ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ನಿಷೇಧ
ಬೆಂಗಳೂರು, ಏ. 13 : ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ನಿಷೇಧಿಸಲು ತೋಟಗಾರಿಕಾ ಇಲಾಖೆ ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. ಪ್ರಾಯೋಗಿಕವಾಗಿ ಭಾನುವಾರ ಮಾತ್ರ ವಾಹನ ಸಂಚಾರ ನಿಷೇಧ ಮಾಡಲಾಗುತ್ತದೆ.
ಕಬ್ಬನ್
ಪಾರ್ಕ್ನಲ್ಲಿ
ಶಬ್ದ
ಮತ್ತು
ವಾಯು
ಮಾಲಿನ್ಯ
ತಡೆಗಟ್ಟಲು
ವಾಹನ
ಸಂಚಾರ
ನಿಷೇಧಕ್ಕೆ
ಅನುಮತಿ
ನೀಡಬೇಕು
ಎಂದು
ತೋಟಗಾರಿಕಾ
ಇಲಾಖೆ
2014ರ
ಡಿಸೆಂಬರ್ನಲ್ಲಿ
ಸರ್ಕಾರ
ಮತ್ತು
ಸಂಚಾರಿ
ಪೊಲೀಸರಿಗೆ
ಮನವಿ
ಮಾಡಿತ್ತು.
[ಕಬ್ಬನ್
ಉದ್ಯಾನದಲ್ಲಿ
ವಾಹನ
ಸಂಚಾರ
ಬೇಡ]
ತೋಟಗಾರಿಕಾ ಇಲಾಖೆ ನಿರ್ದೇಶಕರು, ಸಂಚಾರಿ ಪೊಲೀಸರು ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ವಾಹನ ಸಂಚಾರ ನಿಷೇಧಕ್ಕೆ ತೀರ್ಮಾನ ಕೈಗೊಳ್ಳಲಾಗಿದ್ದು, ಏ.26ರಿಂದ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧಿಸುವ ಸಾಧ್ಯತೆ ಇದೆ. [ಕಬ್ಬನ್ ಪಾರ್ಕಿನಲ್ಲಿ 1 ಕಪ್ ಕಾಫಿಗೆ 100 ರೂ.]
ತೋಟಗಾರಿಕಾ ಇಲಾಖೆ ರಜಾ ದಿನಗಳು ಮತ್ತು ವಾರಂತ್ಯದಲ್ಲಿ ಪಾರ್ಕ್ನಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ, ಪ್ರಾಯೋಗಿಕವಾಗಿ ಭಾನುವಾರ ಮಾತ್ರ ಸಂಚಾರ ನಿಷೇಧಿಸಲು ಸಂಚಾರಿ ಪೊಲೀಸರು ನಿರ್ಧರಿಸಿದ್ದಾರೆ. [ಕಬ್ಬನ್ ಪಾರ್ಕ್ ಬಗ್ಗೆ ತಿಳಿಯಿರಿ]
ಕಬ್ಬನ್ ಪಾರ್ಕ್ವೊಳಗೆ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ವಿಪರೀತ ಶಬ್ದ ಮಾಲಿನ್ಯವಾಗುತ್ತಿದೆ. ವಾಹನದ ಹೊಗೆಯಿಂದ ವಾಯುಮಾಲಿನ್ಯವಾಗುತ್ತಿದೆ. ವಾಹನಗಳ ಸಂಚಾರದಿಂದ ಪಾರ್ಕ್ನಲ್ಲಿ ಸಾರ್ವಜನಿಕರು ಸುಗಮವಾಗಿ ಸಂಚಾರ ನಡೆಸುವುದು ಕಷ್ಟವಾಗಿದೆ ಎಂದು ತೋಟಗಾರಿಕಾ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿತ್ತು.
ವಾಹನ ನಿಲುಗಡೆ : ವಾಹನ ಸಂಚಾರದ ಜೊತೆ ಪಾರ್ಕ್ನಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿತ್ತು. ಕೇಂದ್ರ ಗ್ರಂಥಾಲಯ, ಬಾಲಭವನ, ಪ್ರೆಸ್ ಕ್ಲಬ್ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ, ಸೆಂಚುರಿ ಕ್ಲಬ್ ಸಮೀಪ ಹೀಗೆ ಹಲವು ಕಡೆ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು.
ಈ ನಿಷೇಧ ಜಾರಿಯಾದ ನಂತರ ಪಾರ್ಕ್ನಲ್ಲಿ ವಾಹನ ನಿಲುಗಡೆಗೂ ನಿಷೇಧ ಹೇರಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಯಾವ ಪ್ರದೇಶದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಚರ್ಚೆ ನಡೆಸುತ್ತಿದ್ದಾರೆ.