ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜೆಪಿಯ ಪದ್ಮನಾಭ ಪ್ರಸನ್ನ ಮುಖಕ್ಕೆ ಮಸಿ!

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರ ಮೇಲೆ ಶುಕ್ರವಾರ ಹಲ್ಲೆ ಯತ್ನ ನಡೆದಿದೆ. ಪ್ರಸನ್ನ ಅವರ ಮುಖಕ್ಕೆ ಕಿಡಿಗೇಡಿಗಳು ಆಯಿಲ್ ಹಾಕಿದ್ದಾರೆ.

ಶುಕ್ರವಾರ ಮಧ್ಯಾಹ್ನ ಪ್ರಸನ್ನ ಅವರು ಬೆಂಗಳೂರು ಪ್ರೆಸ್ ಕ್ಲಬ್ಬಿಗೆ ಆಗಮಿಸುತ್ತಿದ್ದ ವೇಳೆ ಕಿಡಿಗೇಡಿಗಳು ವಾಹನದ ಇಂಜಿನ್ ಆಯಿಲ್ ತಂದು ಪದ್ಮನಾಭ ಅವರ ಮುಖಕ್ಕೆ ಎರಚಿದರು. ಏಕಾಏಕಿ ದಾಳಿಯಿಂದ ಗಾಬರಿಗೊಂಡ ಪ್ರಸನ್ನ ಅವರಿಗೆ ಏನು ಮಾಡಲು ತೋಚದೆ ಹಾಗೆ ನಿಂತಿದ್ದರು.

Padmanabha Prasanna Kumar of the Karnataka Janata Party attacked

ನಂತರ ಘಟನೆ ಬಗ್ಗೆ ಮಾತನಾಡಿದ ಪ್ರಸನ್ನ ಅವರು ಇದು ಯಡಿಯೂರಪ್ಪ ಬೆಂಬಲಿಗರ ಕೃತ್ಯ. ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಅವರ ನಡುವಿನ ಸಂಬಂಧದ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂಬುದನ್ನು ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ. ಧೈರ್ಯವಿದ್ದರೆ ಎದುರಿಗೆ ಬಂದು ದಾಳಿ ಮಾಡಿ ಈ ರೀತಿ ಹಿಂದಿನಿಂದ ಚೂರಿ ಹಾಕಬೇಡಿ ಎಂದು ಪ್ರಸನ್ನ ಗುಡುಗಿದರು.
English summary
Padmanabha Prasanna Kumar of the Karnataka Janata Party attacked at Bengaluru press club today. He was about to reveal about the relationship between Shobha karandlaje and Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X