ರಾಜರಾಜೇಶ್ವರಿ ನಗರದಲ್ಲಿ ಸಾವಿರ ಸಸಿ ನೆಡುವ 'ಕಾಡಹಬ್ಬ'
ಬೆಂಗಳೂರು, ಜು.10: ಆರ್ಆರ್ ನಗರ ಐ ಕೇರ್ ಸಂಸ್ಥೆಯು ಜು.15ರಂದು 'ನಮ್ಮ ಕಾಡಹಬ್ಬ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮ ಬೆಳಗ್ಗೆ 7ರಿಂದ 10ರವರೆಗೆ ನಡೆಯಲಿದೆ.
ಆರ್ ಆರ್ ನಗರ- ಐ - ಕೇರ್ ಸಂಸ್ಥೆಯು ಲಾಭದಾಯಕವಲ್ಲದ ಸಮುದಾಯ ಸೇವಾ ಗುರಿಯ ಸರ್ಕಾರೇತರ ಸಂಘಟನೆಯಾಗಿದೆ. ಈ ಸಂಸ್ಥೆಯು 2013 ರಿಂದ, 'ಹಸಿರು ಮತ್ತು ಸ್ವಚ್ಛ ಆರ್ ಆರ್ ನಗರ' ನಿರ್ಮಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ದೇಶಿ ತಳಿ ಸಸಿ ನೆಡಲು ಬಿಬಿಎಂಪಿ ನಿರ್ಧಾರ
ಈ ಮಹತ್ಕಾರ್ಯಕ್ಕಾಗಿ ವೃತ್ತಿಪರರು,ತಜ್ಞರು, ನಾಗರೀಕರು, ವರ್ತಕರು,ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು,ಸ್ಥಳೀಯ ನಿವಾಸಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ, ನಾನಾ ಕ್ಷೇತ್ರದ ಸಂಘ-ಸಂಸ್ಥೆಗಳನ್ನುಪಾಲುದಾರರನ್ನಾಗಿ ಮಾಡಿಕೊಂಡಿದ್ದಾರೆ.
ಆರ್ ಆರ್ ನಗರ- ಐ - ಕೇರ್' ಹಾಗೂಕರ್ನಾಟಕ ಅರಣ್ಯ ಇಲಾಖೆಯ ಜಂಟಿಸಹಯೋಗದಲ್ಲಿ ಜುಲೈ 15 ರಂದು, ಅರಣ್ಯ ಸಂರಕ್ಷಣಾಧಿಕಾರಿ, ದೀಪಿಕಾಬಾಜ್ಪೈ, ನೇತೃತ್ವದಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ತುರಹಳ್ಳಿ ಅರಣ್ಯಪ್ರದೇಶದಲ್ಲಿ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಸಿಗಳನ್ನು ಕರ್ಣಾಟಕ ಅರಣ್ಯ ಇಲಾಖೆ ಒದಗಿಸುತ್ತಿದೆ. ಅರಣ್ಯ ಇಲಾಖೆಯ ನರ್ಸರಿಯಿಂದ ಸಸಿಗಳನ್ನು ಅರಣ್ಯಕ್ಕೆ ಸಾಗಿಸುವ ಜವಾಬ್ದಾರಿಯನ್ನು ಲಿಯೊಪ್ಯಾಕರ್ಸ್ ಅಂಡ್ ಮೂವರ್ಸ್ ಹಿಸಿಕೊಂಡಿದೆ.
ಬಾಲಾಜಿ ಕನ್ಸ್ಟ್ರಕ್ಶನ್ಸ್ ಹಾಗೂ ಬೆಸ್ಟ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ನಾಗರಿಕರು ಗುಂಡಿಗಳನ್ನುತೋಡಲು ಕೈ ಜೋಡಿಸಿದ್ದಾರೆ. ಮಂತ್ರಿ ಅಲ್ಪೈನ್ ಸಂಸ್ಥೆ ಗೊಬ್ಬರವನ್ನು ಒದಗಿಸುತ್ತಿದೆ. ಜೊತೆಗೆಬಿಜಿಎಸ್ ಗ್ಲೋಬಲ್ ಆಸ್ಪತ್ರೆ ವೈದ್ಯಕೀಯನೆರವು ನೀಡುತ್ತಿದೆ.
ನಮ್ಮ ಸುತ್ತ ಮುತ್ತಲಿನ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಸ್ಥಳೀಯ ನಾಗರೀಕರು, ಈಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುಂದೆಬಂದಿದ್ದಾರೆ.
ನಮ್ಮ ಈ ಪರಿಸರ ಕಾಳಜಿಗೆ ಸ್ಟ್ಯಾಂಡರ್ಡ್ ಚಾರ್ಟರ್ಡ್, ಆರೆಕಲ್ ಸೇರಿದಂತೆಕಾರ್ಪೊರೇಟ್ ವಲಯದ ಹಲವು ಕಂಪನಿಗಳು ಮತ್ತು ಸ್ವಯಂ ಸೇವಾ ಕಾರ್ಯಕರ್ತರು ಕೈಜೋಡಿಸಿದ್ದಾರೆ. ಅರಣ್ಯದಲ್ಲಿ ಮರಗಳನ್ನು ಬೆಳೆಸುವ ಈಕಾರ್ಯಕ್ರಮಕ್ಕೆ ನಾಟಿ ಸಸಿಗಳನ್ನು ಆಯ್ಕೆಮಾಡಲಾಗಿದೆ.