ಚಂದ್ರಶೇಖರ ಕಂಬಾರರ 'ಗುಳ್ಳಕಾಯಜ್ಜಿ' ನಾಟಕ
ಬೆಂಗಳೂರು, ಡಿಸೆಂಬರ್ 15 : ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ನಾಟಕೋತ್ಸವ ಕಾರ್ಯಕ್ರಮವನ್ನು ಶುಕ್ರವಾರ(ಡಿ.15 ) ರಿಂದ ಡಿಸೆಂಬರ್ 18 ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಎನ್ ಎಸ್ಡಿಯಲ್ಲಿ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದೆ.
ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರ 'ಗುಳ್ಳಕಾಯಜ್ಜಿ' ನಾಟಕವು ಡಿ.15 ರಿಂದ 18 ರವರೆಗೂ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ. 2017-18 ನೇ ಸಾಲಿನ ನಾಟಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಮಾಲತೇಶ ಬಡಿಗೇರ ಅವರು ನಿರ್ದೇಶಿಸಲಿದ್ದಾರೆ, ಸಿದ್ದರಾಮ ಕೇಸಾಪುರ ಅವರು ಸಂಗೀತ ನೀಡಲಿದ್ದಾರೆ.
ಪಾಂಡಿಚೇರಿ, ತಮಿಳುನಾಡಿನಿಂದ 6 ವಿದ್ಯಾರ್ಥಿಗಳು, ಆಂಧ್ರ ಪ್ರದೇಶ, ತಮಿಳುನಾಡಿನಿಂದ 5 ವಿದ್ಯಾರ್ಥಿಗಳು, ಕೇರಳದಿಂದ ಇಬ್ಬರು ಹಾಗೂ ಕರ್ನಾಟಕಾದ್ಯಂತ ವಿವಿಧ ಭಾಗಗಳ ವಿದ್ಯಾರ್ಥಿಗಳು ಒಟ್ಟು 20 ಮಂದಿ ನಾಟಕ ಪ್ರದರ್ಶಿಸಲಿದ್ದಾರೆ .
Comments
English summary
National school of drama, Bengaluru students will perform Gullkayajji a drama written by Jnana peeth awardee Dr. Chandrashekhara Kambara from December 15 to 18 at 7pm at Kalagrama campus in Mallathahalli. The play directed by Malathesh Badiger and first semester students of NSD will perform the play.
Story first published: Friday, December 15, 2017, 17:50 [IST]