ಬೆಂಗಳೂರು: ಟ್ರಾಫಿಕ್ ಪೊಲೀಸರ ಆರೋಗ್ಯ ಅಧ್ಯಯನ
ಬೆಂಗಳೂರು, ಮೇ.13: ನಗರದಲ್ಲಿ ಕಾರ್ಯನಿರ್ವಹಿಸುವ ಟ್ರಾಫಿಕ್ ಪೊಲೀಸರ ಆರೋಗ್ಯದ ಬಗ್ಗೆ ನ್ಯಾಷನಲ್ ರೆಫರಲ್ ಸೆಂಟರ್ ಫಾರ್ ಲೆಡ್ ಪ್ರಾಜೆಕ್ಟ್ ಇನ್ ಇಂಡಿಯಾ ಸಂಸ್ಥೆ ಅಧ್ಯಯನ ಕೈಗೊಳ್ಳಲಿದೆ.
ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ಸಂಚಾರ ಪೊಲೀಸರ ಆರೋಗ್ಯ ಹದಗೆಡುತ್ತಿದೆ. ಹೀಗಾಗಿ ಸಂಚಾರ ಪೊಲೀಸರ ಬಗ್ಗೆ ಅಧ್ಯಯನ ನಡೆಸಬೇಕೆಂದು ಪೊಲೀಸ್ ಇಲಾಖೆ ನ್ಯಾಷನಲ್ ರೆಫರಲ್ ಸೆಂಟರ್ ಫಾರ್ ಲೆಡ್ ಪ್ರೊಜೆಕ್ಟ್ ಇನ್ ಇಂಡಿಯಾ ಸಂಸ್ಥೆಗೆ ಮನವಿ ಮಾಡಿತ್ತು.[ಮಾನವೀಯತೆ ಮೆರೆದ ದೊಡೇಜಾಗೆ ಅಭಿನಂದನೆ]
ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪ್ರಯೋಜಕತ್ವದಲ್ಲಿ ಈ ಅಧ್ಯಯನ ಜೂನ್ ತಿಂಗಳಿನಿಂದ ಆರಂಭವಾಗಲಿದೆ.[ಈ ಟ್ರಾಫಿಕ್ ಪೊಲೀಸ್ ಅಂದ್ರೆ ಜನರಿಗೆ ಅಚ್ಚುಮೆಚ್ಚು]
ಪ್ರಾಯೋಗಿಕವಾಗಿ ಪಶ್ಚಿಮ ಸಂಚಾರ ವಿಭಾಗದ 941 ಮಂದಿ ಪೊಲೀಸರ ಆರೋಗ್ಯ ತಪಾಸಣೆ ಮತ್ತು ಅಧ್ಯಯನ ನಡೆಸಲಾಗುತ್ತದೆ. ಇದರ ಫಲಿತಾಂಶವನ್ನು ಆಧರಿಸಿ ಉಳಿದ ಸಂಚಾರ ಪೊಲೀಸರ ಆರೋಗ್ಯ ಅಧ್ಯಯನ ಕೈಗೊಳ್ಳಲಾಗುತ್ತದೆ.
ಹೊಗೆ ಮತ್ತು ದೂಳು ಸೇವಿಸಿ, ಹಲವು ಸಂಚಾರ ಪೊಲೀಸರು ಶ್ವಾಸಕೋಶದ ಸಮಸ್ಯೆಯಿಂದ ನರಳುತ್ತಿದ್ದಾರೆ. ಸೀಸದ ಅಂಶ ರಕ್ತದಲ್ಲಿ ಸೇರಿ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣಕ್ಕಾಗಿ ಅಧ್ಯಯನ ನಡೆಸಲಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.