ಬೆಂಗಳೂರಿಗೆ ಹೋಗುವ ಪ್ಲ್ಯಾನ್ ಇದೆಯೇ? ನೀವು ತಿಳಿಯಬೇಕಾಗಿದ್ದಿಷ್ಟು
ಬೆಂಗಳೂರು, ಜೂನ್ 17: ನೀವು ಬೆಂಗಳೂರಿಗೆ ಹೋಗಬೇಕು ಎಂದು ಆಲೋಚಿಸಿದ್ದೀರಾ ಹಾಗಾದರೆ ಪ್ರಸ್ತುತ ಕೋವಿಡ್ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲೇಬೇಕು.
ಕೊರೊನಾ ಸೋಂಕು ಸಂಪೂರ್ಣವಾಗಿ ಕಡಿಮೆಯಾಗದ ಹಿನ್ನೆಲೆಯಲ್ಲಿ ಕೊರೊನಾ ನಿಯಮವನ್ನು ಸಡಿಲಗೊಳಿಸಿದ್ದರೂ 144 ಸೆಕ್ಷನ್ ಜಾರಿಮಾಡಲಾಗಿದೆ ಇದು ಜೂನ್ 21ರವರೆಗೆ ಇರಲಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಲಾಗಿದೆ.
ಕರ್ನಾಟಕದಲ್ಲಿ ಒಂದೇ ದಿನ 7345 ಮಂದಿಗೆ ಕೊರೊನಾವೈರಸ್
ಬಸ್ನಿಲ್ದಾಣ, ಏರ್ಪೋರ್ಟ್, ರೈಲ್ವೆ ನಿಲ್ದಾಣಗಳಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ವೇಗದಲ್ಲಿ ಸ್ಥಿರತೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 7345 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾವೈರಸ್ ಹೊಸ ಪ್ರಕರಣಕ್ಕಿಂತ ಗುಣಮುಖರ ಸಂಖ್ಯೆ ಹೆಚ್ಚಾಗಿದೆ. ಒಂದು ದಿನದಲ್ಲಿ 17913 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 148 ಮಂದಿ ಬಲಿಯಾಗಿದ್ದಾರೆ.
ಬುಧವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2784355ಕ್ಕೆ ಏರಿಕೆಯಾಗಿದೆ. 33296 ಜನರು ಪ್ರಾಣ ಬಿಟ್ಟಿದ್ದು, ಈವರೆಗೂ 2599472 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 151566 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ ಕೋವಿಡ್ 19 ಮಾರ್ಗಸೂಚಿಯಲ್ಲೇನಿದೆ?
Recommended Video
-ಹೋಟೆಲ್ಹಾಗೂ
ರೆಸ್ಟೋರೆಂಟ್ಗಳು
ತೆರೆದಿರಲಿದ್ದು
ಪಾರ್ಸೆಲ್
ಸೇವೆ
ಲಭ್ಯ
-ಬಾರ್ಗಳಲ್ಲಿ
ಮಧ್ಯಾಹ್ನ
2ರವರೆಗೂ
ಮದ್ಯವನ್ನು
ಒಯ್ಯಲು
ಅವಕಾಶ
-ಎಲ್ಲಾ
ಮಳಿಗೆಗಳು
ಮಧ್ಯಾಹ್ನ
2
ಗಂಟೆಯವರೆಗೆ
ತೆರೆಯಬಹುದು
ಈ
ಮೊದಲು
10
ಗಂಟೆಯವರೆಗೆ
ಅವಕಾಶವಿತ್ತು
-ಎಲ್ಲಾ
ಕಟ್ಟಡ
ನಿರ್ಮಾಣ
ಕಾಮಗಾರಿಗಳಿಗೆ
ಅನುಮತಿ
-ಉದ್ಯಾನಗಳು
ಬೆಳಗಿನ
ಜಾವ
5
ರಿಂದ
2ರವರೆಗೆ
ತೆರೆದಿರುತ್ತದೆ
-ಬೀದಿ
ವ್ಯಾಪಾರಿಗಳು
ಬೆಳಗ್ಗೆ
6
ರಿಂದ
ಮಧ್ಯಾಹ್ನ
2
ಗಂಟೆವರೆಗೆ
ಅಂಗಡಿ
ತೆರೆಯಲು
ಅವಕಾಶ
-ಆಟೋ,
ಟ್ಯಾಕ್ಸಿಗಳಿಗೆ
ಅವಕಾಶ
ಇಬ್ಬರು
ಮಾತ್ರ
ಒಟ್ಟಿಗೆ
ಸಂಚರಿಸಬಹುದು