ಎಂಎಲ್ಸಿ ವಿ.ಎಸ್.ಉಗ್ರಪ್ಪ ವಿರುದ್ಧ ಎಫ್ಐಆರ್
ಬೆಂಗಳೂರು, ಮಾರ್ಚ್ 19 : ಕಾಂಗ್ರೆಸ್ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೋರ್ಟ್ ಆದೇಶದಂತೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ವಿ.ಎಸ್.ಉಗ್ರಪ್ಪ
ಅವರ
ಹೆಸರು
ಎರಡು
ಕಡೆ
ಮತದಾರರ
ಪಟ್ಟಿಯಲ್ಲಿತ್ತು.
ಈ
ಬಗ್ಗೆ
ಬಿಜೆಪಿ
ಮುಖಂಡ
ಎನ್.ಆರ್.ರಮೇಶ್
ಕೋರ್ಟ್ಗೆ
ದೂರು
ಕೊಟ್ಟಿದ್ದರು.
ದೂರಿನ
ವಿಚಾರಣೆ
ನಡೆಸಿದ
ಬೆಂಗಳೂರಿನ
6ನೇ
ಎಸಿಎಂಎಂ
ಕೋರ್ಟ್
ಎಫ್ಐಆರ್
ದಾಖಲು
ಮಾಡಲು
ಸೂಚನೆ
ನೀಡಿತ್ತು.
[ಉಗ್ರಪ್ಪ
ಚಡ್ಡಿ
ಹಾಕೋಳಕ್ಕೆ
ಶುರು
ಮಾಡ್ಕೊಂಡಿದ್ದು
ಯಾವತ್ತಿಂದ?]
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಾಪುರ ಗ್ರಾಮ ಮತ್ತು ಬೆಂಗಳೂರು ನಗರದ ಎಚ್ಎಸ್ಆರ್ ಬಡಾವಣೆಯ 6ನೇ ಹಂತದಲ್ಲಿನ ಮತದಾರರ ಪಟ್ಟಿಯಲ್ಲಿ ವಿ.ಎಸ್.ಉಗ್ರಪ್ಪ ಅವರ ಹೆಸರಿದೆ. ಇದು ವಿಚಾರಣೆ ವೇಳೆಯೂ ಸ್ಪಷ್ಟವಾಗಿದೆ. ಆದ್ದರಿಂದ, ಎಫ್ಐಆರ್ ದಾಖಲು ಮಾಡಲು ಕೋರ್ಟ್ ಆದೇಶಿಸಿತ್ತು. [ಭ್ರಷ್ಟ ಪತ್ರಕರ್ತರನ್ನು ಜೈಲಿಗೆ ಕಳಿಸಿ: ಉಗ್ರಪ್ಪ]
ಎಚ್ಎಸ್ಆರ್ ಲೇಔಟ್ ಪೊಲೀಸರು ಉಗ್ರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದು, ಪ್ರಜಾ ಪ್ರತಿನಿಧಿ ಕಾಯ್ದೆ-1950 1951, 1989 ಯು/ಎಸ್ 31ರ ಅಡಿ ಎಫ್ಐಆರ್ ದಾಖಲಿಸಿದ್ದಾರೆ.