ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ಇಂಡಿಯಾ ಭದ್ರತಾ ಅಧಿಕಾರಿಗೆ ದೇವರನಾಮ ಸ್ಪರ್ಧೆಯಲ್ಲಿ ಬಹುಮಾನ

|
Google Oneindia Kannada News

ಬೆಂಗಳೂರು, ಆಗಸ್ಟ್ 8: ಇಲ್ಲಿನ ಎನ್.ಆರ್.ಕಾಲೋನಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಜೃಂಭಣೆ ಹಾಗೂ ಶ್ರದ್ಧೆ-ಭಕ್ತಿಯಿಂದ ರಾಯರ ಆರಾಧನೆ ಆರಂಭವಾಗಿದೆ. ಆರಾಧನೆಯ ಮುಂಚಿತವಾಗಿಯೇ ಅಂದರೆ ಕಳೆದ ಶನಿವಾರದಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಿವೆ.

ಆರಾಧನೆಗೆ ಮಂತ್ರಾಲಯಕ್ಕೆ ಲಕ್ಷ ಭಕ್ತರ ನಿರೀಕ್ಷೆ, ಸಿದ್ಧತೆ ಪೂರ್ಣಆರಾಧನೆಗೆ ಮಂತ್ರಾಲಯಕ್ಕೆ ಲಕ್ಷ ಭಕ್ತರ ನಿರೀಕ್ಷೆ, ಸಿದ್ಧತೆ ಪೂರ್ಣ

ಆಗಸ್ಟ್ 11ನೇ ತಾರೀಕಿನವರೆಗೆ ಇದು ಮುಂದುವರಿಯಲಿದೆ. ಬಾಕಿ ಇರುವ ಮೂರು ದಿನಗಳ ಕಾರ್ಯಕ್ರಮಗಳ ವಿವರ ಇಂತಿದೆ.

Oneindia security officer won competition in Raghavendra Swamy mutt

ಮಧ್ಯಾರಾಧನೆ, ಆಗಸ್ಟ್ 9, ಬುಧವಾರ, ಬೆಳಗ್ಗೆ 8 ರಿಂದ 11

ಹಯವದನ ವಾದಿರಾಜ ಭಜನಾ ಮಂಡಲಿಯಿಂದ ಭಜನೆ

ನಾಟ್ಯ ಮಂಜರಿ ಸಂಸ್ಥೆ ವಿದ್ಯಾರ್ಥಿನಿಯರಿಂದ 'ಭಕ್ತಿ ಕುಸುಮಾಂಜಲಿ' ಭರತನಾಟ್ಯ

ದ್ವಾದಶಿ ಸಂಘದಿಂದ ಭಜನೆ

ಸಂಜೆ 5.30ಕ್ಕೆ ಮಹಾಭಾರತ ತಾತ್ಪರ್ಯ ನಿರ್ಣಯ ಭಾವ ಸಂಗ್ರಹ- ರುಚಿರಾ ಚಾರ್ಯರು

ರಾತ್ರಿ 7ಕ್ಕೆ ಲಯ ಲಹರಿ- ಅನೂರು ಅನಂತಕೃಷ್ಣ ಶರ್ಮ ಮತ್ತು ಬಳಗದಿಂದ

ಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ

ಉತ್ತರಾರಾಧನೆ, ಆಗಸ್ಟ್ 10, ಗುರುವಾರ, ಬೆಳಗ್ಗೆ 8 ರಿಂದ 11

ಗಾಯನ: ಸುಶ್ರಾವ್ಯ ಆಚಾರ್ಯ

ಗಾಯನ: ವಿ.ವೀಣಾ

ಬೆಳಗ್ಗೆ 11.15ರಿಂದ ಸಾಮೂಹಿಕ ಕನಕಾಭಿಷೇಕ

ಸಂಜೆ 5.30ಕ್ಕೆ ಪ್ರವಚನ: ಉಪನಿಷತ್ ಪ್ರಸ್ಥಾನಕ್ಕೆ ರಾಯರ ಕೊಡುಗೆ- ಹರಿದಾಸ ಭಟ್ಟರು

ರಾತ್ರಿ 7ಕ್ಕೆ ಸಂಗೀತ ಲಹರಿ- ವಿದ್ವಾನ್ ಮೈಸೂರು ನಾಗರಾಜ್ ಮತ್ತು ವಿದ್ವಾನ್ ಡಾ ಮೈಸೂರು ಮಂಜುನಾಥ್

ಅಮೆರಿಕದ ಬೋಸ್ಟನ್ ನಲ್ಲಿ ಆಗಸ್ಟ್ 12ರಂದು ರಾಯರ ಆರಾಧನೆಅಮೆರಿಕದ ಬೋಸ್ಟನ್ ನಲ್ಲಿ ಆಗಸ್ಟ್ 12ರಂದು ರಾಯರ ಆರಾಧನೆ

ಆಗಸ್ಟ್ 11, ಶುಕ್ರವಾರ, ಬೆಳಗ್ಗೆ 8 ರಿಂದ 11

ಗಾಯನ: ವಿಕಾಸ್ ವಶಿಷ್ಠ ಅವರಿಂದ ದೇವರನಾಮಗಳು

ಗಾಯನ: ದೀಪ್ತಿ ಪ್ರಸನ್ನ ಮತ್ತು ಕರ್ನಲ್ ಪ್ರಸನ್ನ

ಭಜನೆ: ವಾಣಿ ಮಹಿಳಾ ವೃಂದದಿಂದ

ಸಂಜೆ 4ಕ್ಕೆ ಸಮಾರೋಪ ಸಮಾರಂಭ

ಸುವಿದ್ಯೇಂದ್ರ ತೀರ್ಥರಿಂದ ಆಶೀರ್ವಚನ ಹಾಗೂ ಮಹನೀಯರಿಗೆ ಸನ್ಮಾನ

ಸಂಜೆ 5.30ಕ್ಕೆ ಪ್ರವಚನ: ರಾಮ ಚಾರಿತ್ರ್ಯ ಮಂಜರಿ- ಬ್ರಹ್ಮಣ್ಯತೀರ್ಥಾಚಾರ್ ರಿಂದ

ರಾತ್ರಿ 7ಕ್ಕೆ ಹರಿನಾಮ ಸಂಕೀರ್ತನೆ ಗಾಯನ- ವಾಚನ

ಒನ್ಇಂಡಿಯಾ ಭದ್ರತಾ ಅಧಿಕಾರಿಗೆ ಬಹುಮಾನ
ಜುಲೈ ಇಪ್ಪತ್ಮೂರರಂದು ರಾಯರ ಮಠದಲ್ಲಿ ನಡೆದಿದ್ದ ದೇವರ ನಾಮ, ಭಕ್ತಿಗೀತೆ ಸ್ಪರ್ಧೆಯಲ್ಲಿ ಒನ್ಇಂಡಿಯಾ ಭದ್ರತಾ ಅಧಿಕಾರಿ ಎಚ್.ಎಲ್.ಮಂಜು ಅವರು (ನಲವತ್ತರಿಂದ ಅರವತ್ತರ ವಯೋಮಾನದ ವಿಭಾಗ) ಪ್ರಥಮ ಬಹುಮಾನ ಪಡೆದಿದ್ದಾರೆ. ಪುರಂದರ ದಾಸರ ಗೀತೆಯೊಂದನ್ನು ಹಾಡಿದ್ದರು.

ಆಗಸ್ಟ್ 11ರ ಶುಕ್ರವಾರದಂದು ಸುವಿದ್ಯೇಂದ್ರ ತೀರ್ಥರು ಬಹುಮಾನ ವಿತರಣೆ ಮಾಡಲಿದ್ದಾರೆ.

English summary
HL Manju, security officer in Oneindia office won Bhakti Geete competition organised in NR Colony Raghavendra mutt, Bengaluru. Prize will be distribute on August 11th by Suvidyendra Teertha swamiji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X