ಜೆಡಿಎಸ್ ಸಂಪುಟ ವಿಸ್ತರಣೆಗೆ ಮುಹೂರ್ತ ನೀವೇ ಕೊಡಿ ಮಾಡ್ತೀವಿ: ರೇವಣ್ಣ
ಬೆಂಗಳೂರು, ಡಿಸೆಂಬರ್ 24: ಜೆಡಿಎಸ್ ಸಂಪುಟ ವಿಸ್ತರಣೆಗೆ ನೀವೇ ಮುಹೂರ್ತ ನೋಡಿ ಕೊಈಡ ಎಂದು ಲೋಕೋಪಯೋಗಿ ಸಚಿವ ಎಚ್ಡಿ ರೇವಣ್ಣ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕ್ರಾಂತಿ ಮುಗಿಯುವವರೆಗೂ ಸಂಪುಟ ವಿಸ್ತರಣೆ ಇಲ್ಲ, ಸಂಕ್ರಾಂತಿ ಮುಗಿದ ಬಳಿಕ ವಿಸ್ತರಣೆಯಾಗಲಿದೆ, ಪಂಚಾಂಗ ನೋಡಿ ಸಂಪುಟ ವಿಸ್ತರಣೆ ಮಾಡೋಣ ಆದರೆ ಒಳ್ಳೆಯ ಲಗ್ನ ಕೊಡಿ ಮಾಡೋಣ ಎಂದು ತಿಳಿಸಿದ್ದಾರೆ.
ಸಂಪುಟ ವಿಸ್ತರಣೆ ಅಸಮಾಧಾನ, ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಇನ್ನು ಬೆಳಗಾವಿ-ಗೋವಾ ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬದಲಿ ಮಾರ್ಗ ನೀಡುವ ಕುರಿತು ಸಭೆ ಮಾಡಿದ್ದೇವೆ. ಬದಲಿ ಮಾರ್ಗಕ್ಕೆ ಹೆಚ್ಚುವರಿ ಸಮಯಬೇಕು ಎಂದು ಗೋವಾ ಕೇಳಿದೆ ಎಂದರು. ಧನುರ್ಮಾಸ ಮುಗಿಯುವವರೆಗೆ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದು ಹೇಳಿದ್ದರು.
ಎಚ್.ಡಿ.ಕುಮಾರಸ್ವಾಮಿ ಸಂಪುಟ, ಜಿಲ್ಲಾ ಮತ್ತು ಜಾತಿ ಪ್ರಾತಿನಿಧ್ಯ
ಜೆಡಿಎಸ್ ಪಕ್ಷವು ತಮ್ಮ ಖಾತೆಯಲ್ಲಿರುವ ಎರಡು ಸ್ಥಾನಗಳಿಗೆ ಮಂತ್ರಿಗಳನ್ನು ಆಯ್ಕೆ ಮಾಡಲಿದೆ. ಜೆಡಿಎಸ್ ಬಳಿ ಎರಡು ಖಾತೆಗಳು ಖಾಲಿ ಇವೆ. ಈ ಎರಡು ಸ್ಥಾನಕ್ಕೆ ಮೂರು ಜನ ಆಕಾಂಕ್ಷಿಗಳಿದ್ದಾರೆ. ಸಕಲೇಶಪುರದ ಜೆಡಿಎಸ್ ಶಾಸಕ ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ ಟಿ.ಎ.ಶರವಣ ಅವರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.