ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರ ನೇಮಕ
ಬೆಂಗಳೂರು, ಜನವರಿ 22: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರ ನೇಮಕ ಮಾಡಿ ಕರ್ನಾಟಕ ಸರ್ಕಾರ ಶುಕ್ರವಾರ (ಜನವರಿ 22)ದಂದು ಆದೇಶ ನೀಡಿದೆ.
ಒಟ್ಟು 6 ಸದಸ್ಯರ ನೇಮಕ ಮಾಡಲಾಗಿದೆ. ಹೊಸ ಸದಸ್ಯರ ಹೆಸರುಗಳು ಹೀಗಿವೆ:
ತಲಕಾಡು ಚಿಕ್ಕರಂಗೇಗೌಡ, ಗಂಗಹನುಮಯ್ಯ, ಎನ್. ಮುನಿರಾಜುಗೌಡ, ಡಾ. ಎಚ್.ಎಂ. ಕೃಷ್ಣಮೂರ್ತಿ, ಡಾ. ಶೇಖ್ ಮಸ್ತಾನ್ ಹಾಗೂ ರಂಗಸ್ವಾಮಿ.
ಮುಂದಿನ ಮೂರು ವರ್ಷ ಅಥವಾ ಸರ್ಕಾರದ ಮುಂದಿನ ಆದೇಶದ ವರೆಗೆ ನಾಮನಿರ್ದೇಶಿತ ಸದಸ್ಯರಾಗಿ ಮುಂದುವರೆಯಲಿದ್ದಾರೆ.
ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮವನ್ನು ವಿಶ್ವದರ್ಜೆಯ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಲು 35 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
Recommended Video
ರಾಜ್ಯದಲ್ಲಿ
ಗಣಿಗಾರಿಕೆ
ಅವಶ್ಯಕತೆ
ಇದೆ,
ಆದ್ರೆ
illegal
mining
ವಿರುದ್ಧ
ನಿರ್ದಾಕ್ಷಿಣ್ಯ
ಕ್ರಮ-
CM
BSY
|
Oneindia
Kannada
ಇದೇ ರೀತಿ ಕೆಂಪೇಗೌಡರಿಗೆ ಸಂಬಂಧಿಸಿದ ಸುಮಾರು 46 ತಾಣಗಳನ್ನು ಅನುಸಂಧಾನಗೊಳಿಸಿ ಅವರ ಸಾಧನೆಗಳನ್ನು ಅಜರಾಮರಗೊಳಿಸಬೇಕು ಎಂಬುದೇ ಸರಕಾರದ ಆಶಯವಾಗಿದೆ.
Comments
English summary
Nadaprabhu Kempegowda Heritage Site Development Authority gets six new nominated members.
Story first published: Friday, January 22, 2021, 21:42 [IST]