ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಯುಧ ಪೂಜೆ ತಂದ ಸಂಕಷ್ಟ, ಮುತ್ತಪ್ಪ ರೈಗೆ ಸಿಸಿಬಿ ನೊಟೀಸ್‌

|
Google Oneindia Kannada News

ಬೆಂಗಳೂರು, ಅಕ್ಟೋಬರ್ 20: ಆಯುಧ ಪೂಜೆಯಂದು ಗನ್‌ಗಳು, ಡ್ರಾಗರ್‌ಗಳನ್ನು ಇಟ್ಟು ಪೂಜೆ ಮಾಡಿದ್ದ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈಗೆ ಸಿಸಿಬಿ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ.

ಅಕ್ರಮ ಮದ್ಯ ದಾಸ್ತಾನು, ಕಪಾಲಿ ಮೋಹನ್ ವಿರುದ್ಧ ಮತ್ತೊಂದು ಕೇಸ್ಅಕ್ರಮ ಮದ್ಯ ದಾಸ್ತಾನು, ಕಪಾಲಿ ಮೋಹನ್ ವಿರುದ್ಧ ಮತ್ತೊಂದು ಕೇಸ್

ಮೊನ್ನೆ ಆಯುಧ ಪೂಜೆಯಂದು ಮುತ್ತಪ್ಪ ರೈ ಅವರು ವಿವಿಧ ಗನ್‌ಗಳು, ಡ್ರಾಗರ್‌ಗಳನ್ನು ಮನೆಯ ಮುಂದೆ ಇಟ್ಟು ಪೂಜೆ ಮಾಡುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ಇದು ಸಿಸಿಬಿ ಕೆಂಗಣ್ಣಿಗೆ ಗುರಿ ಆಗಿತ್ತು.

ಜೂಜು ಅಡ್ಡೆ ದಾಳಿ : ಕಪಾಲಿ ಮೋಹನ್ ಗಾಗಿ ಪೊಲೀಸರಿಂದ ಶೋಧ ಜೂಜು ಅಡ್ಡೆ ದಾಳಿ : ಕಪಾಲಿ ಮೋಹನ್ ಗಾಗಿ ಪೊಲೀಸರಿಂದ ಶೋಧ

Muthappa Rai gets notice from CCB police

ಇಂದು ಸಿಸಿಬಿ ಮುಂದೆ ಹಾಜರಾಗುವಂತೆ ಸಿಸಿಬಿ ನೊಟೀಸ್ ಜಾರಿ ಮಾಡಿದ್ದು, ಸಂಜೆಯೊಳಗೆ ಹಾಜರಾಗಿ ಸ್ಪಷ್ಟನೆ ನೀಡಬೇಕಿದೆ. ವಿಚಾರಣೆಗೆ ಬರುವ ಸಮಯ ಆಯುಧ ಪೂಜೆಯಂದು ಪೂಜೆ ಮಾಡಿದ ಎಲ್ಲ ಗನ್‌ಗಳು ಹಾಗೂ ಡ್ರಾಗರ್‌ಗೆ ಲೈಸನ್ಸ್‌ ತರುವಂತೆ ಸಿಸಿಬಿಯು ಹೇಳಿದೆ.

ಮಂಗಳೂರಲ್ಲಿ 'ಮಾದಕ' ಪ್ರೇಮ: ಪ್ರಿಯನಿಗಾಗಿ ಜೈಲಿಗೆ ಗಾಂಜಾ ತಂದ ಯುವತಿ ಮಂಗಳೂರಲ್ಲಿ 'ಮಾದಕ' ಪ್ರೇಮ: ಪ್ರಿಯನಿಗಾಗಿ ಜೈಲಿಗೆ ಗಾಂಜಾ ತಂದ ಯುವತಿ

Muthappa Rai gets notice from CCB police

ಅಕ್ರಮ ಶಶಾಸ್ತ್ರ ಹೊಂದಿರುವ ಆರ್ಮ್ಸ್‌ ಆಕ್ಟ್‌ ಅಡಿಯಲ್ಲಿ ಮುತ್ತಪ್ಪ ರೈಗೆ ನೊಟೀಸ್ ಜಾರಿ ಮಾಡಿದ್ದು ಸಿಸಿಬಿ ಪೊಲೀಸ್ ಎಸಿಪಿ ಮರಿಯಪ್ಪ ಅವರ ಮುಂದೆ ಮುತ್ತಪ್ಪ ರೈ ವಿಚಾರಣೆಗೆ ಹಾಜರಾಗಬೇಕಿದೆ.

English summary
Muthappa Rai gets notice from CCB police. A photo of Muthappa Rai performing pooja to some guns and deadly weapons went viral so CCB issued notice under illegal arms act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X