ಬೆಂಗಳೂರಲ್ಲಿ ಹೈ ಅಲರ್ಟ್: ಪೊಲೀಸರು ಕೈಗೊಂಡ ಕ್ರಮಗಳೇನು?
ಬೆಂಗಳೂರು, ಆಗಸ್ಟ್ 17: ದೇಶದ ನಾಲ್ಕು ನಗರಗಳ ಮೇಲೆ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಪೊಲೀಸರು ಏನೇನು ಕ್ರಮ ಕೈಗೊಂಡಿದ್ದಾರೆ ಎನ್ನುವ ಕುರಿತ ಮಾಹಿತಿ ಇಲ್ಲಿದೆ.ನಗರದಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿದೆಯೇ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
ಗುಪ್ತಚರ ಇಲಾಖೆ ವರದಿ : ಬೆಂಗಳೂರಿನಲ್ಲಿ ಹೈ ಅಲರ್ಟ್
ನಗರದ ಪ್ರಮುಖ ಪ್ರದೇಶಗಳಾದ ಮೆಟ್ರೋ ನಿಲ್ದಾಣ, ಮಾಲ್, ವಿಧಾನಸೌಧ, ಹೈಕೋರ್ಟ್, ಬಸ್ ನಿಲ್ದಾಣ, ವಿಕಾಸಸೌಧ ಸೇರಿದಂತೆ ಜನನಿಬೀಡ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ಗೃಹ ಇಲಾಖೆ ಬೆಂಗಳೂರು ನಗರ ಪೊಲೀಸರಿಗೆ ಗುಪ್ತಚರ ಇಲಾಖೆ ವರದಿ ಅನ್ವಯ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು.
ಆದ್ದರಿಂದ, ತಕ್ಷಣದಿಂದಲೇ ನಗರದಲ್ಲಿ ಭದ್ರತೆ ಹೆಚ್ಚಳ ಮಾಡಲು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು.
-ಮುಂದಿನ
ಸೂಚನೆ
ಬರುವವರೆಗೂ
ನಗರಾದ್ಯಂತ
ಹೆಚ್ಚಿನ
ಪೊಲೀಸರ
ವ್ಯವಸ್ಥೆ
ಮಾಡಲಾಗಿದ್ದು,
ಗಸ್ತು
ತಿರುಗುತ್ತಿರುತ್ತಾರೆ.
-ಅನುಮಾನಾಸ್ಪದ
ವಸ್ತುಗಳು,
ವಾಹನಗಳು,
ವ್ಯಕ್ತಿಗಳು
ಕಂಡು
ಬಂದರೆ
ಅವರನ್ನು
ಪರಿಶೀಲನೆ
ನಡೆಸುತ್ತಾರೆ.
-ಹೆಚ್ಚು
ಲಗೇಜ್ಗಳನ್ನು
ತೆಗೆದುಕೊಂಡು
ಹೊರಟ
ವಾಹನಗಳನ್ನು
ವಶಕ್ಕೆ
ಪಡೆಯಲಾಗುತ್ತದೆ.
-ಖಾಸಗಿ
ಭದ್ರತಾ
ಸಿಬ್ಬಂದಿಗಳು
ಕೂಡ
ಪೊಲೀಸರ
ಮಟ್ಟದಲ್ಲಿ
ಕಾವಲು
ಕಾಯುವಂತೆ
ನೋಡಿಕೊಳ್ಳಲಾಗುತ್ತದೆ.
-ಎಲ್ಲಾ
ಪೊಲೀಸ್
ಅಧಿಕಾರಿಗಳು
ಪಾಳಿಯಲ್ಲಿ
ಲಭ್ಯವಿರಲಿದ್ದಾರೆ.
ದಿನದ
24
ಗಂಟೆಯೂ
ಅವರು
ಸಾರ್ವಜನಿಕರ
ಸೇವೆಗೆ
ದೊರೆಯಲಿದ್ದಾರೆ.
-
ಧಾರ್ಮಿಕ
ಸ್ಥಳಗಳ
ಸಮೀಪವಿರುವ
ಪಿಜಿ,
ಹಾಸ್ಟೆಲ್,
ಅಪಾರ್ಟ್ಮೆಂಟ್ಗಳನ್ನು
ಪರಿಶೀಲಿಸಲಾಗುತ್ತಿದೆ.
-ಪ್ರಮುಖ
ಸ್ಥಳಗಳಲ್ಲಿ
ಚೆಕ್ಪೋಸ್ಟ್ಗಳನ್ನು
ನಿರ್ಮಿಸಲಾಗಿದೆ
-ಪ್ರತಿಯೊಬ್ಬ
ಪೊಲೀಸ್
ಅಧಿಕಾರಿ
ಕೂಡ
ಹೈ
ಅಲರ್ಟ್ನಲ್ಲಿರುವಂತೆ
ಸೂಚಿಸಲಾಗಿದೆ.