ಬೆಂಗಳೂರಿನ ಹಲವೆಡೆ ಇಂದು ಕಾವೇರಿ ನೀರು ವ್ಯತ್ಯಯ
ಬೆಂಗಳೂರು, ಫೆಬ್ರವರಿ 8: ನಗರದ ಹಲವೆಡೆ ಇಂದು ಕಾವೇರಿ ನೀರು ವ್ಯತ್ಯಯವಾಗಲಿದೆ. ಜಲಮಂಡಳಿಯ ತೊರೆಕಾಡನಹಳ್ಳಿಯ ಪಂಪಿಂಗ್ ಕೇಂದ್ರದಲ್ಲಿ ಗುರುವಾರ ಸಂಜೆಯಿಂದ ತಾಂತ್ರಿಕ ದೋಷ ಕಂಡುಬಂದಿದ್ದು, ದುರಸ್ತಿ ಕಾರ್ಯ ಆರಂಭವಾಗಿದೆ. ಹಾಗಾಗಿ ಶುಕ್ರವಾರ ಈ ಪ್ರದೇಶಗಳಲ್ಲಿ ಕಾವೇರಿ ನೀರು ವ್ಯತ್ಯಯವಾಗಲಿದೆ.
ಗುರುವಾರ ಸಂಜೆಯಿಂದಲೇ ಕಾಮಗಾರಿ ಆರಂಭಿಸಲಾಗಿದೆ. ಟಿಕೆ ಹಳ್ಳಿ, ಪಂಪಿಂಗ್ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಶುಕ್ರವಾರ ಮಧ್ಯಾಹ್ನ ಅಥವಾ ಸಂಜೆ ದುರಸ್ತಿ ಮುಗಿಯುವ ಸಾಧ್ಯತೆ ಇದೆ.
ಮಲ್ಲೇಶ್ವರ, ಯಶವಂತಪುರ, ಸಂಜಯನಗರ, ಮತ್ತಿಕೆರೆ, ಗೋಕುಲ ಎಕ್ಸ್ಟೆನ್ಷನ್, ಜಯಮಹಲ್, ವಸಂತನಗರ, ಮುತ್ಯಾಲನಗರ, ಹೆಬ್ಬಾಳ, ಆರ್ಟಿ ನಗರ, ಫ್ರೇಜರ್ ಟೌನ್, ಬನ್ನಪ್ಪ ಪಾರ್ಕ್, ಚಿಕ್ಕಲಾಲ್ಬಾಗ್, ವಿಲ್ಸನ್ ಗಾರ್ಡನ್, ಶಿವಾಜಿನಗರ, ಪಿಳ್ಳಣ್ಣ ಗಾರ್ಡನ್, ಮೆಜೆಸ್ಟಿಕ್, ಕಸ್ತೂರ ಬಾ ರಸ್ತೆ, ಇಸ್ರೋ ಲೇಔಟ್, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯನಗರ, ಸುಧಾಮನಗರ, ಯಲಚೇನಹಳ್ಳಿ, ಕೆಆರ್ ಮಾರುಕಟ್ಟೆ, ಜೆಪಿನಗರ, ಓಕಳಿಪುರಂ, ಜೆಪಿನಗರ, ಆಡಗೋಡಿ, ಸಂಪಂಗಿರಾಮನಗರ, ಕುಮಾರಸ್ವಾಮಿ ಲೇಔಟ್, ಚಾಮರಾಜಪೇಟೆ, ಈಜಿಪುರ, ಹಲಸೂರು, ವಿವಿಪುರ, ಕೋರಮಂಗಲ, ಶಾಂತಿನಗರ, ಚಿಕ್ಕಪೇಟೆ, ಕತ್ರಿಗುಪ್ಪೆ, ಗೋರಿಪಾಳ್ಯ, ಪಾದರಾಯನಪುರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.