ಎಬಿವಿಪಿ ಪ್ರತಿಭಟನೆಯನ್ನು ತಡೆದ ಪೊಲೀಸರು
ಬೆಂಗಳೂರು, ಆಗಸ್ಟ್ 22 : ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು. 8 ಕಾರ್ಯಕರ್ತರು ರಾಜ್ಯಪಾಲರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡಿದ್ದಾರೆ.
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು 48 ಗಂಟೆಗಳ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಸೋಮವಾರ ಮಧ್ಯಾಹ್ನ ಧರಣಿಯನ್ನು ಅಂತ್ಯಗೊಳಿಸಿ ರಾಜಭವನ ಚಲೋ ಹಮ್ಮಿಕೊಂಡಿದ್ದರು.[ಎಬಿವಿಪಿ ಪ್ರತಿಭಟನೆಗೆ ಬಿಜೆಪಿ ಬೆಂಬಲ, ರಾಜಭವನ ಚಲೋ]
ಮೌರ್ಯ ಸರ್ಕಲ್ ಬಳಿಯಿಂದ ಹೊರಟ ಪತ್ರಿಭಟನಾ ಜಾಥಾವನ್ನು ಫ್ರೀಡಂಪಾರ್ಕ್ ಬಳಿ ಪೊಲೀಸರು ತಡೆದರು. ನೂರಾರು ಪೊಲೀಸರು ಶೇಷಾದ್ರಿ ರಸ್ತೆಯಲ್ಲಿ ಅಡ್ಡವಾಗಿ ನಿಂತಿದ್ದು, ಜಾಥಾ ಮುಂದೆ ಹೋಗದಂತೆ ತಡೆದರು.[Amnesty International India ಪರಿಚಯ]
ಎಬಿವಿಪಿ
ರಾಷ್ಟ್ರೀಯ
ಪ್ರಧಾನ
ಕಾರ್ಯದರ್ಶಿ
ವಿನಯ್
ಬಿದಿರೆ
ಸೇರಿದಂತೆ
8
ಕಾರ್ಯಕರ್ತರು
ರಾಜ್ಯಪಾಲರನ್ನು
ಭೇಟಿ
ಮಾಡಲು
ಪೊಲೀಸರು
ಒಪ್ಪಿಗೆ
ನೀಡಿದ್ದಾರೆ.
ಮಧ್ಯಾಹ್ನ
1.30ಕ್ಕೆ
ರಾಜ್ಯಪಾಲರ
ಭೇಟಿಗೆ
ಸಮಯ
ನಿಗದಿಯಾಗಿದೆ.
ಪೊಲೀಸರು
ಪತ್ರಿಭಟನಾ
ಜಾಥಾವನ್ನು
ತಡೆದ
ಹಿನ್ನಲೆಯಲ್ಲಿ
ಮೌರ್ಯ
ವೃತ್ತಕ್ಕೆ
ಕಾರ್ಯಕರ್ತರು
ವಾಪಸ್
ಆಗಿದ್ದಾರೆ.
ಪ್ರತಿಭಟನೆ
ಹಿನ್ನಲೆಯಲ್ಲಿ
ಶೇಷಾದ್ರಿ
ರಸ್ತೆ,
ಆನಂದರಾವ್
ವೃತ್ತ
ಮತ್ತು
ಸುತ್ತ-ಮುತ್ತಲ
ಪ್ರದೇಶದಲ್ಲಿ
ಟ್ರಾಫಿಕ್
ಜಾಮ್
ಉಂಟಾಗಿದೆ.
ಪ್ರತಿಭಟನೆ
ಏಕೆ?
:
ಬೆಂಗಳೂರಿನ
ಯುನೈಟೆಡ್
ಥಿಯಾಲಾಜಿಕಲ್
ಕಾಲೇಜಿನಲ್ಲಿ
ಆಮ್ನೆಸ್ಟಿ
ಇಂಟರ್ನ್ಯಾಷನಲ್
ಇಂಡಿಯಾ
ಸಂಸ್ಥೆ
ಆಗಸ್ಟ್
13ರಂದು
'ಬ್ರೋಕನ್
ಫ್ಯಾಮಿಲೀಸ್'
ಹೆಸರಿನಲ್ಲಿ
ಕಾರ್ಯಕ್ರಮ
ಆಯೋಜಿಸಿತ್ತು.
ಇಲ್ಲಿ
ದೇಶ
ವಿರೋಧಿ
ಘೋಷಣೆ
ಕೂಗಲಾಗಿದೆ
ಎಂಬುದು
ಆರೋಪವಾಗಿದ್ದು,
ಈ
ಬಗ್ಗೆ
ಜೆ.ಸಿ.ನಗರ
ಪೊಲೀಸ್
ಠಾಣೆಯಲ್ಲಿ
ದೂರು
ದಾಖಲಾಗಿದ್ದು,
ತನಿಖೆ
ನಡೆಯುತ್ತಿದೆ.
ಎಬಿವಿಪಿ ಬೇಡಿಕೆಗಳು
*
ರಾಷ್ಟ್ರ
ವಿರೋಧಿ
ಘೋಷಣೆ
ಕೂಗಿದವರನ್ನು
ತಕ್ಷಣ
ಬಂಧಿಸಬೇಕು
*
ಆಮ್ನೆಸ್ಟಿ
ಇಂಟರ್ನ್ಯಾಷನಲ್
ಇಂಡಿಯಾ
ಸಂಸ್ಥೆಯನ್ನು
ದೇಶದಲ್ಲಿ
ನಿಷೇಧಿಸಬೇಕು
*
ಯುನೈಟೆಡ್
ಥಿಯಾಲಾಜಿಕಲ್
ಕಾಲೇಜಿನ
ವಿರುದ್ಧ
ಕ್ರಮ
ಕೈಗೊಳ್ಳಬೇಕು