು ರಾಮಲಿಂಗಂ ಕಂಪನಿಗೆ ಗುತ್ತಿಗೆ ಕೊಡಿಸಲು ಕೋಟಿ ಕೋಟಿ ಕಪ್ಪು ಹಣ ಕೊಟ್ಟಿರುವ ಬಗ್ಗೆ ವಾಟ್ಸಪ್ ಚಾಟ್ ಸಾಕ್ಷಿ ಆಧಾರಗಳನ್ನು ಅಬ್ರಹಾಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಾರೆ ಯಡಿಯೂರಪ್ಪ ಕುಟುಂಬ 12.5 ಕೋಟಿ ರೂ. ಕಪ್ಪ ಸಂಗ್ರಹ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಸಂಬಂಧಿಸಿದ ವಾಟ್ಸಪ್ ಸಂದೇಶ, ಸಾಕ್ಷಾಧಾರಗಳನ್ನು ನೀಡಲಾಗಿದೆ. ಇನ್ನು ಶಶಿಧರ್ ಮರಡಿ ಹಾಗೂ ಚಂದ್ರಕಾಂತ್ ರಾಮಲಿಂಗಂ ನಡುವಿನ 12.5 ಕೋಟಿ ರೂ. ಹಣಕಾಸಿನ ವಹಿವಾಟು ಬ್ಯಾಂಕ್ ಖಾತೆಯ ವಹಿವಾಟಿನ ವಿವರಗಳನ್ನು ಸಾಕ್ಷಿಗಳ ಸಮೇತ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ವಿಜಯಣ್ಣ ಎಂಟ್ರಿ
ಬಿ.ವೈ. ವಿಜಯೇಂದ್ರ ಹಾಗೂ ಶಿಶಧರ್ ಮರಡಿ ನಡುವಿನ ವಾಟ್ಸಪ್ ಸಂದೇಶದಲ್ಲೂ ಸಹ ಅಕ್ರಮ ವಹಿವಾಟಿನ ವಿವರಗಳು ಸಿಕ್ಕಿಬಿದ್ದಿವೆ. ಚಂದ್ರಕಾಂತ್ ರಾಮಲಿಂಗಂ, , ಶಶಿಧರ್ ಮರಡಿ, ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿಯ ಅಳಿಯ ಸಂಜಯ್ ಶ್ರೀ ಅವರ ನಡುವಿನ ಸಂಭಾಷಣೆಯಲ್ಲಿಯೇ ಸಂಚು ರೂಪಿಸಿರುವುದು, ಮುಖ್ಯಮಂತ್ರಿ ಕಾರ್ಯಾಲಯದ ಪ್ರಾಭಾವ ಬಳಿಸಿ 2019 ಜುಲೈ 10 ರಿಂದ 2020 ಜುಲೈ 15 ರ ಅವಧಿಯಲ್ಲಿನ ವಹಿವಾಟು ಪರಿಗಣಿಸಿದರೆ, ರೂಪಿಸಿರುವ ಸಂಚು ಹಣಕಾಸಿನ ಬೇನಾಮಿ ವಹಿವಾಟು ಎಲ್ಲವೂ ಬೆಳಕಿಗೆ ಬರುತ್ತದೆ ಎಂದು ಕೆಲವು ಮಹತ್ವದ ಸಾಕ್ಷಾಧಾರಗಳ ಸಮೇತ ದೂರಿನಲ್ಲಿ ಆರೋಪಿಸಲಾಗಿದೆ. ಈ ಹಂತದಲ್ಲಿ ವಿಜಯೇಂದ್ರ ಅವರ ಹೆಸರು ಎಂಟ್ರಿ ಆಗಿದೆ. ಮುಖ್ಯಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿ, ವಿರೂಪಾಕ್ಷಪ್ಪ ಯಮಕನಮರಡಿ ನಡುವಿನ ವಾಟ್ಸಪ್ ಸಂದೇಶದ ವಿವರಗಳು, ರೂಪಿಸಿರುವ ಸಂಚಿನ ಬಗ್ಗೆ ಉಲ್ಲೇಖಿಸಲಾಗಿದೆ. ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಆರೋಪ ಕುರಿತು ತನಿಖೆ ನಡೆಸುವಂತೆ ದೂರಿನಲ್ಲಿ ಕೋರಿದ್ದರು.
Recommended Video
ವಜುಬಾಯಿ ವಾಲಾ ನಿರಾಕರಣೆ
ಭ್ರಷ್ಟಾಚಾರ
ನಿಯಂತ್ರಣ
ಕಾಯ್ದೆ
ತಿದ್ದುಪಡಿ
ನಿಯಮದ
ಪ್ರಕಾರ
ಯಾವುದೇ
ಜನ
ಪ್ರತಿನಿಧಿ
ವಿರುದ್ಧ
ಭ್ರಷ್ಟಾಚಾರ
ಆರೋಪ
ಕೇಳಿ
ಬಂದರೆ
ಸಕ್ಷಮ
ಪ್ರಾಧಿಕಾರದಿಂದ
ಪೂರ್ವಾನುಮತಿ
ನೀಡಬೇಕು.
ಮುಖ್ಯಮಂತ್ರಿ
ಯಡಿಯೂರಪ್ಪ
ವಿರುದ್ಧ
ತನಿಖೆಗೆ
ಅನುಮತಿ
ನೀಡುವಂತೆ
ಕೋರಿ
ಟಿ.ಜೆ
ಅಬ್ರಹಾಂ
ಮನವಿ
ಮಾಡಿದ್ದರು.
ಮನವಿ
ಕೊಟ್ಟು
ಹಲವು
ತಿಂಗಳು
ಕಳೆದರೂ
ನೀಡಿರಲಿಲ್ಲ.
ನ್ಯಾಯಾಲಯದ
ವಿಚಾರಣೆ
ವೇಳೆ
ಯಡಿಯೂರಪ್ಪ
ವಿರುದ್ಧ
ತನಿಖೆಗೆ
ಅನುಮತಿ
ನೀಡಲು
ನಿರಾಕರಣೆ
ಮಾಡಿದ್ದಾರೆ.
ಸಮಗ್ರ
ಸಾಕ್ಷಾಧಾರಗಳನ್ನು
ಅವಲೋಕಿಸಿ
ನೀಡಬೇಕಿದ್ದ
ಅನುಮತಿ
ನೀಡದೇ
ನಿರಾಕರಣೆ
ಮಾಡಿರುವುದಕ್ಕೆ
ದೂರುದಾರ
ಟಿ.ಜೆ.
ಅಬ್ರಹಾಂ
ಕಿಡಿ
ಕಾರಿದ್ದಾರೆ.
ನಿಷ್ಪಕ್ಷಪಾತವಾಗಿ
ಕೆಲಸ
ಮಾಡಬೇಕಾದ
ರಾಜ್ಯಪಾಲರು
ಕಾರಣ
ವಿಲ್ಲದೇ
ಅನುಮತಿ
ನಿರಾಕರಣೆ
ಮಾಡಿದ್ದಾರೆ.
ಈ
ಕುರಿತು
ಕೆಲವು
ಮಹತ್ವದ
ವಿಷಯಗಳನ್ನು
ಸುದ್ದಿಗೋಷ್ಠಿಯಲ್ಲಿ
ಹಂಚಿಕೊಳ್ಳುತ್ತೇನೆ
ಎಂದು
'ಒನ್ಇಂಡಿಯಾ
ಕನ್ನಡ'ಕ್ಕೆ
ಸ್ಪಷ್ಟಪಡಿಸಿದ್ದಾರೆ.