ಜ್ಯುವೆಲ್ಲರಿ ಶಾಪ್ ಮಾಲೀಕನ ಅಪಹರಣ ಸುಖಾಂತ್ಯ
ಬೆಂಗಳೂರು, ಜೂ.13 : ಬೆಂಗಳೂರಿನ ಸುಗುಣ ಜ್ಯುವೆಲ್ಲರಿ ಶಾಪ್ ಮಾಲೀಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಅಪಹರಣಗೊಂಡಿದ್ದ ಅಂಗಡಿ ಮಾಲೀಕನನ್ನು ರಕ್ಷಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಿದ್ದು, 2 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಗುರುವಾರ
ರಾತ್ರಿ
ಸುಮಾರು
10.30ರ
ಸಮಯದಲ್ಲಿ
ಅಂಗಡಿ
ಮುಚ್ಚಿ
ಮನೆಗೆ
ಹೊರಟ
ಸುಗುಣ
ಜ್ಯುವೆಲ್ಲರಿ
ಶಾಪ್
ಮಾಲೀಕ
ಶ್ರೀರಾಮ್
ದಯಾಳ್
ಅವರನ್ನು
ನಾಲ್ವರು
ದುಷ್ಕರ್ಮಿಗಳು
ಅಪಹರಿಸಿದ್ದರು.
ನಂತರ
ಶ್ರೀರಾಮ್
ಅವರ
ಸಹೋದರ
ದೀನದಯಾಳ್
ಅವರಿಗೆ
ಕರೆ
ಮಾಡಿ
ತಮ್ಮನ
ಬಿಡುಗಡೆಗಾಗಿ
10
ಲಕ್ಷ
ಹಣವನ್ನ
ಕೊಡುವಂತೆ
ಬೇಡಿಕೆ
ಇಟ್ಟಿದ್ದರು.
ಸಹೋದರನ ಅಪಹರಣದ ಕುರಿತು ದೀನದಯಾಳ್ ಎಚ್ಎಎಲ್ ಲೇಔಟ್ ಠಾಣೆಗೆ ದೂರು ನೀಡಿದ್ದರು. ರಾತ್ರಿ ಪುನಃ ಕರೆ ಮಾಡಿದ ಅಪಹರಣಕಾರರು, ಹಣ ಹೊಂದಿಸಿದ್ದೀರಾ? ಎಂದು ಕೇಳಿದ್ದರು. ಪೊಲೀಸರಿಗೆ ಈ ಕುರಿತು ದೀನದಯಾಳ್ ಮಾಹಿತಿ ನೀಡಿದ್ದರು. [ಬೆಂಗಳೂರು ಕೊಲೆಗೆ ಚಂಬಲ್ ಕಣಿವೆ ನಂಟು]
ಅಪಹರಣಕಾರರಿಗೆ ನಮ್ಮ ಬಳಿ ಕೇಲವ 2 ಲಕ್ಷ ರೂಪಾಯಿ ಹಣವಿದೆ. 10 ಲಕ್ಷ ಹಣವಿಲ್ಲ ಎಂದು ದೀನದಯಾಳ್ ಹೇಳಿದ್ದಾರೆ. ಅಷ್ಟು ಹಣವನ್ನು ತಂದುಕೊಂಡುವಂತೆ ಅವರು ಹೇಳಿದ್ದಾರೆ. ದೀನದಯಾಳ್ ಪೊಲೀಸರೊಂದಿಗೆ ಅವರು ಸೂಚಿಸಿದ್ದ ಮೇಡಹಳ್ಳಿ ಸೇತುವೆ ಬಳಿಗೆ ಹೋಗಿದ್ದಾರೆ.
ಹಣ ಪಡೆಯಲು ಬಂದ ಅಪಹರಣಕಾರರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು ಉಳಿದವರು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.