ಬೆಂಗಳೂರು ಉಳಿವಿಗಾಗಿ ನಾಗರಿಕರು, ಜನಪ್ರತಿನಿಧಿಗಳ ಒಂದು ಸಂವಾದ
ಬೆಂಗಳೂರು, ಸೆಪ್ಟೆಂಬರ್ 22: ಯುನೈಟೆಡ್ ಬೆಂಗಳೂರು ಸಂಸ್ಥೆಯು ಬೆಂಗಳೂರಿನ ಉಳಿವಿಗಾಗಿ 'ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಾಗರಿಕರ ಸಂವಾದ' ವನ್ನು ಸೆ.29ರಂದು ಶನಿವಾರ ಇಂದಿರಾನಗರ ಕ್ಲಬ್ನಲ್ಲಿ ಹಮ್ಮಿಕೊಂಡಿದೆ.
ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು, ಗೃಹಿಣಿಯರು ಯಾರು ಬೇಕಾದರೂ ಈ ಸಂವಾದದಲ್ಲಿ ಪಾಲ್ಗೊಳ್ಳಬಹುದಾಗಿದೆ, ಈ ಬೆಂಗಳೂರಿನ ಭವಿಷ್ಯವನ್ನು ಉತ್ತಮವಾಗಿಸಲು ಎಲ್ಲರೂ ಪಾಲುದಾರರು ಎಂದು ಸಂಸ್ಥೆ ಹೇಳಿದೆ.
ಬೆಂಗಳೂರಿನ ಉಳಿವಿಗಾಗಿ “ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಬೆಂಗಳೂರು ನಾಗರೀಕರ ಸಂವಾದ” ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಶನಿವಾರ, 29 ಸೆಪ್ಟೆಂಬರ್ 2018ಕ್ಕೆ ಮುಂದೂಡಲಾಗಿದೆ.
— United Bengaluru (@unitedbengaluru) September 19, 2018
ಸ್ಥಳ: ಇಂದಿರಾನಗರ ಕ್ಲಬ್
ಸಮಯ: ಬೆಳಗ್ಗೆ 10 ಗಂಟೆ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
+91-8861768806
+91-9591143888#ReclaimBengaluru pic.twitter.com/PVi1DeEvpZ
ಜನವಸತಿ ಪ್ರದೇಶಗಳಲ್ಲಿನ ಅಕ್ರಮ ವಾಣಿಜ್ಯೀಕರಣಸಿಂದ ವಾಯುಮಾಲಿನ್ಯ, ಶಬ್ದ ಮಾಲಿನ್ಯದಿಂದ ನಾಗರಿಕರ ಬದುಕನ್ನು ಕಸಿಯುತ್ತಿದೆಯೇ? ಬಾರ್ ಮತ್ತು ರಾತ್ರಿ ಕ್ಲಬ್ ಗಳ ಹಾವಳಿಯಿಂದ ಜನರಿಗೆ ತೊಂದರೆಯಾಗುತ್ತಿದೆಯೇ ಹೀಗೆ ವಿವಿಧ ವಿಚಾರಗಳ ಕುರಿತು ಜನಪ್ರತಿನಿಧಿಗಳ ಜೊತೆ ಮುಕ್ತವಾಗಿ ಮಾತನಾಡಬಹುದಾಗಿದೆ. ಸೆ.29ರಂದು ಶನಿವಾರ ಇಂದಿರಾನಗರ ಕ್ಲಬ್ನಲ್ಲಿ ಬೆಳಗ್ಗೆ 10 ಗಂಟೆಗೆ ಸಂವಾದ ನಡೆಯಲಿದೆ.
ಇದನ್ನು ಹೊರತುಪಡಿಸಿ ಇನ್ಯಾವುದೇ ತೊಂದರೆಗಳಿದ್ದರೂ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ, ಇತ್ತೀಚೆಗೆ ಇಂದಿರಾನಗರದಲ್ಲಿ ಅನಧಿಕೃತ ಕ್ಲಬ್ಗಳ ಹಾವಳಿಯಿಂದ ಬೇಸತ್ತಿದ್ದ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ಪೊಲೀಸರು ಹಲವು ಕ್ಲಬ್ ಗಳ ಮೇಲೆ ದಾಳಿ ನಡೆಸಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಕ್ಲಬ್ ಗಳಿ ಬೀಗ ಹಾಕಿತ್ತು.
ಅಷ್ಟೇ ಅಲ್ಲದೆ ಕ್ಲಬ್ಗಳಲ್ಲಿ ಲೈವ್ ಬ್ಯಾಂಡ್ ನಿಷೇಧಿಸುವಂತೆ ಕೂಡ ಮನವಿ ಮಾಡಿ ಹಲವು ಕಡೆ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಯುನೈಟೆಡ್ ಬೆಂಗಳೂರು ಇದೀಗ ನಾಗರಿಕರಿಗೆ ಒಂದು ಅವಕಾಶ ಮಾಡಿಕೊಟ್ಟಿದ್ದು ಏನೇ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳಲ್ಲಿ ಹೇಳಿಕೊಳ್ಳಬಹುದಾಗಿದೆ.