ಬಿಬಿಎಂಪಿ ವಿಭಜನೆ ಅನಿವಾರ್ಯ : ಸಮಿತಿ ವರದಿ
ಬೆಂಗಳೂರು, ಡಿ. 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವಿಭಜನೆ ಅನಿವಾರ್ಯ ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಅವರ ಅಧ್ಯಕ್ಷತೆಯ ಮೂವರು ಸದಸ್ಯರ ಸಮಿತಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಅಂತಿಮ ವರದಿ ನೀಡಲು ಆರು ತಿಂಗಳ ಕಾಲಾವಕಾಶ ಕೋರಿದೆ.
ಬಿಬಿಎಂಪಿ
ವಿಭಜನೆ
ಮಾಡುವ
ಕುರಿತು
ವರದಿ
ನೀಡಲು
ಸರ್ಕಾರ
ರಚಿಸಿರುವ
ಬಿ.ಎಸ್.ಪಾಟೀಲ್
ನೇತೃತ್ವದ
ಸಮಿತಿ
ಮಂಗಳವಾರ
ಸಿಎಂ
ಸಿದ್ದರಾಮಯ್ಯ
ಅವರಿಗೆ
ಮಧ್ಯಂತರ
ವರದಿಯನ್ನು
ಸಲ್ಲಿಕೆ
ಮಾಡಿತು.
ಪಾಲಿಕೆ
ವಿಭಜನೆ
ಅನಿವಾರ್ಯ
ಎಂದು
ವರದಿಯಲ್ಲಿ
ತಿಳಿಸಲಾಗಿದೆ.
[ಬಿಬಿಎಂಪಿ
ವಿಭಜನೆ
ನಿರ್ಧಾರಕ್ಕೆ
ಸದಸ್ಯರ
ವಿರೋಧ]
2007 ರಲ್ಲಿ 226 ಚ.ಕಿ.ಮೀ ವ್ಯಾಪ್ತಿ ಹಾಗೂ 65 ಲಕ್ಷ ಜನಸಂಖ್ಯೆ ಹೊಂದಿದ್ದ ಬೆಂಗಳೂರು ಏಳು ಪುರಸಭೆಗಳು, ಒಂದು ಪಟ್ಟಣ ಪಂಚಾಯಿತಿ ಹಾಗೂ 110 ಹಳ್ಳಿಗಳ ಸೇರ್ಪಡೆಯಿಂದ 800 ಚ.ಕಿ.ಮೀ ವ್ಯಾಪ್ತಿ ಹಾಗೂ 1 ಕೋಟಿಗೂ ಮೀರಿದ ಜನಸಂಖ್ಯೆ ಹೊಂದಿರುವ ನಗರವಾಗಿದೆ. [ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ?]
ಆದ್ದರಿಂದ ನಗರಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಹಾಗೂ ಪರಿಣಾಮಕಾರಿ ಆಡಳಿತ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವುದು ಅನಿವಾರ್ಯ ಎಂದು ಸಮಿತಿ ವರದಿಯಲ್ಲಿ ಸ್ಪಷ್ಟಪಡಿಸಿದೆ. [ಪಾಲಿಕೆ ವಿಭಜನೆ, ಮೇಯರ್ ಹೇಳುವುದೇನು?]
ಮಧ್ಯಂತರ ವರದಿ ಸಲ್ಲಿಸಿದ ನಂತರ ಮಾತನಾಡಿದ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಅವರು, ಸುಗಮ ಆಡಳಿತ ನಿರ್ವಹಣೆಗೆ ಬಿಬಿಎಂಪಿ ವಿಭಜನೆ ಅಗತ್ಯವಾಗಿದೆ. ಪಾಲಿಕೆಯನ್ನು ಯಾವ ರೀತಿ ಪುನಾರಚನೆ ಮಾಡಬೇಕು ಹಾಗೂ ಎಷ್ಟು ಭಾಗ ವಿಭಜನೆ ಮಾಡಬೇಕು ಎಂಬುದರ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿ ಅಂತಿಮ ವರದಿ ಸಲ್ಲಿಸಲಾಗುತ್ತದೆ ಎಂದರು.
ಆರು ತಿಂಗಳ ಕಾಲಾವಕಾಶ : ಬಿಬಿಎಂಪಿಯನ್ನು ಎಷ್ಟು ಭಾಗಗಳಾಗಿ, ಹೇಗೆ ವಿಭಜನೆ ಮಾಡಬೇಕು ಎಂಬುದನ್ನು ಅಧ್ಯಯನ ಮಾಡಲು ಆರು ತಿಂಗಳ ಕಾಲಾವಕಾಶ ಬೇಕು ಎಂದು ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ ಏಪ್ರಿಲ್ನಲ್ಲಿ ನಡೆಯುವ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಸಾಧ್ಯತೆ ಇದೆ.
ಅಂದಹಾಗೆ ತ್ರಿ ಸದಸ್ಯರ ಸಮಿತಿಯಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್, ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್ನ ಸದಸ್ಯ ರವಿಚಂದರ್ ಇದ್ದಾರೆ.