ಪೀಣ್ಯ ಕೈಗಾರಿಕೆ ವಲಯ ಅಭಿವೃದ್ಧಿಗೆ 500 ಕೋಟಿ ರೂ. ನೀಡಲು ಸಿಎಂಗೆ ಮನವಿ
ಬೆಂಗಳೂರು,
ಫೆಬ್ರವರಿ,
26:
ಕರ್ನಾಟಕದ
2022-23ನೇ
ಸಾಲಿನ
ಮುಂಗಡ
ಪತ್ರದಲ್ಲಿ
ಪೀಣ್ಯ
ಕೈಗಾರಿಕೆ
ವಲಯದ
ಸಮಗ್ರ
ಅಭಿವೃದ್ಧಿಗೆ
500
ಕೋಟಿ
ರೂಪಾಯಿ
ಒದಗಿಸುವಂತೆ
ಪೀಣ್ಯ
ಕೈಗಾರಿಕಾ
ಸಂಘ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿಯವರಿಗೆ
ಒತ್ತಾಯಿಸಿದೆ.
ವಿಧಾನಸೌಧದ
ಸಮ್ಮೇಳನ
ಸಭಾಂಗಣದಲ್ಲಿ
ಮುಖ್ಯಮಂತ್ರಿ
ಜೊತೆ
ಬಜೆಟ್
ಪೂರ್ವಭಾವಿ
ಸಭೆಯಲ್ಲಿ
ಪೀಣ್ಯ
ಕೈಗಾರಿಕಾ
ಸಂಘದ
ಅಧ್ಯಕ್ಷ
ಮುರಳಿ
ಕೃಷ್ಣ,
ಗೌರವ
ಕಾರ್ಯದರ್ಶಿ
ಆರ್.
ಶಿವಕುಮಾರ್
ನೇತೃತ್ವದ
ತಂಡ
ಸಣ್ಣ
ಕೈಗಾರಿಕಾ
ವಲಯ
ಎದುರಿಸುತ್ತಿರುವ
ಸಮಸ್ಯೆಗಳ
ಕುರಿತು
ಬೆಳಕು
ಚೆಲ್ಲಿತು.
ರಾಜ್ಯದ
ಆರ್ಥಿಕ,
ಕೈಗಾರಿಕಾಭಿವೃದ್ಧಿ,
ಉದ್ಯೋಗ
ಒದಗಿಸುವಲ್ಲಿ
ಪೀಣ್ಯ
ಕೈಗಾರಿಕೆ
ವಲಯವು
ಮಹತ್ವದ
ಪಾತ್ರ
ನಿರ್ವಹಿಸುತ್ತಿದೆ
ಎಂದು
ಉಲ್ಲೇಖಿಸಿತು.
ಪೀಣ್ಯ ಫ್ಲೈ ಓವರ್ ವಾಹನ ಸಂಚಾರ; ಸಿಎಂ ಕೊಟ್ರು ಬ್ರೇಕಿಂಗ್ ನ್ಯೂಸ್
ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಪೀಣ್ಯ ಕೈಗಾರಿಕಾ ವಲಯ ತತ್ತರಿಸಿದೆ. ಸಾಕಷ್ಟು ಉದ್ಯೋಗಿಗಳು ನಗರವನ್ನು ತೊರೆದು ಹೋಗಿದ್ದಾರೆ. ಆಗ್ನೇಯ ಏಷ್ಯಾದ 100ಕ್ಕೂ ಹೆಚ್ಚು ದೊಡ್ಡ ಕೈಗಾರಿಕೆಗಳು, 8.500ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪೀಣ್ಯ ಒಳಗೊಂಡಿದೆ. ವಾರ್ಷಿಕ 20 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. 2,600 ಕೋಟಿ ರೂಗಿಂತ ಹೆಚ್ಚು ಆದಾಯವನ್ನು ಕೇಂದ್ರ ಹಾಗೂ ರಾಜ್ಯದ ಬೊಕ್ಕಸಕ್ಕೆ ನೀಡುತ್ತಿದೆ ಎಂದು ತಿಳಿಸಿತು.
ಜಿಎಸ್
ಟಿ
ಕಡಿತಕ್ಕೆ
ಒತ್ತಾಯ:
ಉಕ್ಕು,
ಪ್ಲಾಸ್ಟಿಕ್,
ರಾಸಾಯನಿಕಗಳು,
ತಾಮ್ರ,
ಅಲ್ಯೂಮಿನಿಯಂ,
ವಿದ್ಯುನ್ಮಾನ
ವಲಯದ
ಕಚ್ಚಾ
ವಸ್ತುಗಳ
ಬೆಲೆ
ಹೆಚ್ಚಳದಿಂದ
ಎಂ.ಎಸ್.ಎಂ.ಇ
ಕ್ಷೇತ್ರ
ತೀವ್ರ
ಸಂಕಷ್ಟದಲ್ಲಿದೆ.
ಕೂಡಲೇ
ಈ
ವಸ್ತುಗಳಿಗೆ
ಇನ್ಪುಟ್
ತೆರಿಗೆ
ಮತ್ತು
ಜಿ.ಎಸ್.ಟಿ
ಕಡಿತಗೊಳಿಸಬೇಕು
ಎಂದು
ಸಂಘ
ಆಗ್ರಹಿಸಿದೆ.
ಮೂಲ
ಸೌಕರ್ಯ
ಕಲ್ಪಿಸಲು
ಮನವಿ:
ಬೆಂಗಳೂರಿನ
ಪೀಣ್ಯ
ಕೈಗಾರಿಕಾ
ವಲಯಕ್ಕೆ
ಹೆಚ್ಚಿನ
ಮೂಲ
ಸೌಕರ್ಯ
ಕಲ್ಪಿಸಬೇಕು.
ಕೆಂಗೇರಿ,
ಉಲ್ಲಾಳ,
ಸುಂಕದಕಟ್ಟೆ,
ಪೀಣ್ಯ,
ಹೆಬ್ಬಾಳ,
ಯಲಹಂಕಕ್ಕಾಗಿ
ಮೆಟ್ರೋ
ರೈಲುಗಳ
ಮಾರ್ಗವನ್ನು
ನಿರ್ಮಿಸಬೇಕು.
ಪೀಣ್ಯ
ವಲಯದಲ್ಲಿ
ಹತ್ತು
ಲಕ್ಷ
ಕಾರ್ಮಿಕರು
ಕೆಲಸ
ಮಾಡುತ್ತಿದ್ದು,
ಇಲ್ಲಿ
ನಾಲ್ಕು
ಲಕ್ಷ
ಮಹಿಳೆಯರು
ಕಾರ್ಯ
ನಿರ್ವಹಿಸುತ್ತಿದ್ದಾರೆ.
ಕಾರ್ಮಿಕರು
ಹೆಚ್ಚಿನ
ಪ್ರಮಾಣದಲ್ಲಿ
ಮೆಟ್ರೋ
ರೈಲು
ಬಳಕೆ
ಮಾಡಲು
ಇದರಿಂದ
ಸಹಕಾರಿಯಾಗಲಿದೆ.
ರೈಲು
ಸೇವೆ
ದೊರೆತರೆ
ಪೀಣ್ಯ
ವಲಯದಲ್ಲಿ
ಉದ್ಯೋಗಿಗಳ
ಸಂಖ್ಯೆ
ಹೆಚ್ಚಾಗಲಿದೆ.
ರಸ್ತೆಗಳ
ಸುಧಾರಣೆ,
ಒಳಚರಂಡಿ
ನಿರ್ಮಾಣದ
ಜತೆಗೆ
ಆಸ್ತಿ
ತೆರಿಗೆ
ದರ
ಇಳಿಸಬೇಕು
ಎಂದು
ಕೋರಿದೆ.
ಪೀಣ್ಯ
ಕೈಗಾರಿಕಾ
ಪ್ರಾಧಿಕಾರ
ಸ್ಥಾಪನೆಗೆ
ಒತ್ತಾಯ:
ವಿದ್ಯುತ್
ಪರಿಷ್ಕರಣೆ
ಮಾಡಬಾರದು,
ಕ್ರಾಸ್
ಸಬ್ಸಿಡಿಯನ್ನು
ಕಡಿಮೆ
ಮಾಡಬೇಕು.
ಎರಡು
ದಶಕಗಳಿಂದ
ಒತ್ತಾಸೆಯಾಗಿಯೇ
ಉಳಿದಿರುವ
"ಪೀಣ್ಯ
ಕೈಗಾರಿಕಾ
ಪ್ರಾಧಿಕಾರ"ವನ್ನು
ಕೂಡಲೇ
ಸ್ಥಾಪಿಸಬೇಕು.
ಮುಖ್ಯಮಂತ್ರಿಯಾಗಿದ್ದ
ಬಿ.ಎಸ್.
ಯಡಿಯೂರಪ್ಪ
ಅವರು
2021-22ನೇ
ಸಾಲಿನಲ್ಲಿ
ಮಂಡಿಸಿದ
ಬಜೆಟ್
ನಲ್ಲಿ
ಪ್ರಾಧಿಕಾರ
ಸ್ಥಾಪನೆಗೆ
100
ಕೋಟಿ
ರೂಪಾಯಿ
ಮಂಜೂರು
ಮಾಡಿದ್ದು,
ಮಾರ್ಚ್
ತಿಂಗಳಿನಲ್ಲಿ
ಮಂಡಿಸಲಿರುವ
ಮುಂಗಡ
ಪತ್ರದಲ್ಲಿ
ಹೆಚ್ಚಿನ
ನೆರವು
ಮಂಜೂರು
ಮಾಡಬೇಕು
ಎಂದು
ಮುಖ್ಯಮಂತ್ರಿಗೆ
ಮುರಳಿ
ಕೃಷ್ಣ
ಮನವಿ
ಮಾಡಿದರು.
Recommended Video
ಕೆ.ಎಸ್.ಎಸ್.ಐ.ಡಿ.ಸಿ
ನಿವೇಶನ
ಹಂಚಿಕೆಯಲ್ಲಿ
ಮೀಸಲಾತಿ:
ಕೆ.ಎಸ್.ಎಸ್.ಐ.ಡಿ.ಸಿಯಿಂದ
ಕಳೆದ
25
ವರ್ಷಗಳಿಂದ
ನಿವೇಶನ
ಹಂಚಿಕೆ
ಮಾಡಿಲ್ಲ.
ಮುಂಬರುವ
ದಿನಗಳಲ್ಲಿ
ಕೆ.ಐ.ಎ.ಡಿ.ಬಿ
ಮಂಜೂರು
ಮಾಡುವ
ನಿವೇಶನಗಳಲ್ಲಿ
ಸಣ್ಣ,
ಮದ್ಯಮ
ಉದ್ಯಮ
ವಲಯಕ್ಕೆ
ಶೇ
30
ರಷ್ಟು
ನಿವೇಶನಗಳನ್ನು
ಮೀಸಲಿಡಬೇಕು.
ಸಣ್ಣ
ಕೈಗಾರಿಕೆಗಳು
ತೊಂದರೆಯಲ್ಲಿದ್ದು,
ರಾಜ್ಯ
ಸರ್ಕಾರ
ಸಮಾಧಾನಕರ
ಯೋಜನೆಯನ್ನು
2022ರ
ಆಗಸ್ಟ್
ಅಂತ್ಯದವರೆಗೆ
ವಿಸ್ತರಿಸಬೇಕು.
ಪೀಣ್ಯ
2ನೇ
ಹಂತದಲ್ಲಿ
ಸ್ಯಾಟಲೈಟ್
ಬಸ್
ನಿಲ್ದಾಣ
ನಿರ್ಮಿಸಬೇಕು
ಹಾಗೂ
ಪೀಣ್ಯದಲ್ಲಿ
ಕೌಶಲ್ಯ
ಅಭಿವೃದ್ಧಿ
ಮತ್ತು
ಉದ್ಯಮಶೀಲತೆ
ಅಭಿವೃದ್ಧಿ
ಕೇಂದ್ರದ
ನಿರ್ಮಾಣಕ್ಕೆ
ಆರ್ಥಿಕ
ನೆರವು
ನೀಡಬೇಕು
ಎಂದು
ನಿಯೋಗ
ಮನವಿ
ಮಾಡಿದೆ.