ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಗಲಿನಲ್ಲಿ ಸಾಚಾ ಚಾಲಕರು, ರಾತ್ರಿ ಹೊತ್ತು ಭಯಂಕರ ದರೋಡೆಕೋರರು

|
Google Oneindia Kannada News

ಬೆಂಗಳೂರು, ಜುಲೈ 2: ಹಗಲಿನಲ್ಲಿ ಸಾಮಾನ್ಯರಂತೆ ಕಾರು ಚಾಲನೆ ಮಾಡಿ ರಾತ್ರಿ ಹೊತ್ತು ದರೋಡೆಗಿಳಿಯುತ್ತಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

ಹೊರಮಾವು ನಿವಾಸಿ ಮುನಿಯಪ್ಪ(24), ರಾಜಶೇಖರ್ (23), ಶ್ರೀಕೃಷ್ಣ(19) ಬಂಧಿತರು.ಆರೋಪಿಗಳು ಹಗಲಿನಲ್ಲಿ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದು, ರಾತ್ರಿಯಾದರೆ ದರೋಡೆಗಿಳಿಯುತ್ತಿದ್ದರು. ಇವರು ಆವಲಹಳ್ಳಿ ಸುತ್ತ ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಂದ ಮೊಬೈಲ್‌ಗಳನ್ನು ದರೋಡೆ ನಡೆಸುತ್ತಿದ್ದರು. ಬಂಧಿತರಿಂದ 10 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ ಬೆಂಗಳೂರು-ಮೈಸೂರು ರೈಲಿನಲ್ಲಿ ದರೋಡೆ, ರೈಲು ಹತ್ತಲು ಆತಂಕ

ಮುನಿಯಪ್ಪನ ಹತ್ತಿರ ಹೋಂಡಾ ಡಿಯೋ ಇತ್ತು ಅದರಲ್ಲೇ ಮೂವರು ಓಡಾಡುತ್ತಾ ನಿರ್ಜನ ಪ್ರದೇಶಗಳಲ್ಲಿ ಹೊಂಚು ಹಾಕಿ ಮೊಬೈಲ್ ಕಳವು ಮಾಡುತ್ತಿದ್ದರು. ಪೊಲೀಸರು ನಾಕಾ ಬಂಧಿ ಹಾಕಿದ್ದು ಕಳ್ಳರು ಬಲೆಗೆ ಬಿದ್ದಿದ್ದಾರೆ. ಒಂದೇ ಬೈಕಿನಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿದಾಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅನುಮಾನ ಬಂದು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.

Police arrested car drivers who are involved in robbery

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಬೈಕಿನಲ್ಲಿ ಬಂದು ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗುವ ಗ್ಯಾಂಗ್‌ಗಳ ಹಾವಳಿ ವಿಪರೀತವಾಗಿದೆ. ಚರ್ಚ್ ಸ್ಟ್ರೀಟ್‌ ನ ಬ್ಲಾಸಮ್ ಬುಕ್ ಸ್ಟೋರ್ ಮುಂದೆ ನಿಂತಿದ್ದ ಮಹಿಳೆಯೊಬ್ಬರ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿರುವ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

English summary
Bengaluru police arrested three car drivers those who involved in robbery and mobile snatching cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X