ಬೆಂಗಳೂರಿನ ಕೆಲವೆಡೆ 12 ಗಂಟೆ ವಿದ್ಯುತ್ ಕಡಿತ
ಬೆಂಗಳೂರು, ಮೇ.11:ತುರ್ತು ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ ಇಂದು ಶನಿವಾರ (ಮೇ 11) ನಗರದ ವಿವಿಧೆಡೆ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ತಿಳಿಸಿದೆ.
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ 12 ಗಂಟೆವರೆಗೆ (ಬೆಳಗ್ಗೆ 8ರಿಂದ ರಾತ್ರಿ 8) ಮತ್ತು ಇನ್ನು ಕೆಲವು ಭಾಗಗಳಲ್ಲಿ ಎರಡು ಗಂಟೆ( ಬೆಳಗ್ಗೆ 12-2) ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಯಾವ ಭಾಗಗಳಲ್ಲಿ ಎಷ್ಟು ಗಂಟೆಗಳ ಕಾಲ ಪವರ್ ಕಟ್ ಇರುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ...
ಬೆಸ್ಕಾಂ ಗ್ರಾಹಕ ಸ್ನೇಹಿ ಪವರ್ಡ್ ಚಾಟ್ಬೋಟ್ಸ್ನಲ್ಲಿ ಹಿಂದಿ ಏಕೆ?
ಈ ಪ್ರದೇಶಗಳಲ್ಲಿ 12 ಗಂಟೆವರೆಗೆ ವಿದ್ಯುತ್ ಕಡಿತ
ಇಂದು ಶನಿವಾರ (ಮೇ.10) ವಿಜಯನಗರ, ಆರ್.ಪಿ.ಸಿ ಲೇಔಟ್, ಗೋವಿಂದರಾಜ ನಗರ, ಮರೇನಹಳ್ಳಿ, ನಾಗರಬಾವಿ, ಕಾಮಾಕ್ಷಿಪಾಳ್ಯ, ಚಂದ್ರ ಲೇಔಟ್, ಹಂಪಿನಗರ, ಸರ್ ಎಂವಿ ಲೇಔಟ್, ಕೊಡಿಗೇಹಳ್ಳಿ ಬಿಹೆಚ್ಇಎಲ್ ಲೇಔಟ್, ಬಾಪೂಜಿ ನಗರ, ದೀಪಾಂಜಲಿನಗರ, ಹೊಸ ಪಾಳ್ಯ, ಜ್ಞಾನಭಾರತಿ ಲೇಔಟ್, ವಿನಾಯಕ ಲೇಔಟ್, ಕೆಂಗೇರಿ ಸ್ಯಾಟಲೈಟ್ ಟೌನ್ ರೈಲ್ವೆ ನಿಲ್ದಾಣ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ, ಹನುಮಂತನಗರ, ಚಾಮರಾಜಪೇಟೆ, ವಿದ್ಯಾಪೀಠ, ತ್ಯಾಗರಾಜನಗರ, ಹೊಸಕೆರೆಹಳ್ಳಿ ಮತ್ತು ಮೈಸೂರು ರಸ್ತೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ.
ಈ ಪ್ರದೇಶಗಳಲ್ಲಿ ಎರಡು ಗಂಟೆ ಮಾತ್ರ
ಅಮರ ಜ್ಯೋತಿ ಲೇಔಟ್, ದೊಮ್ಮಲೂರು, ದೊಮ್ಮಲೂರು ಲೇಔಟ್, ಮುರುಗೇಶ ಪಾಳ್ಯ, ಜಗದೀಶ ನಗರ, ಮಲ್ಲೇಶ್ ಪಾಳ್ಯ , ವಿಗ್ನಾನ್ ನಗರ, ಮಾರುತಿನಗರ, ಬಸವನಗರ, ರಮೇಶ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ, ಕಾಳಪ್ಪ ಲೇಔಟ್, ಎಎಸ್ ಪಾಳ್ಯ, ಇಸ್ಲಾಂಪುರ್, ವಿನಾಯನಕಗರ, ದೊಡ್ಡನೇಕುಂದಿ, ಎಲ್ ಆರ್ ಡಿ ಲೇಔಟ್, ಸಂಜಯನಗರ, ಮಂಜುನಾಥ್ ನಗರ, ಮರಾಠಹಳ್ಳಿ, ಕಾವೇರಿ ಲೇಔಟ್, ಮಂಜುನಾಥ ಲೇಔಟ್, ವಾಗ್ದೇವಿ ಲೇಔಟ್, ಈಜಿಪುರ, ಎಸ್ಟಿ ಬೆಡ್, 80 ಅಡಿ ರಸ್ತೆ, ಅಶ್ವನಿ ಲೇಔಟ್, ವಿವೇಕಾನಗರ, ಆನೆಪಾಳ್ಯ, ನೀಲಸಂದ್ರ, ಸೋನೆನಹಳ್ಳಿ, ರೋಸ್ ಗಾರ್ಡನ್, ವೈ ಜಿ ಪಾಳ್ಯ, ರುದ್ರಪ್ಪ ಗಾರ್ಡನ್, ಶ್ರೀನಿವಾಗಿಲು, ಇಂದಿರಾನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.