ಬೆಂಗಳೂರು: ಶಾಲಾ ಬಾಲಕಿ ಮೇಲೆ ಅತ್ಯಾಚಾರ
ಬೆಂಗಳೂರು, ಜ.5: ನಗರದ ದಕ್ಷಿಣ ಭಾಗದಲ್ಲಿರುವ ಬೊಮ್ಮನಹಳ್ಳಿ ಸಮೀಪದ ಬೇಗೂರಿನ ಅಕ್ಷಯ ನಗರದಲ್ಲಿ 9 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತ್ಯಾಚಾರಗೊಳಗಾದ ಬಾಲಕಿಯರ ದೇಹಾರೋಗ್ಯದಲ್ಲಿ ಇಂದು ಸುಧಾರಣೆ ಕಂಡು ಬಂದಿದೆ.
ಶನಿವಾರ ಮಧ್ಯಾಹ್ನ ಶಾಲೆಯಿಂದ ಮನೆಗೆ ಬರುವಾಗ ಬಾಲಕಿಯನ್ನು ಅನಾಮಿಕ ವ್ಯಕ್ತಿಯೊಬ್ಬ ಅಪಹರಿಸಿದ್ದಾನೆ. ಬಾಲಕಿಯ ಕಣ್ಣಿಗೆ ಬಟ್ಟೆ ಕಟ್ಟಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯನ್ನು ಹೆದರಿಸಿ, ಯಾರಿಗೂ ಈ ಬಗ್ಗೆ ತಿಳಿಸಕೂಡದು ಎಂದು ಎಚರಿಸಿದ್ದಾನೆ. ತೀವ್ರ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಕಂಡ ಸ್ಥಳೀಯರೊಬ್ಬರು ಆಕೆಯ ಸ್ಕೂಲ್ ಬ್ಯಾಗಿನಲ್ಲಿದ್ದ ಪೋಷಕರ ವಿಳಾಸ ಪಡೆದು ವಿಷಯ ತಿಳಿಸಿದ್ದಾರೆ.
ಖಾಸಗಿ
ಕಂಪನಿಯಲ್ಲಿ
ಉದ್ಯೋಗಿಯಾಗಿರುವ
ಬಾಲಕಿಯ
ಪೋಷಕರು
ಮಗುವನ್ನು
ಮನೆಗೆ
ಕರೆದುಕೊಂಡು
ಹೋಗಿ
ವಿಚಾರಿಸಿದಾಗ
ಸತ್ಯ
ಹೊರ
ಬಿದ್ದಿದೆ.
ರಕ್ತಸ್ರಾವದಿಂದ
ಬಳಲುತ್ತಿದ್ದ
ಬಾಲಕಿಯನ್ನು
ತಕ್ಷಣವೇ
ಸೆಂಟ್
ಜಾನ್ಸ್
ಆಸ್ಪತ್ರೆಗೆ
ಸೇರಿಸಲಾಗಿದೆ.
ಭಾನುವಾರ
ಬೆಳೆಗ್ಗೆವರೆಗೂ
ಐಸಿಯುನಲ್ಲಿದ್ದ
ಬಾಲಕಿ
ಈಗ
ಚೇತರಿಸಿಕೊಂಡಿದ್ದಾಳೆ.
ಆದರೆ,
ಇನ್ನೂ
ಯಾವುದೇ
ಹೇಳಿಕೆ
ನೀಡುವ
ಸ್ಥಿತಿಯಲ್ಲಿಲ್ಲ
ಎಂದು
ವೈದ್ಯರು
ಹೇಳಿದ್ದಾರೆ.
ತೀವ್ರ ಶೋಧ: ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿರುವ ವ್ಯಕ್ತಿಯ ಹುಡುಕಾಟಕ್ಕೆ 7 ಮಂದಿ ಪೊಲೀಸರಿರುವ ತನಿಖಾ ತಂಡವನ್ನು ನೇಮಿಸಲಾಗಿದ್ದು, ತೀವ್ರ ಶೋಧ ನಡೆಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
ಬೊಮ್ಮನಹಳ್ಳಿಯ ಪ್ರಶಾಂತ್ ನರ್ಸಿಂಗ್ ಹೋಮ್ ಬಳಿ ವಿವಿಧ ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಸರ್ಕಾರ ಈ ರೀತಿ ಪ್ರಕರಣಗಳ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ವಿಮಲ ಹೇಳಿದ್ದಾರೆ. ನಾಳೆ ಸುಮಾರು 15ಕ್ಕೂ ಅಧಿಕ ಮಹಿಳಾ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿವೆ. ಗೃಹ ಸಚಿವ ಕೆ.ಜೆ ಜಾರ್ಜ್ ಅವರು ಬಾಲಕಿಯ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದು, ಬಾಲಕಿಯ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
ದಿನದಿಂದ ದಿನಕ್ಕೆ ಕ್ರೈಂ ಸಿಟಿಯಾಗಿ ರೂಪುಗೊಳ್ಳುತ್ತಿರುವ ಬೆಂಗಳೂರು ನಗರದಲ್ಲಿ ವಾರ್ಷಿಕವಾಗಿ ಸುಮಾರು 97ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ಅಧಿಕೃತ ದಾಖಲಾಗುತ್ತಿದೆ. ರೇಪ್ ರಾಜಧಾನಿ ಎನಿಸಿರುವ ದೆಹಲಿಯಲ್ಲಿ ಕಳೆದ ವರ್ಷ ಸುಮಾರು 572 ಪ್ರಕರಣಗಳು ದಾಖಲಾಗಿದೆ.