ನಾವೇನೋ ಹಣ ಕೊಟ್ವಿ, ನೀವು ಸೈಟು ಕೊಟ್ರಿ, ಕರೆಂಟ್ ಯಾರು ಕೊಡ್ತಾರೆ?
ಬೆಂಗಳೂರು, ಜೂನ್ 21: ಬಿಡಿಎಯು ಎರಡನೇ ಹಂತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಆದರೆ ಮೊದಲ ಹಂತದಲ್ಲಿ ಹಂಚಿಕೆಯಾಗಿರುವ ನಿವೇಶನ ಮಾಲೀಕರ ಗತಿ ಏನಾಗಿದೆ ಎಂದು ಯಾರಿಗಾದರೂ ಗೊತ್ತೇ?
ಎರಡು ವರ್ಷಗಳ ಹಿಂದೆ ಆಲೂರಿನಲ್ಲಿ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡುವಾಗ ಪ್ರತಿಯೊಬ್ಬರು ಹಾಟ್ ಕೇಕ್ ಎನ್ನುವ ರೀತಿ ಕೊಂಡುಕೊಂಡರು. ಎಲ್ಲಾ ಸೈಟು 30-50 ಲಕ್ಷಕ್ಕೆ ಬಿಕರಿಯಾಗಿತ್ತು.
ರಾಜ್ಯದಲ್ಲಿ ಮಳೆ ಕೊರತೆ, ಕುಡಿಯುವ ನೀರಿಗೂ ಅಭಾವ, ವಿದ್ಯುತ್ ವ್ಯತ್ಯಯ ಸಾಧ್ಯತೆ
452 ನಿವೇಶನಗಳಲ್ಲಿ ಕೇವಲ 10 ನಿವೇಶನಗಳು ಮಾತ್ರ ಖಾಲಿಯಾಗದೆ ಹಾಗೆ ಉಳಿದಿದೆ. ಆದರೆ ನಿವೇಶನವೇನೋ ಸಿಕ್ತಿ ವಿದ್ಯುತ್ ಸಂಪರ್ಕ ಯಾರು ಕೊಡ್ಬೇಕು, ಇದುವರೆಗೂ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ, ಹಾಗಾಗಿ 400 ಹೆಚ್ಚು ನಿವೇಶನಗಳ ಪೈಕಿ ಕೇವಲ 50-60 ಮಂದಿ ಮಾತ್ರ ಅಲ್ಲಿ ಬಂದು ವಾಸಿಸುತ್ತಿದ್ದಾರೆ. ಹೊರ ಗುತ್ತಿಗೆ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗಿದ್ದರೂ ಕೂಡ ಅದು ಶಾಶ್ವತವಲ್ಲ.
ಟೆಂಪರವರಿ ಲೈನ್ನಲ್ಲಿ 125 ಕೆವಿ ವಿದ್ಯುತ್ ಸಂಪರ್ಕವನ್ನು ನೀಡುವ ಸಾಮರ್ಥ್ಯವಿದ್ದರೂ ಕೂಡ 20 ಕೆವಿಯಷ್ಟು ಕಡಿಮೆ ವಿದ್ಯುತ್ ನೀಡಲಾಗುತ್ತದೆ. ಯಾರೂ ಕೂಡ ವಿದ್ಯುತ್ ಬಿಲ್ ತುಂಬುತ್ತಿಲ್ಲ ಹಾಗಾಗಿ ಈ ರೀತಿ ಮಾಡುತ್ತಿದ್ದೇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ.
ಈ ತಾತ್ಕಾಲಿಕ ವಿದ್ಯುತ್ ತಂತಿಗಳ ಮೂಲಕ ನೀಡುವ ವಿದ್ಯುತ್ ಸಾಮಾನ್ಯ ವಿದ್ಯುತ್ ದರಕ್ಕಿಂತಲೂ ಹೆಚ್ಚು ಹಣ ನೀಡಬೇಕಾಗುತ್ತದೆ. ಪ್ರತಿ ತಿಂಗಳು 2 ಲಕ್ಷ ವಿದ್ಯುತ್ ಶುಲ್ಕ ಬರುತ್ತಿದೆ.
ಆದರೆ ಬಿಡಿಎ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬೆಸ್ಕಾಂನಿಂದಲೇ ತಡವಾಗುತ್ತಿದೆ ಎಂದು ಆರೋಪವನ್ನು ಬೆಸ್ಕಾಂ ಮೇಲೆ ಹೊರಿಡುತ್ತಿದೆ. ಜೂನ್ ಅಂತ್ಯದೊಳಗೆ ಈ ತೊಂದರೆಯನ್ನು ಬಗೆಹರಿಸುವುದಾಗಿ ಬಿಡಿಎ ಹೇಳಿದೆ ಇನ್ನು ಕಾದು ನೋಡಬೇಕಿದೆ ಎಂದು ಮಾಲೀಕರೊಬ್ಬರು ತಿಳಿಸಿದ್ದಾರೆ.