ಭಾರತರತ್ನ ಸಿಎನ್ನಾರ್ ರಾವ್ ಸರಳತೆ ತಲೆಬಾಗಿದ ತೇಜಸ್ವಿ ಸೂರ್ಯ
ಬೆಂಗಳೂರು, ಮೇ 30: ಲೋಕಸಭೆ ಚುನಾವಣೆ 2019ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ಜಯ ದಾಖಲಿಸಿದ ತೇಜಸ್ವಿ ಸೂರ್ಯ ಅವರು ನೂತನ ಸಂಸದರಾಗಿ ಮೋದಿ ಸರ್ಕಾರ 2.0 ಸ್ಥಾಪನೆಗೆ ಸಾಕ್ಷಿಯಾಗಲಿದ್ದಾರೆ.
ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ 6 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ.
Just got off call with Bharat Ratna Prof. CNR Rao!
— Tejasvi Surya (@Tejasvi_Surya) May 30, 2019
'I am resident of Bengaluru South & delighted to get young representative like you. I was going to Basaveshwar Shaka of RSS in Basavanagudi in my younger days. Come to IISc & meet me' he said.
Humility is hallmark of great men!
ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ನೇತೃತ್ವ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದ್ದಲ್ಲದೆ, ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 300 ಗಡಿ ದಾಟಿದ ಭಾರತೀಯ ಜನತಾ ಪಕ್ಷವು 2 ಸ್ಥಾನದಿಂದ ಆರಂಭಿಸಿ 303 ಸ್ಥಾನಕ್ಕೇರಿದೆ.
ಈ ಸಂಭ್ರಮದಲ್ಲಿರುವ ತೇಜಸ್ವಿ ಸೂರ್ಯ ಅವರಿಗೆ ಭಾರತರತ್ನ ಸಿಎನ್ ಅರ್ ರಾವ್ ಅವರು ಫೋನ್ ಕರೆ ಮಾಡಿ ಶುಭ ಹಾರೈಸಿದ್ದಾರೆ. ಈ ಬಗ್ಗೆ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ.
Gave our respects to Atal Bihari Vajpayee Ji at Atal Smarak this morning.
— Tejasvi Surya (@Tejasvi_Surya) May 30, 2019
Whether inviting kin of slain party workers in WB or unfairly targeted SM activists from Karnataka or remembering doyens of party, PM @narendramodi teaches us at every step
With our leader MP @mepratap pic.twitter.com/rVxx3KL2qn
'ನಾನು ಬೆಂಗಳೂರು ದಕ್ಷಿಣದ ನಿವಾಸಿ ಹಾಗೂ ನನ್ನ ಕ್ಷೇತ್ರವನ್ನು ನಿಮ್ಮಂಥ ಯುವ ನೇತಾರರು ಪ್ರತಿನಿಧಿಸುತ್ತಿರುವುದು ಸಂತಸ ತಂದಿದೆ. ನಾನು ನನ್ನ ಚಿಕ್ಕಂದಿನಲ್ಲಿ ಬಸವನಗುಡಿಯ ಬಸವೇಶ್ವರ ಆರೆಸ್ಸೆಸ್ ಶಾಖಾಗೆ ಹೋಗುತ್ತಿದ್ದೆ, ನೀವು ಒಮ್ಮೆ ಐಐಎಸ್ಸಿಗೆ ಬಂದು ನನ್ನನ್ನು ಭೇಟಿ ಮಾಡಿ' ಎಂದು ಸಿಎನ್ನಾರ್ ರಾವ್ ಅವರು ನನಗೆ ತಿಳಿಸಿದರು ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ, ಸರಳತೆಯೇ ಶ್ರೇಷ್ಠ ವ್ಯಕ್ತಿಗಳ ಗುರುತು ಎಂದಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರ ಜತೆಗೂಡಿ ಅಟಲ್ ಬಿಹಾರಿ ವಾಜಪೇಯಿ ಅವರ ಅಟಲ್ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದ ಚಿತ್ರವನ್ನು ಹಂಚಿಕೊಂಡಿದ್ದಾರೆ.