ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಷಯ ತೃತೀಯ: ಒಂದೇ ದಿನ ಸಾವಿರ ಕೋಟಿ ರೂ. ವಹಿವಾಟು

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಾದ್ಯಂತ 3,495 ಕೆ.ಜಿಗೂ ಅಧಿಕ ಚಿನ್ನ ಹಾಗೂ 2325 ಕೆ.ಜಿಗೂ ಅಧಿಕ ಬೆಳ್ಳಿ ಮಾರಾಟವಾಗಿದೆ. ಒಂದೇ ದಿನ 1,100 ಕೋಟಿ ರೂ ಮೀರಿದ ವಹಿವಾಟು ನಡೆದಿದೆ.

ಅಕ್ಷಯ ತೃತೀಯ: ಚಿನ್ನದ ಮಳಿಗೆಗಳೆಡೆಗೆ ಚುನಾವಣಾ ಆಯೋಗದ ದೃಷ್ಟಿಅಕ್ಷಯ ತೃತೀಯ: ಚಿನ್ನದ ಮಳಿಗೆಗಳೆಡೆಗೆ ಚುನಾವಣಾ ಆಯೋಗದ ದೃಷ್ಟಿ

ಬಂಗಾರದ ದರದಲ್ಲಿ ಪ್ರತಿ ಗ್ರಾಂ ಗೆ 200ರಿಂದ 250 ರೂ ಹೆಚ್ಚಾದರೂ ಕೂಡ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ. ಬೆಳ್ಳಿಯ ಬೆಲೆಯೂ ಏರಿಕೆಯಾಗಿತ್ತು. ಕಳೆದ ವರ್ಷ ಎರಡು ದಿನ ಅಕ್ಷಯ ತೃತೀಯ ಬಂದಿತ್ತು. 2,795 ಕೆ.ಜಿ ಗೂ ಅಧಿಕ ಚಿನ್ನ ಹಾಗೂ 1,860 ಕೆಜಿಗೂ ಅಧಿಕ ಬೆಳ್ಳಿ ಮಾರಾಟವಾಗಿತ್ತು. ಒಟ್ಟಾರೆ 796 ಕೋಟಿ ರೂ ವಹಿವಾಟು ನಡೆದಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕೂಪನ್ ಮೂಲಕ ಖರೀದಿ: ಕೆಲ ಮಳಿಗೆಗಳಲ್ಲಿ ಮೊದಲೇ ಡೀಲ್ ನಡೆದಿದ್ದರಿಂದಗ್ರಾಹಕರು ಹಾಲಿನ ಕೂಪನ್ ಗಳ ಮಾದರಿಯಲ್ಲಿ ಟೋಕನ್ ಗಳನ್ನು ತಂದು ಆಭರಣ ಕೊಂಡೊಯ್ದು ಸಂಗತಿಯೂ ಬುಧವಾರದ ಅಕ್ಷಯ ತೃತೀಯದಂದ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

On a lucky day, 3500 kg gold sold in the state

ಬೆಳಗ್ಗ ಸುಮಾರು 6.30ರಿಂದಲೇ ಆಭರಣ ಮಳಿಗೆಗಳನ್ನು ತೆರಿಯಲಾಗಿತ್ತು. ಕೆಲವೆಡೆ ರಾತ್ರಿ 10ರವರೆಗೂ ವ್ಯಾಪಾರ ನಡೆಯಿತು. ಹಲವು ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. ಮತ್ತೆ ಕೆಲವೆಡೆ ಮೊದಲೇ ಖರೀದಿಸಿಟ್ಟಿದ್ದು, ಈ ದಿನ ಮನೆಗೊಯ್ದರು ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ ತಿಳಿಸಿದ್ದಾರೆ.

English summary
Around 3,500 kg gold and 2,200 kg silver and their ornaments have been sold in the state on the occasion of Akshaya Tritiya on Wednesday. Gold smiths have estimated that there was around Rs.1,100 crores of business on the day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X