ಬೆಂಗಳೂರಲ್ಲಿ ನಾಳೆ (ಏ.3)ಬೆಳಗ್ಗೆಯಿಂದಲೇ ಕರೆಂಟ್ ಇರಲ್ಲ, ಎಲ್ಲೆಲ್ಲಿ?
ಬೆಂಗಳೂರು, ಏ.2: ಮೆಟ್ರೋ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಏ.3ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬುಧವಾರ ಜಯದೇವ ಫೀಡರ್ -1 ವಿದ್ಯುತ್ ಮಾರ್ಗದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹಾಗಾಗಿ ಬಿಟಿಎಂ ಮೊದಲನೇ ಹಂತ 20ನೇ ಮುಖ್ಯರಸ್ತೆ, ಬಿಟಿಎಂ 2ನೇ ಹಂತ 7ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, ಬಾವಿ ಪಾರ್ಕ್ , ಎನ್ಡಿ ಡೆವಲಪರ್ಸ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ. ಹಾಗಾಗಿ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಬೆಂಗಳೂರಲ್ಲಿ ಈಗಾಗಲೇ ಕರೆಂಟ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಕೆಂಗೇರಿ, ಜಯನಗರ, ಉತ್ತರಹಳ್ಳಿ ಭಾಗಗಳಲ್ಲಿ ನಿತ್ಯ ಹತ್ತಾರು ಬಾರಿ ವಿದ್ಯುತ್ ಇರುವುದೇ ಇಲ್ಲ.
ಬೇಸಿಗೆ ಇನ್ನೂ ಎರಡು ತಿಂಗಳು ಮುಂದುವರೆಯಲಿದ್ದು, ಇದೇ ರೀತಿಯಾದರೆ ಮೇ ಆರಂಭದಿಂದಲೇ ಅತಿಥಿಗಳು ಬಂದ ಹಾಗೆ ಕರೆಂಟನ್ನೂ ಕೂಡ ಅಪರೂಪಕ್ಕೆ ನೋಡುವಂತಾಗಬಹುದು.
ಬೆಂಗಳೂರಲ್ಲಿ ಅಂತರ್ಜಲ ಬತ್ತುತ್ತಿದ್ದು ನೀರಿನ ತೊಂದರೆ ಆರಂಭವಾಗಿದೆ. ಜಲಮಂಡಳಿಯು ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡುತ್ತಿದೆ. ಇನ್ನೂ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಬಿಬಿಎಂಪಿಯು ನೀರು ಸರಬರಾಜು ಮಾಡುತ್ತಿದೆ.