ಸಂಸತ್ತಿನಲ್ಲಿ ಬೆಂಗಳೂರು ಕೆರೆ ಒತ್ತುವರಿ ಬಗ್ಗೆ ಧ್ವನಿ ಎತ್ತಿದ ಸಂಸದ ರಾಜೀವ್
ನವದೆಹಲಿ, ಜುಲೈ 1: ಲೋಕಸಭೆಯಲ್ಲಿ ಬೆಂಗಳೂರು ಕೆರೆ ಒತ್ತುವರಿ ಹಾಗೂ ನೀರಿನ ಸಮಸ್ಯೆ ಕುರಿತು ಸಂಸದ ರಾಜೀವ್ ಚಂದ್ರಶೇಖರ್ ಧ್ವನಿ ಎತ್ತಿದ್ದಾರೆ.
ಬೆಂಗಳೂರು ಕೆರೆಯನ್ನು ರಕ್ಷಿಸಿಕೊಳ್ಳಲು, ಒತ್ತುವರಿಯನ್ನು ತೆರವುಗೊಳಿಸಲು ಕರ್ನಾಟಕ ಸರ್ಕಾರ ವಿಫಲವಾಗಿದೆ ಹಾಗೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ.
ಹೊಸ್ಮ್ಯಾಟ್ ಆಸ್ಪತ್ರೆ ಬಳಿ ರಾಜ ಕಾಲುವೆಗೆ ಕೊಳಚೆ ನೀರು: ದೂರು ಏನಾಯ್ತು?
ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಅಮೃತ ಯೋಜನೆಯಡಿಯಲ್ಲಿ ನೀರನ್ನು ಮರುಬಳಕೆ ಮಾಡುವ ಕುರಿತು ಸಭೆಯನ್ನು ಹಮ್ಮಿಕೊಂಡಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಅವರು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ಕೆರೆಗಳು ಕಾಲಕ್ರಮೇಣ ಕಣ್ಮರೆಯಾಗುತ್ತಿದೆ. ದಿನನಿತ್ಯವೂ ಏಳುತ್ತಿರುವ ಹೊಸ ಅಪಾರ್ಟ್ಮೆಂಟ್, ಕಟ್ಟಡಗಳಿಗೆ ಕೆರೆಗಳು ಬಲಿಯಾಗುತ್ತಿವೆ.
ಸಾವಿರ ಕೆರೆಗಳ ನಾಡು ಬೆಂಗಳೂರಿನಲ್ಲಿ ಕೆರೆ ಅಂದ್ರೆ ಒತ್ತುವರಿ, ಕೆರೆ ಅಂದರೆ ಬೆಂಕಿ, ಕೆರೆ ಅಂದ್ರೆ ನೊರೆ, ಹೀಗೆ ಕೆರೆ ಅಂದ್ರೆ ನೆನಪಾಗೋದು ಈ ಎಲ್ಲಾ ಕೆಟ್ಟ ವಿಷಯಗಳೇ ಆಗಿವೆ. ಬೆಳ್ಳಂದೂರು, ವರ್ತೂರು ಕೆರೆಗಳಲ್ಲಿ ನಿತ್ಯ ಮಲಿನಕಾರಕ ನೀರು ಮಿಶ್ರಣಗೊಂಡು ಒಂದು ಕಡೆ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇನ್ನೊಂದೆಡೆ ನೊರೆಯನ್ನು ಉತ್ಪತ್ತಿ ಮಾಡುತ್ತಿದೆ.