12ರ ಪೋರನ ಕನಸು ನನಸಾಗಿಸಿದ್ದ ಪೊಲೀಸ್ ಅಧಿಕಾರಿ ವಿಧಿವಶ
ಬೆಂಗಳೂರು, ಮಾರ್ಚ್ 05 : 12ರ ಪೋರನನ್ನು ಪೊಲೀಸ್ ಅಧಿಕಾರಿಯಾಗಿ ಮಾಡಿದ್ದ ಸಬ್ ಇನ್ಸ್ಪೆಕ್ಟರ್ ಟಿ.ಡಿ.ರಾಜು ವಿಧಿವಶರಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಎ.ಟಿ.ರಾಮಸ್ವಾಮಿ ವರದಿ ಅನುಷ್ಠಾನ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಎ.ಟಿ.ರಾಜು ಅವರು ಸೋಮವಾರ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ರಾಜು ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು.
ಈಶ್ವರಪ್ಪ ಪಿಎ ಅಪಹರಣ ಯತ್ನ ಕೇಸ್ : ಆರೋಪಿಗೆ ಗುಂಡೇಟು, ಬಂಧನ
ಫೆ.26ರಂದು ಟಿ.ಡಿ.ರಾಜು ಅವರು ಬೆಳಗ್ಗೆ ಕ್ಲಬ್ಗೆ ಹೋಗಿದ್ದರು. 7.45ರ ಸುಮಾರಿಗೆ ಮನೆಗೆ ಬೈಕ್ನಲ್ಲಿ ವಾಪಸ್ ಆಗುವಾಗ ಸಮೃದ್ಧಿ ಲೇಔಟ್ ಬಳಿ ಅವರ ಬೈಕ್ಗೆ ಶಾಲಾ ಬಸ್ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಸಾಗರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬೆಂಗಳೂರು : ಲಾಡ್ಜ್ನಲ್ಲಿ ಮಹಿಳೆ ಹತ್ಯೆ ಪ್ರಕರಣಕ್ಕೆ ವಿಚಿತ್ರ ತಿರುವು!
ಪೋರನ ಕನಸು ನನಸಾಗಿದ್ದರು : ಟಿ.ಡಿ.ರಾಜು ಅವರು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದಾಗ 12ರ ಪೋರನನ್ನು ಪೊಲೀಸ್ ಅಧಿಕಾರಿಯಾಗಿ ಮಾಡಿ, ಆತನ ಕನಸನ್ನು ಈಡೇರಿಸಿದ್ದರು.
ಬಿಎಚ್ಇಎಲ್ ಉದ್ಯೋಗಿ ಅನುಷಾ ಹತ್ಯೆ ಮಾಡಿದ್ದು ಭಾವ!
ಮಾರಾಣಾಂತಿಕ ರೋಗದಿಂದ ಬಳಲುತ್ತಿದ್ದ 12 ವರ್ಷದ ಬಾಲಕ ಶಶಾಂಕ್ಗೆ ಪೊಲೀಸ್ ಅಧಿಕಾರಿಯಾಗುವ ಆಸೆ ಇತ್ತು. ಆಗ ವಿ.ವಿ.ಪುರಂ ಠಾಣೆಗೆ ಬಾಲಕನನ್ನು ಕರೆದುಕೊಂಡು ಬಂದು ತಮ್ಮ ಖುರ್ಚಿಯ ಮೇಲೆ ಕೂರಿಸಿ, ಸಕಲ ಗೌರವನ್ನು ಟಿ.ಡಿ.ರಾಜು ನೀಡಿದ್ದರು.
ಟಿ.ಡಿ.ರಾಜು ಅವರ ಈ ಕಾರ್ಯಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ತಿಂಗಳು ವಿಶೇಷ ಕಾರ್ಯಪಡೆಗೆ ವರ್ಗಾವಣೆಯಾಗಿದ್ದ ಟಿ.ಡಿ.ರಾಜು ರಸ್ತೆ ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.