ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ: ಈ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
ಬೆಂಗಳೂರು, ಫೆಬ್ರವರಿ 9: ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಶುಕ್ರವಾರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಲವಾರು ರಸ್ತೆಗಳ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೋಲಿಸ್ ಪ್ರಕಟಣೆ ಹೊರಡಿಸಿದೆ. ಭದ್ರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಜೆ 4ರಿಂದ ರಾತ್ರಿ 8ರವರೆಗೆ ಈ ಕೆಳಗಿನ ಮಾರ್ಗಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿರೀಕ್ಷಿಸಲಾಗಿದೆ.
ಸಂಜೆ 4ರಿಂದ 6 - ಎಚ್ ಎಎಲ್ ಏರ್ ಪೋರ್ಟ್- ಏರ್ ಪೋರ್ಟ್ ಅಂಬ್ರೆಲಾ - ವಿಮಾನ ನಿಲ್ದಾಣ ರಸ್ತೆ - ಇಸ್ರೋ - ಮಣಿಪಾಲ್ ಆಸ್ಪತ್ರೆ ಜಂಕ್ಷನ್ - ಇಂದಿರಾ ನಗರ 100 ಅಡಿ ರಸ್ತೆ ಜಂಕ್ಷನ್ - ದೊಮ್ಮಲೂರು - ಸಿಬಿ ರಸ್ತೆ ಜಂಕ್ಷನ್ - ಎಎಸ್ ಸಿ ಜಂಕ್ಷನ್ - ಟ್ರಿನಿಟಿ ಚರ್ಚ ಸರ್ಕಲ್ - ಎಂ.ಜಿ. ರಸ್ತೆ - ವೆಬ್ಸ್ ಜಂಕ್ಷನ್ - ಮಣಿಪಾಲ್ ಸೆಂಟರ್ - ಕಬ್ಬನ್ ರಸ್ತೆ - ಬಿಆರ್ ವಿ ಜಂಕ್ಷನ್ - ಸೆಂಟ್ರಲ್ ಸ್ಟ್ರೀಟ್ - ಅನಿಲ್ ಕುಂಬ್ಳೆ ಸರ್ಕಲ್ - ಎಂ.ಜಿ. ರಸ್ತೆ - ಕಸ್ತೂರ್ ಬಾ ರಸ್ತೆ - ಸಿದ್ಧಲಿಂಗಯ್ಯ ಸರ್ಕಲ್ - ಮಲ್ಯ ಆಸ್ಪತ್ರೆ ರಸ್ತೆ - ಆರ್ ಆರ್ ಎಂ ಆರ್ ರಸ್ತೆ
ಸಂಜೆ 5: 30ರಿಂದ 6: 30- ಮಲ್ಯ ಆಸ್ಪತ್ರೆ ರಸ್ತೆ - ಆರ್ ಆರ್ ಎಂ ಆರ್ ವೃತ್ತ - ಆರ್ ಆರ್ ಎಂ ಆರ್ ರಸ್ತೆ - ಹಡ್ಸನ್ ರಸ್ತೆ - ಕಸ್ತೂರ್ ಬಾ ರಸ್ತೆ - ಸಿದ್ದಲಿಂಗಯ್ಯ ಸರ್ಕಲ್ - ಕೆ.ಬಿ. ರಸ್ತೆ - ಕ್ವೀನ್ಸ್ ರಸ್ತೆ - ಸಿಟಿಒ ರಸ್ತೆ - ರಾಜಭವನ ರಸ್ತೆ - ಪೊಲೀಸ್ ತಿಮ್ಮಯ್ಯ ರಸ್ತೆಯಿಂದ ರಾಜಭವನದ ರಸ್ತೆ
ಸಂಜೆ 6: 30ರಿಂದ ರಾತ್ರಿ 8ರವರೆಗೆ - ರಾಜಭವನ - ಅಲಿ ಅಕ್ಸರ್ ರಸ್ತೆ ಜಂಕ್ಷನ್ - ಇನ್ ಫ್ಯಾಂಟ್ರಿ ರಸ್ತೆ - ಕಾಫೀ ಬೋರ್ಡ್ ರಸ್ತೆ - ಟ್ರಾಫಿಕ್ ಪೊಲೀಸ್ ಕೇಂದ್ರ ಕಚೇರಿ ಜಂಕ್ಷನ್ - ಬಲ ತಿರುವು - ಸಿಟಿಒ ರಸ್ತೆ - ಕಬ್ಬನ್ ರಸ್ತೆ - ಕೆ.ಆರ್. ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್ - ಮಣಿಪಾಲ್ ಸೆಂಟರ್ ಜಂಕ್ಷನ್ - ವೆಬ್ಸ್ ಜಂಕ್ಷನ್ - ಎಂ.ಜಿ. ರಸ್ತೆ - ಟ್ರಿನಿಟಿ ಚರ್ಚ್ ಸರ್ಕಲ್ - ಎಎಸ್ ಸಿ ಸೆಂಟರ್ - ಸಿಬಿ ರೋಡ್ ಜಂಕ್ಷನ್ - ದೊಮ್ಮಲೂರು - ಇಂದಿರಾ ನಗರ 100 ಅಡಿ ರಸ್ತೆ ಜಂಕ್ಷನ್ - ಮಣಿಪಾಲ್ ಆಸ್ಪತ್ರೆ - ಇಸ್ರೋ ಜಂಕ್ಷನ್ - ರಾಜೇಶ್ವರಿ ಥಿಯೇಟರ್ ಜಂಕ್ಷನ್ - ಏರ್ ಪೋರ್ಟ್ ಅಂಬ್ರೆಲಾ - 30 ಗೇಟ್ ಹಾಗೂ ಎಚ್ ಎ ಎಲ್ ಏರ್ ಪೋರ್ಟ್