ರಂಜಾನ್ ಉಪವಾಸದ ಬಗ್ಗೆ ಡಬ್ಲ್ಯೂಎಚ್ಒ ನೀಡಿದ ಸಲಹೆ ಪಾಲಿಸಬೇಕು
ಬೆಂಗಳೂರು, ಏಪ್ರಿಲ್ 22: ಇಡೀ ಜಗತ್ತನ್ನು ಕೊರೊನಾ ಕಿತ್ತು ತಿನ್ನುತ್ತಿದೆ. ಮತ್ತೊಂದೆಡೆ ರಂಜಾನ್ ಹಬ್ಬದ ಹತ್ತಿರವಾಗ್ತಿದೆ. ದೇಶದ ಹಲವು ಕಡೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿರುವ ಘಟನೆಗಳು ವರದಿಯಾಗಿದ್ದು, ಸಹಜವಾಗಿ ಇದು ಆತಂಕ ಸೃಷ್ಟಿಸಿದೆ.
Recommended Video
ರಂಜಾನ್ ಹಬ್ಬದ ಪ್ರಯುಕ್ತ ಈ ವಾರದಿಂದ ಉಪವಾಸ ಆರಂಭವಾಗುತ್ತಿದೆ. ಈ ಸಲ ಉಪವಾಸ ಮಾಡುವವರಿಗೆ ಡಬ್ಲ್ಯೂ ಎಚ್ ಒ ಉಪಯುಕ್ತ ಸಲಹೆಗಳನ್ನು ನೀಡಿದೆ. ಕೊರೊನಾ ವೈರಸ್ ಭೀತಿಯಲ್ಲಿರುವ ಈ ಸಂದರ್ಭದಲ್ಲಿ ಎಲ್ಲರೂ ಉಪವಾಸ ಮಾಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ರಂಜಾನ್ ಪ್ರಾರ್ಥನೆ ಕುರಿತು ರಾಜ್ಯಗಳಿಗೆ ಎಚ್ಚರಿಸಿದ ಕೇಂದ್ರ ಸರ್ಕಾರ
ಡಬ್ಲ್ಯೂ ಎಚ್ ಒ ಉಲ್ಲೇಖಿಸಿರುವ ಅಂಶಗಳನ್ನು ಕರ್ನಾಟಕ ಮುಖ್ಯಮಂತ್ರಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಕರ್ನಾಟಕದಲ್ಲಿರುವ ಮುಸ್ಲಿಂರು ಈ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದ್ದಾರೆ.
ಕೋವಿಡ್19 ರ ತಡೆಗೆ ರಂಜಾನ್ ಉಪವಾಸದ ವೇಳೆ ಪಾಲಿಸಬೇಕಾದ, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಗಳನ್ನು ಎಲ್ಲ ಮುಸಲ್ಮಾನ ಬಾಂಧವರು ತಪ್ಪದೇ ಪಾಲಿಸಬೇಕು.#ಮನೆಯಲ್ಲೇಇರಿ#KarnatakaFightsCorona @BSYBJP pic.twitter.com/byLsfyBudM
— CM of Karnataka (@CMofKarnataka) April 22, 2020
* ಅರೋಗ್ಯವಾಗಿದ್ದರೆ ಮಾತ್ರ ಉಪವಾಸ ಮಾಡಬೇಕು
* ವೈದ್ಯರ ಸಲಹೆ ಇಲ್ಲದೆ ಉಪವಾಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ
* ಉಸಿರಾಟದ ಸಮಸ್ಯೆ ಇದ್ದರಂತೂ ವೈದ್ಯರ ಸಲಹೆ ಪಡೆಯಲೇಬೇಕು.
* ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಅಲ್ಲಿಯೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು
* ಪ್ರಾರ್ಥನೆಗೆ ಜನ ಸೇರಬಾರದು, ಇಫ್ತಾರ್ ಕೂಟ ಬೇಡ
* ಈ ಸಲಹೆಗಳನ್ನು ಧಾರ್ಮಿಕ ಮುಖಂಡರು ಎಲ್ಲರಿಗೂ ನೀಡಬೇಕು
ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ರಂಜಾನ್ ಪ್ರಯುಕ್ತ ಎಲ್ಲಿಯೂ ಸಾಮೂಹಿಕ ಪ್ರಾರ್ಥನೆ ನಡೆಯಬಾರದು, ಜನರು ಗುಂಪು ಸೇರಬಾರದಂತೆ ಎಚ್ಚರ ವಹಿಸಿ ಎಂದು ಆದೇಶಿಸಿದೆ.