ಗೋಲಿಬಾರ್ ತನಿಖೆಗೆ ಇನ್ನೂ ನಿರ್ಧರಿಸಿಲ್ಲ: ಯಡಿಯೂರಪ್ಪ
ಮಂಗಳೂರಲ್ಲಿ ನಡೆದ ಗೋಲಿಬಾರ್ ಕುರಿತು ಯಾವ ತನಿಖೆ ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 22: ಮಂಗಳೂರಲ್ಲಿ ನಡೆದ ಗೋಲಿಬಾರ್ ಕುರಿತು ಯಾವ ತನಿಖೆ ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರಿಗೆ ಹೋಗಿದ್ದಾರೆ, ಅವರು ಬಂದ ಮೇಲೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಯಡಿಯೂರಪ್ಪ ವಿರುದ್ದ ಕೆಂಡಕಾರಿದ ಕುಮಾರಸ್ವಾಮಿ: ಅಸಲಿಗೆ ಆಗಿದ್ದೇನು?
ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಂತ ಸಿದ್ದತೆ ಏನಿಲ್ಲ, ಕಾಯ್ದೆ ಈಗಾಗಲೇ ಜಾರಿಯಾಗಿದೆ, ಕಾಯ್ದೆ ಜಾರಿಯಾದ ಮೇಲೆ ನಮ್ಮಲ್ಲೂ ತಂತಾನೇ ಆಗುತ್ತೆ ಎಂದರು.
ರಾಜ್ಯದಲ್ಲಿ ನುಸುಳುಕೋರರ ಸಂಖ್ಯೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ, ಎಷ್ಟು ಜನ ಅಕ್ರಮ ವಲಸಿಗರು ರಾಜ್ಯದಲ್ಲಿದ್ದಾರೆ ಅಂತ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಖಾದರ್ ವಿರುದ್ದ ಪ್ರಕರಣ ದಾಖಲು, ರಾಜಕೀಯ ಮಾಡಲ್ಲ: ಸಿಎಂ
ಮಂಗಳೂರಲ್ಲಿ ನಡೆದ ಗಲಭೆ ಬಗ್ಗೆ ಮಾತನಾಡಿದ ಸಿಎಂ, ಹೊರಗಿನಿಂದ ಬಂದವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಕಲ್ಲು ಎಸೆದಿದ್ದಾರೆ. ಹೊರಗಿನಿಂದ ಬಂದವರಿಗೆ ಮಂಗಳೂರಲ್ಲಿ ಏನು ಕೆಲಸ? ಪ್ರಚೋದನೆಯಿಂದಾಗಿ ಹೊರಗಿನಿಂದ ಬಂದವರು ಜನರ ಮಧ್ಯೆ ಸೇರಿಕೊಂಡು ಕಲ್ಲೆಸಿದಿದ್ದಾರೆ ಎಂದರು.