ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಆಸಕ್ತಿ ಇಲ್ಲ: ರಾಮಲಿಂಗಾರೆಡ್ಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 21: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇತಿಹಾಸದ ದಾಖಲೆಗಳನ್ನು ನೋಡುವುದಾದರೆ 1989ರಲ್ಲಿ ಕಾಂಗ್ರೆಸ್ ನ ಆರ್. ಗುಂಡೂರಾವ್ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇ ಕೈ ಪಕ್ಷದ ಈ ಸ್ಥಾನದಲ್ಲಿನ ಕಡೆಯ ಗೆಲುವಾಗಿತ್ತು.

ಅಲ್ಲಿಂದೀಚೆಗೆ ಶಾಸಕರಾದ ಎಂ.ಕೃಷ್ಣಪ್ಪ ಮತ್ತು ಕೃಷ್ಣ ಬೈರೇ ಗೌಡ ಅವರುಗಳು ಸಂಸದರಾಗಿದ್ದ ದಿ. ಅನಂತಕುಮಾರ್ ಗೆ ಸ್ಪರ್ಧೆಯೊಡ್ಡಬಹುದಾದ ಹುರಿಯಾಳುಗಳು ಎಂದು ಗುರುತಿಸಿಕೊಂಡಿದ್ದರು.

Not interested in contesting from Bengaluru South Ramalinga Reddy

ಕಳೆದ 38 ವರ್ಷಗಳಿಂದ ಬೆಂಗಳುರು ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ಸಂಸದೀಯ ಚುನಾವಣೆ ಗೆದ್ದಿಲ್ಲ, ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಗೆ ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಸ್ಪರ್ಧಿಸುತ್ತಾರೆಯೇ ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಪ್ರಸ್ತುತ ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳಾರಾದರೂ ಇದ್ದಲ್ಲಿ ಅದು ರೆಡ್ಡಿಯವರು ಮಾತ್ರ ಎಂದು ಹೇಳಲಾಗಿತ್ತು. ಆದರೆ ಅವರು ನಿರಾಸಕ್ತಿ ತೋರಿದ್ದಾರೆ.

English summary
Congress has never won a parliamentary seat in Bangalore South for the past 38 years. When asked if he would contest from Bangalore South as Congress candidate, BTM MLA Ramalinga Reddy said, no.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X