ಮನೆಯಲ್ಲೇ ಕಳ್ಳತನ ಮಾಡಿದ ವ್ಯಕ್ತಿ ರೌಡಿ ಶೀಟರ್ ಆಗಿದ್ದು ಹೇಗೆ?
ಬೆಂಗಳೂರು, ಮಾರ್ಚ್ 23: ಹೌದು ಇದೊಂದು ವಿಚಿತ್ರ ಘಟನೆಯೇ ಸರಿ, ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿದವನ ಮೇಲೆ ರೌಡಿಶೀಟ್ ದಾಖಲಿಸಿರುವುದು ಬೆಳಕಿಗೆ ಬಂದಿದೆ.
ಕುಣಿಗಲ್ನ ಲಕ್ಷ್ಮಣ ಬೆಂಗಳೂರಿನ ಶ್ರೀಮಂತ ರೌಡಿಯಾದ ಕಥೆ!
ಡಿಸಿಪಿ ಅಣ್ಣಾಮಲೈ ಅವರು ಕೂಡ ಈ ವಿಷಯ ಕೇಳಿ ಶಾಕ್ ಆಗಿದ್ದಾರೆ. ಪ್ರಕರಣದ ಕುರಿತು ಮಾಹಿತಿ ಪಡೆದಿದ್ದಾರೆ. ಆತನನ್ನು ರೌಡಿಶೀಟ್ ನಿಂದ ಕೈಬಿಡುವಂತೆಯೂ ಸೂಚನೆ ನೀಡಿದ್ದಾರೆ.
ಪೇದೆಗೆ ಚಾಕು ಇರಿತ: ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್
ಮೂರಕ್ಕೂ ಹೆಚ್ಚು ವರ್ಷಗಳಿಂದ ರೌಡಿ ಚಟುವಟಿಕೆಗಳಲ್ಲಿ ಭಾಗಿ ಆಗದವರ ಹೆಸರನ್ನು ತೆರವುಗೊಳಿಸಲು ಸೂಚಿಸಿದ್ದಾರೆ. ಪೆರೇಡ್ ವೇಳೆ ಕುಮಾರಸ್ವಾಮಿ ಲೇಔಟ್ ರೌಡಿ ಶೀಟರ್ ಕತೆಯೂ ಬೆಳಕಿಗೆ ಬಂದಿದೆ. ಆತ ತನ್ನ ಮನೆಯಲ್ಲೇ ಚಿನ್ನಾಭರಣ ಕದ್ದಿದ್ದ, ಆತನ ಮೇಲಿದ್ದಿದ್ದು ಅದೊಂದೇ ಪ್ರಕರಣವಾಗಿದ್ದರೂ ಆತನ ಮೇಲೆ ರೌಡಿ ಶೀಟ್ ಹಾಕಲಾಗಿತ್ತು.
ಬನಶಂಕರಿಯ ರೌಡಿ ವಿಚಾರಣೆ ನಡೆಸಿದಾಗ ತನ್ನ ಮೇಲೆ ರೌಡಿ ಪಟ್ಟಿ ದಾಖಲಾಗಿ 10 ವರ್ಷವಾಗಿದೆ. ಯಾವುದೇ ದೊಡ್ಡ ಪ್ರಕರಣಗಳಲ್ಲಿ ತಾನು ಭಾಗಿಯಾಗಿಲ್ಲ ಎಂದ ಕೂಡಲೇ ಆತನ ಕ್ರಿಮಿನಲ್ ಹಿಸ್ಟರಿ ಎಲ್ಲವನ್ನೂ ತೆಗೆದ ಡಿಸಿಪಿ ಅವನ ಬಾಯಿ ಮುಚ್ಚಿಸಿದರು.