ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿನ ತಟ್ಟೆ, ಲೋಟವನ್ನೇ ಚಾಕುವನ್ನಾಗಿ ಪರಿವರ್ತಿಸಿಕೊಂಡಿದ್ದ ಕೈದಿಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳು ಜೈಲಿನ ತಟ್ಟೆ, ಲೋಟವನ್ನೇ ಚಾಕುವನ್ನಾಗಿ ಪರಿವರ್ತಿಸಿಕೊಂಡಿದ್ದರು ಎನ್ನುವ ವಿಚಾರ ಸಿಸಿಬಿ ದಾಳಿ ವೇಳೆ ಬಹಿರಂಗಗೊಂಡಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಜಂಟಿ ಪೊಲೀಸ್ ಆಯುಕ್ತರ ತಂಡ ದಿಢೀರ್ ದಾಳಿ ನಡೆಸಿತ್ತು. ಆರು ತಾಸುಗಳು ಜೈಲಿನಲ್ಲಿ ಪರಿಶೀಲನೆ ನಡೆಸಿದಾಗ ಚಾಕು-ಚೂರಿ ರಹಸ್ಯ ಬಹಿರಂಗವಾಗಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ

ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಬ್ಯಾರಕ್‌ಗಳ ಶೋಧನೆ ವೇಳೆ ಕೆಲವರು, ಜೈಲಿನಲ್ಲಿ ನೀಡಿದ್ದ ತಟ್ಟೆ ಹಾಗೂ ಲೋಟಗಳಿಂದ ಹರಿತವಾದ ಅಸ್ತ್ರ ಮಾಡಿಕೊಂಡಿದ್ದರು. ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Police Raid Parappana Agrahara Seize Knives Phone

ತಮ್ಮ ಸೆಲ್‌ಗಳಲ್ಲಿ ರಹಸ್ಯವಾಗಿ ದಿಂಬು ಮತ್ತು ಹೊದಿಕೆಗಳ ಅಡಿಯಲ್ಲಿಟ್ಟುಕೊಂಡು , ಜೈಲಿಗೆ ಬರುವ ತಮ್ಮ ಎದುರಾಳಿಗಳ ದಾಳಿಗೆ ಸಂಚು ರೂಪಿಸುತ್ತಿದ್ದರು. ದುರ್ಬಲ ಕೈದಿಗಳನ್ನು ಅಡಿಯಾಳಾಗಿ ಇಟ್ಟುಕೊಂಡಿದ್ದರು.

ಜೈಲಿನಲ್ಲಿ ಪ್ರತಿಯೊಬ್ಬ ಸಜಾ ಮತ್ತು ವಿಚಾರಣಾಧೀನ ಕೈದಿಗೆ ಊಟ ಸೇವನೆಗೆ ತಟ್ಟೆ ಹಾಗೂ ಲೋಟಗಳನ್ನು ಕಾರಾಗೃಹ ಇಲಾಖೆ ವಿತರಿಸುತ್ತದೆ. ಇವುಗಳನ್ನು ಜಜ್ಜಿ ಕಲ್ಲಿನಲ್ಲಿ ಮಸೆದು ಚಾಕು-ಚೂರಿ ಮಾಡಿಕೊಂಡಿದ್ದರು.

English summary
Bengaluru Central Crime Branch (CCB) police carried out a raid inside the Parappana Agrahara prison on Wednesday early morning, and seized 37 knives/daggers, mobile phones and SIM cards from the prison cells.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X