ಪೊಲೀಸರಿಗೆ ಚಾಕು ಇರಿತ, ರೌಡಿಶೀಟರ್ ಮೇಲೆ ಗುಂಡಿನ ದಾಳಿ
ಬೆಂಗಳೂರು, ಮಾರ್ಚ್ 22: ಪಿಎಸ್ಐಗೆ ಚಾಕುವಿನಿಂದ ಇರಿದ ಕಾರಣ ರೌಡಿ ಶೀಟರ್ ಮೇಲೆ ಪೊಲೀಸರು ಬೆಳ್ಳಂಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ರೌಡಿಶೀಟರ್ ಜಯಂತ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ನೆಲಮಂಗಲ ತಾಲೂಕಿನ ವೀರನಂಜೀಪುರ ಗೇಟ್ ಬಳಿ ಪಿಎಸ್ ಐ ಶಂಕರ್ ನಾಯಕ್ ಈ ಫೈರಿಂಗ್ ಮಾಡಿದ್ದಾರೆ.
ರೌಡಿ ಲಕ್ಷ್ಮಣ ಕೊಲೆಯ ಪ್ರಮುಖ ಆರೋಪಿ ಮೇಲೆ ಪೊಲೀಸ್ ಫೈರಿಂಗ್
ಜಯಂತ್ ಇರುವ ಖಚಿತ ಮಾಹಿತಿ ಪಡೆದು ಆತನನ್ನು ಹಿಡಿಯಲು ತೆರಳಿದ ಪಿಎಸ್ಐ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದ, ಬಳಿಕ ಪೊಲೀಸರು ಆತ್ಮ ರಕ್ಷಣೆಗೆಂದು ಗುಂಡು ಹಾರಿಸಿದ್ದಾರೆ.
ದಾಳಿಯಿಂದ ಗಾಯಗೊಂಡಿರುವ ಜಯಂತ್ ಗೆ ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪಿಎಸ್ ಐ ಕುಮಾರಸ್ವಾಮಿಯವರ ಎಡಗೈಗೆ ಗಾಯವಾಗಿದ್ದು, ಅವರು ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.
Comments
English summary
Police opened fire on a fleeing rowdy sheeter injuring him in the legs during a chase Nelamangala on Friday.