ಕಾರ್ಮಿಕರ ಜತೆ ನಂದನ್ 'ರಾಮನವಮಿ' ಆಚರಣೆ
ಬೆಂಗಳೂರು, ಏ.9: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿಯವರು ರಾಮನವಮಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ. ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ ಅವರು ಅಲ್ಲಿನ ಕಾರ್ಮಿಕರೊಂದಿಗೆ ಕಷ್ಟಸುಖ ವಿಚಾರಿಸಿಕೊಳ್ಳುತ್ತ ಆಪ್ತವಾಗಿ ಬೆರೆತರು.
ಕಾರ್ಮಿಕರ ವೇತನ, ಆರೋಗ್ಯದ ಸಮಸ್ಯೆಗಳು ಇನ್ನಿತರ ವಿಚಾರಗಳನ್ನು ನಂದನ್ ಚರ್ಚಿಸಿದರು. ನಂದನ್ ಅವರೊಂದಿಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಕುಪೇಂದ್ರ ರೆಡ್ಡಿ, ನಾಗಭೂಷಣರೆಡ್ಡಿ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರು ಕೂಡ ಪಾಲ್ಗೊಂಡಿದ್ದರು. ನಂತರ ಪುಟ್ಟೇನಹಳ್ಳಿಯ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ರಾಮನವಮಿಯ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಪುಟ್ಟೇನಹಳ್ಳಿಯಲ್ಲಿ ನಂದನ್ ನಿಲೇಕಣಿ
ಪುಟ್ಟೇನಹಳ್ಳಿಯ ಶ್ರೀ ರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ರಾಮನವಮಿಯ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ ನಂದನ್
ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ ಅವರು ಅಲ್ಲಿನ ಕಾರ್ಮಿಕರೊಂದಿಗೆ ಕಷ್ಟಸುಖ ವಿಚಾರಿಸಿಕೊಳ್ಳುತ್ತ ಆಪ್ತವಾಗಿ ಬೆರೆತರು.
ಸಮಸ್ಯೆ ಚರ್ಚಿಸಿದ ನಂದನ್ ನಿಲೇಕಣಿ
ಕಾರ್ಮಿಕರ ವೇತನ, ಆರೋಗ್ಯದ ಸಮಸ್ಯೆಗಳು ಇನ್ನಿತರ ವಿಚಾರಗಳನ್ನು ನಂದನ್ ಚರ್ಚಿಸಿದರು.
ಕ್ಷೇತ್ರದ ಬಗ್ಗೆ ಮತದಾರರಲ್ಲಿ ಅರಿವು
ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಭೇಟಿ ನೀಡಿದ ಅವರು ಅಲ್ಲಿನ ಕಾರ್ಮಿಕರೊಂದಿಗೆ ಕಷ್ಟಸುಖ ವಿಚಾರಿಸಿಕೊಂಡ ನಂತರ ಕ್ಷೇತ್ರದ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ ಮತಯಾಚಿಸಿದರು.
ನಂದನ್ ಕಾರ್ಯಕರ್ತರಿಂದ ಪ್ರಚಾರ
ನಂದನ್ ಪರ ಕಾರ್ಯಕರ್ತರು ಜಯನಗರದ ಸೌತ್ ಎಂಡ್ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ಮತಯಾಚಿಸಿದರು.
ಜಯನಗರ: ವೋಟ್ ಫಾರ್ ನಂದನ್
ನಂದನ್ ಪರ ಕಾರ್ಯಕರ್ತರು ಜಯನಗರದ ಸೌತ್ ಎಂಡ್ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ಮತಯಾಚಿಸಿದರು.