ಜಯನಗರದಲ್ಲಿ ನಾಳೆ ಪಟಾಲಮ್ಮ ದೇವಿ ಮಹೋತ್ಸವ
ಬೆಂಗಳೂರು, ಮೇ 14: ಶ್ರೀ ಪಟಾಲಮ್ಮ ದೇವಸ್ಥಾನ ಟ್ರಸ್ಟ್ ಹಾಗೂ ಕನಕಪಾಳ್ಯ, ಸಿದ್ದಾಪುರ, ಬೈರಸಂದ್ರ, ಯಡಿಯೂರು ಸಹಕಾರದೊಂದಿಗೆ ಮೇ 15ರಂದು ಪಟಾಲಮ್ಮ ದೇವಿ ಮಹೋತ್ಸವ ನೆರವೇರಲಿದೆ.
ಜಯನಗರ 2ನೇ ಬ್ಲಾಕ್ ಸೇರಿ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸಾಗಲಿದೆ. ಮಹೋತ್ಸವಕ್ಕೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.ಬೆಳಗ್ಗೆ 11 ಗಂಟೆಗೆ ದೇವಾಲಯದಲ್ಲಿ ಭಕ್ತರಿಗೆ ಅಗ್ನಿಕುಂಡ ಪ್ರವೇಶಕ್ಕೆ ಅವಕಾಶವಿರಲಿದೆ.
ಕನಕಪಾಳ್ಯ 9ನೇ ಮುಖ್ಯರಸ್ತೆಯಿಂದ ಜಯನಗರ 2ಬ್ಲಾಕ್ ಸೇರಿ ಪ್ರಮುಖ ಬೋದಿಗಳಲ್ಲಿ ಪಲ್ಲಕ್ಕಿ ಸಾಗಲಿದೆ. 300 ಮಂದಿ ಕಲಾವಿದರಿಂದ ವೀರಗಾಸೆ, ಯಕ್ಷಗಾನ, ಕೀಲುಕುದುರೆ, ಲಂಬಾಣಿ ನೃತ್ಯ, ಸೋಲಿಗರ ನೃತ್ಯ, ಬೀಸು ಕಂಸಾಳೆ ಪ್ರದರ್ಶನ ನಡೆಯಲಿದೆ. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
Comments
English summary
Patalamma Devi Mahotsav in Jayanagar on May 15 Wednesday. Chief minister HD Kumaraswamy will inaugurate Shri Patalamma Mahotsava procession In Kanakapalya.
Story first published: Tuesday, May 14, 2019, 14:38 [IST]