ಪಿಇಎಸ್ ಕ್ಯಾಂಪಸ್ ನೀರು ಖಾಲಿ, 21ರಿಂದ ತರಗತಿ
ಬೆಂಗಳೂರು, ಆ.18 : ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನನಲ್ಲಿ ಗುರುವಾರದಿಂದ ತರಗತಿಗಳು ಪುನಃ ಆರಂಭವಾಗಲಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕೆರೆ ಒಡೆದು ಕಾಲೇಜಿನ ಆವರಣದಲ್ಲಿ ತುಂಬಿಕೊಂಡಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ.
ಆ.15ರ
ಶುಕ್ರವಾರ
ರಾಯಸಂದ್ರ
ಕರೆ
ಒಡೆದ
ಪರಿಣಾಮ
ಅದರಲ್ಲಿ
ಸಂಗ್ರಹವಾಗಿದ್ದ
ಕೊಳಚೆ
ನೀರು
ಹರಿದು
ಹೊರಬಂದಿತ್ತು.
ಕೆರೆ
ಪಕ್ಕದಲ್ಲೇ
ಇರುವ
ಪಿಇಎಸ್
ಕಾಲೇಜು
ಸ್ವಲ್ಪ
ತಗ್ಗು
ಪ್ರದೇಶದಲ್ಲಿ
ಇರುವುದರಿಂದ
ಇಡೀ
ಆವರಣದೊಳಗೆ
ನೀರು
ಸಂಗ್ರಹವಾಗಿತ್ತು.
ಕಾಲೇಜಿನ ಪಾರ್ಕಿಂಗ್ ಪ್ರದೇಶ, ಕೆಳ ಮಹಡಿಯ ಕೆಲ ಕೊಠಡಿಗಳು, ಆವರಣದಲ್ಲಿ ನಿಂತಿದ್ದ ವಾಹನಗಳು ಸಂಪೂರ್ಣ ಜಲಾವೃತಗೊಂಡಿದ್ದವು. 30 ಪಂಪ್ ಸೆಟ್ಗಳ ಮುಖಾಂತರ ಮೂರು ದಿನ ನಿರಂತರ ಕಾರ್ಯಾಚರಣೆ ನಡೆಸಿ ನೀರನ್ನು ಹೊರಹಾಕಲಾಗಿದೆ.
ಕಾಲೇಜಿನ ಕ್ಯಾಂಪಸ್ ನಾಲ್ಕು ಬ್ಲಾಕ್ಗಳ ಆವರಣದಲ್ಲಿದ್ದ ನೀರನ್ನು ಹೊರಹಾಕಲಾಗಿದ್ದು, ಆ.21ರ ಗುರುವಾರದಿಂದ ತರಗತಿಗಳು ಆರಂಭವಾಗಲಿವೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ನೀರು ಹರಿದುಬಂದಿದ್ದರಿಂದ ಆವರಣದಲ್ಲಿ ತ್ಯಾಜ್ಯಗಳು ತುಂಬಿಹೋಗಿದ್ದವು. ಸದ್ಯ ಆವರಣವನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ.
ಕಾಲೇಜು ಅವರಣದಲ್ಲಿರುವ ವಸತಿ ನಿಲಯದಲ್ಲಿ 200 ವಿದ್ಯಾರ್ಥಿಗಳು ವಾಸವಾಗಿದ್ದರು. ಕಾಲೇಜು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಆ ವಿದ್ಯಾರ್ಥಿಗಳನ್ನು ಬೋಟ್ಗಳ ಮೂಲಕ ಕಾಲೇಜು ಆವರಣದಿಂದ ಹೊರಗೆ ಕರೆತಂದು ಬನಶಂಕರಿ ರಿಂಗ್ ರಸ್ತೆಯಲ್ಲಿರುವ ಪಿಇಎಸ್ಐಟಿಗೆ ಹಾಸ್ಟೆಲ್ಗೆ ಸ್ಥಳಾಂತರಿಸಲಾಗಿತ್ತು.