ಹೊಸ ವರ್ಷಾಚರಣೆ: ಬೆಂಗಳೂರು ಪೊಲೀಸ್ ಕಮಿಷನರ್ ಸಂದರ್ಶನ
Recommended Video
ಹೊಸ ವರ್ಷಾಚರಣೆಗೆ ಬೆಂಗಳೂರು ಮಹಾನಗರ ಸಿದ್ದವಾಗುತ್ತಿದೆ, ಡಿಸೆಂಬರ್ 31ರ ಸಂಜೆಯಿಂದ ತಡರಾತ್ರಿಯವರೆಗೆ ಬೆಂಗಳೂರು ಪೊಲೀಸರು ಯಾವ ರೀತಿಯ ಭದ್ರತಾ ಕ್ರಮ ಮತ್ತು ಬಂದೋಬಸ್ತ್ ಅನ್ನು ನೀಡುತ್ತಿದ್ದಾರೆ?
ಬೆಂಗಳೂರು ನಗರದ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ (ಐಪಿಎಸ್) 'ಒನ್ ಇಂಡಿಯಾ' ಗೆ ನೀಡಿದ ಸಂದರ್ಶನದಲ್ಲಿ ಮುಂಜಾಗೃತ ಕ್ರಮದ ಬಗ್ಗೆ ವಿವರಿಸಿದ್ದಾರೆ. ಸಂದರ್ಶನದ ಪ್ರಮುಖಾಂಶ ಇಂತಿದೆ.
ವರ್ಷಾಂತ್ಯದ ಪಾರ್ಟಿ ಹಾಳುಗೆಡವಲು ಪೊಲೀಸ್ ಸಿದ್ಧ
ಪ್ರ:
ಎಂ
ಜಿ
ರಸ್ತೆ,
ಬ್ರಿಗೇಡ್
ರಸ್ತೆ
ಮತ್ತು
ಚರ್ಚ್
ಸ್ಟ್ರೀಟ್
ಬಿಟ್ಟು,
ನಗರದ
ಇತರ
ಪ್ರದೇಶಗಳಲ್ಲಿ
ಯಾವ
ರೀತಿ
ಭದ್ರತೆ
ಒದಗಿಸುತ್ತಿದ್ದೀರಾ?
ಕಮಿಷನರ್:
ನಗರದಾದ್ಯಂತ
ಒಟ್ಟು
ಹದಿನೈದು
ಸಾವಿರ
ಪೊಲೀಸರನ್ನು
ನೇಮಕ
ಮಾಡುತ್ತಿದ್ದೇವೆ.
500
ವಾಹನ,
200
ಬೈಕುಗಳು
ಮತ್ತು
250
ಗಸ್ತುವಾಹನದ
ಮೂಲಕ
ಭದ್ರತೆಯನ್ನು
ಒದಗಿಸುತ್ತಿದ್ದೇವೆ.
ನಗರದ
ಎಲ್ಲಾ
ಭಾಗಕ್ಕೂ
ಆಯಾಯ
ಪೊಲೀಸ್
ಠಾಣೆ
ಮಿತಿಯಲ್ಲಿ
ಬಂದೋಬಸ್ತ್
ಇರುತ್ತದೆ.
ಪ್ರ:
ನಮ್ಮ
ಮೆಟ್ರೋ
ಎಂಜಿ
ರಸ್ತೆ,
ಟ್ರಿನಿಟಿ
ಸರ್ಕಲ್
ಮತ್ತು
ಕಬ್ಬನ್
ಪಾರ್ಕ್
ನಿಲ್ದಾಣಗಳಿಂದ
ವಿಶೇಷ
ವ್ಯವಸ್ಥೆ
ಒದಗಿಸುತ್ತಿದೆ.
ಬಿಎಂಟಿಸಿ
ಬಗ್ಗೆ
ಏನಾದರೂ
ಮಾಹಿತಿ
ಇದೆಯಾ?
ಕಮಿಷನರ್:
ನಮ್ಮ
ಮೆಟ್ರೋದವರಿಗೆ
ರಾತ್ರಿ
ಎರಡು
ಗಂಟೆಯ
ತನಕ
(ಡಿ
31
ತಡರಾತ್ರಿ)
ಸರ್ವಿಸ್
ನೀಡಲು
ವಿನಂತಿಸಿಕೊಂಡಿದ್ದೇವೆ,
ಅದಕ್ಕೆ
ಅವರು
ಒಪ್ಪಿಗೆ
ನೀಡಿದ್ದಾರೆ.
ಬಿಎಂಟಿಸಿ
ಬಸ್ಸುಗಳನ್ನು
ಕೂಡಾ
ಸಾರ್ವಜನಿಕರಿಗೆ
ಸಹಾಯವಾಗುವ
ರೀತಿಯಲ್ಲಿ
ಓಡಿಸಬೇಕೆಂದು
ಕೇಳಿಕೊಂಡಿದ್ದೇವೆ,
ಅವರೂ
ನಮ್ಮ
ಮನವಿಗೆ
ಸ್ಪಂದಿಸಿದ್ದಾರೆ.
ಪ್ರ:
ಹೊಸ
ವರ್ಷಾಚರಣೆ
ವೇಳೆ
ಏನಾದರೂ
ಅಹಿತಕರ
ಘಟನೆ
ನಡೆದರೆ
ಪೊಲೀಸ್
ಇಲಾಖೆಯೇ
ಹೊಣೆ
ಹೊರಬೇಕಾಗುತ್ತದೆ
ಎಂದು
ರಾಜ್ಯ
ಸರ್ಕಾರಕ್ಕೆ
ಹೈಕೋರ್ಟ್
ಎಚ್ಚರಿಕೆ
ನೀಡಿದೆ,
ಈ
ಬಗ್ಗೆ?
ಕಮಿಷನರ್:
ಡಿಸೆಂಬರ್
31
ಮತ್ತು
ಜನವರಿ
1ರಂದು
ಕರ್ನಾಟಕದಾದ್ಯಂತ
ಮದ್ಯಪಾನ
ನಿಷೇಧ
ಮಾಡಬೇಕೆಂದು
ಪಿಐಎಲ್
ಸಲ್ಲಿಸಲಾಗಿತ್ತು.
ಈ
ವಿಚಾರಣೆಯ
ವೇಳೆ
ಮಾನ್ಯ
ಉಚ್ಚನ್ಯಾಯಾಲಯ
ನಿರ್ದೇಶನವನ್ನು
ನೀಡಿದೆ.
ಕಾನೂನು
ಮತ್ತು
ಸುವ್ಯವಸ್ಥೆಯನ್ನು
ಕಾಪಾಡಿಕೊಂಡು
ಬರಲು
ಹೈಕೋರ್ಟ್
ಸೂಚನೆ
ನೀಡಿದೆ.
ಅದಕ್ಕೆ
ಸೂಕ್ತ
ಬಂದೋಬಸ್ತ್
ನಾವು
ಮಾಡುತ್ತೇವೆ.
ಪ್ರ:
ಎಂ
ಜಿ
ರಸ್ತೆ,
ಬ್ರಿಗೇಡ್
ರಸ್ತೆ
ಮತ್ತು
ಚರ್ಚ್
ಸ್ಟ್ರೀಟ್
ನಲ್ಲಿ
ಪಾರ್ಕಿಂಗ್
ವ್ಯವಸ್ಥೆ
ಇಲ್ಲ
ಎಂದಿದ್ದೀರಾ,
ಬಂದವರು
ಗಾಡಿ
ಎಲ್ಲಿ
ಪಾರ್ಕ್
ಮಾಡಬೇಕು?
ಕಮಿಷನರ್:
ಶಿವಾಜಿನಗರ
ಬಸ್
ಸ್ಟ್ಯಾಂಡ್
ಮತ್ತು
ಇತರ
ಪೂರ್ವ
ನಿಗದಿತ
ಪ್ರದೇಶಗಳಲ್ಲಿ
ಪಾರ್ಕ್
ಮಾಡಬಹುದು.
ಜೊತೆಗೆ,
ಹೊಸವರ್ಷಾಚರಣೆ
ಆಯೋಜಿಸುವ
ಹೊಟೇಲ್
ಗಳು
ಪಾರ್ಕಿಂಗ್
ವ್ಯವಸ್ಥೆ
ಮಾಡಬೇಕೇ
ಹೊರತು,
ಪೊಲೀಸ್
ಕಚೇರಿ
ಇದಕ್ಕೆ
ಜವಾಬ್ದಾರಿಯಲ್ಲ.
ಇದರ
ಹೊಣೆಯನ್ನು
ಸಂಬಂಧಪಟ್ಟ
organizers
ಹೊರಬೇಕು.
ಪ್ರ:
ಹೊಸ
ವರ್ಚಾರಣೆ
ಮಾಡಲು
ಬರುವ
ಶೇ.
70ರಷ್ಟು
ಜನ
ಕುಡಿದು
ಬಂದಿರುತ್ತಾರೆ.
ಕುಡಿದು
ರಸ್ತೆಯಲ್ಲಿ
ಗಲಾಟೆ
ಮಾಡುವುದು,
ಸಾರ್ವಜನಿಕರಿಗೆ
ತೊಂದರೆ
ಕೊಟ್ಟರೆ,
ಶಿಸ್ತುಕ್ರಮ
ಕೈಗೊಳ್ಳುವುದಾಗಿ
ಹೇಳಿದ್ದೀರಾ,
ಈ
ಬಗ್ಗೆ?
ಕಮಿಷನರ್:
ಕುಡಿದು
ಬಂದವರ
ವಿರುದ್ದ
ಪೊಲೀಸ್
ಇಲಾಖೆಯಿಲ್ಲ.
ಜನರು
ಅವರ
ಇತಿಮಿತಿಯಲ್ಲಿ
ಇರಬೇಕು.
ಕುಡಿದು
ರಸ್ತೆಯಲ್ಲಿ
ಗಲಾಟೆ
ಮಾಡುವುದು,
ಬಾಟಲ್
ಅನ್ನು
ರಸ್ತೆಯಲ್ಲಿ
ಒಡೆಯುವುದು,
ಹೆಣ್ಣುಮಕ್ಕಳನ್ನು
ಚುಡಾಯಿಸುವುದು
ಮುಂತಾದ
ತಪ್ಪು
ಕೆಲಸಗಳನ್ನು
ಮಾಡಿದರೆ,
ಅಲ್ಲೇ
ಬಂದೋಬಸ್ತಿನಲ್ಲಿರುವ
ಪೊಲೀಸರು
ಅಂಥವರನ್ನು
ಮುಲಾಜಿಲ್ಲದೇ
ಅರೆಸ್ಟ್
ಮಾಡುತ್ತಾರೆ.
ಪ್ರ:
ಒಂದು
ಕಡೆ
ಎರಡು
ಗಂಟೆಯ
ತನಕ
ಬಾರ್
ಎಂಡ್
ರೆಸ್ಟೋರೆಂಟ್
ನಡೆಸಲು
ಅನುಮತಿ
ನೀಡುತ್ತೀರಾ,
ಇನ್ನೊಂದೆಡೆ
ಕುಡಿದು
ಗಾಡಿ
ಚಲಾಯಿಸಿದರೆ
ಕೇಸ್
ಹಾಕುತ್ತೇವೆ
ಅಂತೀರಾ?
ಕಮಿಷನರ್:
ಹೌದು,
ಕುಡಿದು
ಗಾಡಿ
ಚಲಾಯಿಸಬಾರದು.
ಕುಡಿದು
ಗಾಡಿಯಲ್ಲಿ
ಹಿಂದುಗಡೆ
ಕುಳಿತುಕೊಂಡು
ಹೋಗಬಾರದೆಂದು
ನಾವು
ಹೇಳಿಲ್ಲ.
ಕುಡಿದು
ಗಾಡಿ
ಚಲಾಯಿಸಿದರೆ
ಅಪಘಾತ
ಆಗುವ
ಸಾಧ್ಯತೆಯಿದೆ,
ಜೊತೆಗೆ
ಇವರಿಂದ
ರಸ್ತೆಯಲ್ಲಿ
ಹೋಗುವವರಿಗೂ
ತೊಂದರೆಯಾಗುತ್ತದೆ.
ಅವರ
ಒಳ್ಳೆಯದಕ್ಕೇ
ಈ
ಕ್ರಮ
ತೆಗೆದುಕೊಂಡಿದ್ದೇವೆ.
ಪ್ರ:
ಹೊಸ
ವರ್ಷಾಚರಣೆಯ
ವೇಳೆ
ಬರುವ
ಮಹಿಳೆಯರು
ಹಾಗೂ
ಮಕ್ಕಳ
ಸುರಕ್ಷತೆಗೆ,
ವಿಶೇಷ
ಭದ್ರತೆ
ವ್ಯವಸ್ಥೆ
ಏನಾದರೂ
ಮಾಡಿದ್ದೀರಾ?
ಕಮಿಷನರ್:
ಈ
ಬಾರಿ
ಹೆಚ್ಚಿನ
ಸಂಖ್ಯೆಯಲ್ಲಿ
ಮಹಿಳಾ
ಪೊಲೀಸರನ್ನು
ನೇಮಕ
ಮಾಡುತ್ತಿದ್ದೇವೆ.
ಸಾಮಾನ್ಯವಾಗಿ
ಎಲ್ಲಿ
ಜನ
ಜಾಸ್ತಿ
ಸೇರುತ್ತಾರೋ,
ಆ
ಭಾಗದಲ್ಲಿ
ಎರಡು
ಸಾವಿರ
ಪೊಲೀಸರನ್ನು
ನೇಮಕ
ಮಾಡುತ್ತಿದ್ದೇವೆ.
ಈವಾಗ
ಇರುವ
ಸಿಸಿಟಿವಿಯನ್ನು
ಬಿಟ್ಟು
ಇನ್ನೂ
200
ಹೆಚ್ಚುವರಿ
ಸಿಸಿಟಿವಿ
ಆವತ್ತಿನ
ದಿನ
ಅಳವಡಿಸುತ್ತಿದ್ದೇವೆ.