ಇಂದಿರಾ ಕ್ಯಾಂಟೀನ್ನಲ್ಲಿ ತಿಂಡಿ ಜತೆ ಕಾಫಿ-ಟೀ ಕೊಡಲು ಚಿಂತನೆ
ಬೆಂಗಳೂರು, ಜು.11: ಬಡವರ ಹಸಿವನ್ನು ನೀಗಿಸುವ ಸಲುವಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿತ್ತು. ಅಲ್ಲಿ ಇಷ್ಟು ದಿನ ತಿಂಡಿ-ಊಟ ಮಾತ್ರ ಸಿಗುತ್ತಿತ್ತು ಆದರೆ ಇನ್ನುಮುಂದೆ ಕಾಫಿ-ಟೀ ಕೂಡ ಲಭ್ಯವಿರಲಿದೆ.
198 ವಾರ್ಡ್ಗಳಲ್ಲಿ ಸ್ಥಳಾವಕಾಶ ದೊರೆಯದ 22 ವಾರ್ಡ್ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಒಂದೆರೆಡು ಕಡೆ ಮೊಬೈಲ್ ಕ್ಯಾಂಟೀನ್ ಕೂಡ ಪ್ರಾರಂಭಿಸಲಾಗಿದೆ.
ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಿಗೇಕೆ ಬಂತು ಇಂಥ ದುಸ್ಥಿತಿ?
5 ರೂ.ಗೆ ಬೆಳಗಿನ ಉಪಹಾರ, 10 ರೂಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಊಟ-ಉಪಹಾರಕ್ಕಾಗೊ 6 ಕೋಟಿ ಮಂದಿ ಕ್ಯಾಂಟೀನ್ಗೆ ಬಂದಿದ್ದಾರೆ. ಇದುವರೆಗೆ ಪಲಾವ್, ಪೊಂಗಲ್, ಇಡ್ಲಿ, ಮತ್ತಿತರೆ ತಿಂಡಿಗಳು ದೊರೆಯುತ್ತಿತ್ತು ಆದರೆ ಇನ್ನುಮುಂದೆ ಕಾಫಿ-ಟೀ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಕೆಲವು ಗ್ರಾಹಕರು ರಾಗಿಮುದ್ದೆಯನ್ನು ನೀಡಬೇಕೆಂದು ಬೇಡಿಕೆ ಇಟ್ಟಿರುವುದರಿಂದ ಅದನ್ನು ನೀಡಲು ಚಿಂತನೆ ನಡೆಸಲಾಗಿದೆ. ಇಂದಿರಾ ಕ್ಯಾಂಟೀನ್ಗಳ ಗುತ್ತಿಗೆ ಅವಧಿ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಮತ್ತೆ ನವೀಕರಿಸುವ ಸಂದರ್ಭದಲ್ಲಿ ಕಾಫಿ-ಟೀ ನೀಡುವುದು ಮತ್ತು ಊಟದಲ್ಲಿ ಮುದ್ದೆಯನ್ನು ಕೊಡುವ ಬಗ್ಗೆ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.