ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 07 : 50 ರೂ. ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಖರೀದಿಗಾಗಿ ಹಣ ಕೇಳಲಾಗಿತ್ತು.

ದೇವರಜೀವನ ಹಳ್ಳಿ ಪೊಲೀಸರು ಡಿ. ಜಿ. ಹಳ್ಳಿಯ ನಿವಾಸಿ ಸಯ್ಯದ್ ವಾಸೀಂ (19) ಕೊಲೆ ಪ್ರಕರಣದ ಆರೋಪಿ ಶಬೀರ್ (20) ಬಂಧಿಸಿದ್ದಾರೆ. ಬೇಕರಿಯಲ್ಲಿ ವಾಸೀಂ ಕೆಲಸ ಮಾಡುತ್ತಿದ್ದು, ಶಬೀರ್ ಮರದ ಕೆಲಸ ಮಾಡಿಕೊಂಡಿದ್ದ, ಇಬ್ಬರು ಪರಿಚಿತರು.

22 ಇಂಚಿನ ರಂಧ್ರದ ಮೂಲಕ ಜೈಲಿನಿಂದ ಕೊಲೆ ಆರೋಪಿಗಳು ಎಸ್ಕೇಪ್22 ಇಂಚಿನ ರಂಧ್ರದ ಮೂಲಕ ಜೈಲಿನಿಂದ ಕೊಲೆ ಆರೋಪಿಗಳು ಎಸ್ಕೇಪ್

ಮಂಗಳವಾರ ರಾತ್ರಿ ಗಾಂಜಾ ಖರೀದಿ ಮಾಡಲು 50 ರೂ. ಕೊಡುವಂತೆ ವಾಸೀಂ ಬಳಿ ಶಬೀರ್ ಕೇಳಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ರಸ್ತೆಯಲ್ಲೇ ಜಗಳವಾಗಿತ್ತು. ಸ್ಥಳೀಯರು ಜಗಳ ಬಿಡಿಸಿದ್ದರು.

ಪ್ರಸಾದ ತಿಂದವನ ಕಥೆ ಅಷ್ಟೇ; ಎರಡು ತಿಂಗಳಿಗೊಂದು ಕೊಲೆ ಕಡ್ಡಾಯ! ಪ್ರಸಾದ ತಿಂದವನ ಕಥೆ ಅಷ್ಟೇ; ಎರಡು ತಿಂಗಳಿಗೊಂದು ಕೊಲೆ ಕಡ್ಡಾಯ!

arrest

ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಡಿ. ಜಿ. ಹಳ್ಳಿಯ ಮೋದಿ ರಸ್ತೆಯಲ್ಲಿ ವಾಸೀಂ ನಡೆದು ಹೋಗುತ್ತಿದ್ದಾಗ ಶಬೀರ್ ಪುನಃ ಜಗಳ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಶಬೀರ್ ವಾಸೀಂ ಎದೆಗೆ ಚೂಪಾದ ವಸ್ತುವನ್ನು ಚುಚ್ಚಿದ್ದಾನೆ.

ಅಯ್ಯಪ್ಪ ದೊರೆ ಹತ್ಯೆ; 9 ಕೋಟಿ ವ್ಯವಹಾರ ಕೊಲೆಯಲ್ಲಿ ಅಂತ್ಯ! ಅಯ್ಯಪ್ಪ ದೊರೆ ಹತ್ಯೆ; 9 ಕೋಟಿ ವ್ಯವಹಾರ ಕೊಲೆಯಲ್ಲಿ ಅಂತ್ಯ!

ಕ್ಷಿಪ್ರ ಕಾರ್ಯಾಚರಣೆ ನಡೆಸಿದ ದೇವರಜೀವನಹಳ್ಳಿ ಪೊಲೀಸರು ರಾತ್ರಿ ಶಬೀರ್ ಬಂಧಿಸಿದ್ದಾರೆ. ಆರೋಪಿ ವಿಚಾರಣೆ ನಡೆಸಲಾಗುತ್ತಿದ್ದು, ಗಾಂಜಾ ಪೂರೈಕೆ ಮಾಡುತ್ತಿದ್ದವರು ಯಾರು? ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

English summary
Devarajeevanahalli police arrested Shabir (20) in connection with the murder of Sayyad (19) for only 50 Rs. Shabir stabbed Sayyad on November 6, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X