ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷವೆಂಬ ಕ್ರೌರ್ಯಕೆ ಹಾಲೆಂಬ ಅಮೃತದ ಉತ್ತರ: #MilkFest

By ಶಿಶಿರ ಅಂಗಡಿ
|
Google Oneindia Kannada News

ಬೆಂಗಳೂರು, ಜೂನ್ 9: ಬೀಫ್ ಫೆಸ್ಟ್ ಎಂಬ ಅಮಾನವೀಯ ಕೃತ್ಯದ ಮೂಲಕ ವಿಷದ ಬೀಜಗಳನ್ನು ದೇಶದೆಲ್ಲೆಡೆ ಹರಡಲು ಕೆಲವೊಂದು ಗುಂಪುಗಳು ಯೋಜಿಸಿದ್ದವು. ಸಮಾಜದಲ್ಲಿ ಹಬ್ಬಿರುವ ವಿಷವನ್ನು ಹೋಗಲಾಡಿಸಲು ಅಮೃತಸಿಂಚನದ ಅಗತ್ಯವಿದೆ ಎಂದು ಮನಗಂಡವರು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು.

ಈ ಕಾರಣಕ್ಕಾಗಿಯೇ ಬೆಂಗಳೂರಿನ ವಿಜಯನಗರದ ಶ್ರೀಭಾರತಿ ವಿದ್ಯಾಲಯದಲ್ಲಿ ಬರುವ ಭಾನುವಾರ (ಜೂನ್ 11) ಮಧ್ಯಾಹ್ನ 3 ಗಂಟೆಗೆ #MilkFest ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

[ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest]

ಗೋವುಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಮಹತ್ವದ ಅಧಿಸೂಚನೆಯನ್ನು ವಿರೋಧಿಸಿದ ಕೆಲ ಗುಂಪುಗಳು ಕೇರಳದಲ್ಲಿ ಅಮಾನವೀಯವಾಗಿ ಗೋವೊಂದನ್ನು ಕಡಿದು ವಿಕೃತಾನಂದದ ಮೂಲಕ ಬೀಫ್ ಫೆಸ್ಟ್ ಎಂಬ ಹಬ್ಬ ಆಚರಿಸಿದರು.

ಈ ಮೂಲಕ ಗೋಹತ್ಯೆಯ ವಿಷಬೀಜವನ್ನು ದೇಶದೆಲ್ಲೆಡೆ ಬಿತ್ತಲು ಮುನ್ನುಡಿ ಹಾಕಲಾಗಿತ್ತು. ಇದೇ ತರಹದ ಕೃತ್ಯವನ್ನು ಬೆಂಗಳೂರಿನಲ್ಲೂ ನಡೆಸಲು ಆಯೋಜಿಸಲಾಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ, ಈ ನಾಡಿನಲ್ಲಿ ಗೋವಿನ ರಕ್ತ ಹರಿಯಲು ಅವಕಾಶ ಕೊಡಬಾರದು ಎಂದು ಮಿಲ್ಕ್ ಫೆಸ್ಟ್ ಆಚರಿಸಲು ನಿರ್ಧರಿಸಲಾಯಿತು.

ಬೀಫ್ ಫೆಸ್ಟ್ ಪ್ರತಿಯಾಗಿ ಮಿಲ್ಕ್ ಫೆಸ್ಟ್

ಬೀಫ್ ಫೆಸ್ಟ್ ಪ್ರತಿಯಾಗಿ ಮಿಲ್ಕ್ ಫೆಸ್ಟ್

ಇಂಥಹ ಕ್ರೌರ್ಯಕ್ಕೆ ಕಾರುಣ್ಯದ ಮೂಲಕ ಉತ್ತರ ಕೊಡಬೇಕೆಂಬ ದೃಷ್ಟಿಯಲ್ಲಿ BeefFest ಗೆ ಪ್ರತಿಯಾಗಿ ರಾಜ್ಯಾದ್ಯಂತ #MilkFest ಆಯೋಜಿಸಲಾಗಿದೆ. ಗೋವಿನಿಂದ ಮಾಂಸವನ್ನಲ್ಲ , ಹಾಲು - ಗೋಮಯ - ಗೋಮೂತ್ರಗಳನ್ನು ಪಡೆಯಬೇಕು ಎಂಬುದನ್ನು ಸಾರಿ ಹೇಳಲಿದೆ ಈ ಹಾಲುಹಬ್ಬ. ಗೋವು ನಮ್ಮ ಆಹಾರವಲ್ಲ , ಗೋವು ನಮ್ಮ ಜೀವನದ ಆಧಾರ ಎಂಬುದನ್ನು ಪ್ರಸ್ತುತಪಡಿಸಲಿದೆ ಈ ಹಾಲುಹಬ್ಬ.

ಏನಿರಲಿದೆ ಹಾಲು ಹಬ್ಬದಲ್ಲಿ?

ಏನಿರಲಿದೆ ಹಾಲು ಹಬ್ಬದಲ್ಲಿ?

* ಗೋಕ್ಷೀರದ ಸಾತ್ವಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾಟ
* ಹಾಲಿನಿಂದ ಮಾಡುವ ಸ್ವಾದಿಷ್ಟ ಸಿಹಿ ತಿಂಡಿ ತಯಾರಿಯ ಪ್ರಾತ್ಯಕ್ಷಿಕೆ ಮತ್ತು ಮಾರಾಟ
* ಹಾಲಿನ ಮಹತಿ ಸಾರುವ ಸಾಹಿತ್ಯ ಕೃತಿ ಲೋಕಾರ್ಪಣೆ
* ಗೋವಿನ ಮಹತ್ವವನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು
* ಹಾಲು ಕುಡಿಯುವದರಿಂದ ನಮಗೇನು ಉಪಯೋಗ ಗೋಮಾಂಸ ಭಕ್ಷಣೆಯಿಂದ ನಮಗಾಗುವ ದುಷ್ಪರಿಣಾಮಗಳ ಕುರಿತು ಪ್ರಸ್ತುತಿ, ಪ್ರದರ್ಶನಗಳ ಅನಾವರಣ.

[ಬೆಂಗಳೂರು: ಜೂನ್ 11 ರಂದು ಅಂಕಿತ ಪ್ರಕಾಶನದ ಐದು ಪುಸ್ತಕ ಬಿಡುಗಡೆ]

ಅಭಿಷೇಕ-ಗೋಪೂಜೆ

ವಿಶೇಷವಾಗಿ ಗೋಪಾಲಕೃಷ್ಣನಿಗೆ ಹಾಲಿನ ಅಭಿಷೇಕ, ಗೋಪೂಜೆ ಗೋಗ್ರಾಸ ಸಮರ್ಪಿಸುವ ಅವಕಾಶಗಳು ಇರಲಿದೆ.

ಗೋವು ಕೇವಲ ತಿನ್ನುವ ಸರಕಲ್ಲ ಅದರಿಂದ ಮನುಷ್ಯನ ಜೀವನಕ್ಕೆ ಯಾವೆಲ್ಲ ರೀತಿಯಲ್ಲಿ ಉಪಯೋಗ ಇದೆ ಎಂಬುದನ್ನು ತಿಳಿಯೋಣ ಮತ್ತು ತಿಳಿಸೋಣ

ರಾಜ್ಯದಾದ್ಯಂತ ನಡೆಯಲಿ

ಹಾಲುಹಬ್ಬ ಕೇವಲ ಬೆಂಗಳೂರಲ್ಲಿ ಮಾತ್ರ ಅಲ್ಲ, ರಾಜ್ಯಾದ್ಯಂತ ಎಲ್ಲರೂ #MilkFest ಅನ್ನು ಆಚರಿಸಬೇಕು ಎಂಬುದು ಶ್ರೀ ಮಠದ ಅಪೇಕ್ಷೆ

[ಬೆಂಗಳೂರಿನ ಕಲಾರಸಿಕರಿಗಾಗಿ ಜೂ.9 ರಂದು 'ಮಿಸ್ಟಿಕ್ ಲೋಟಸ್']

ಸೆಲ್ಫಿ ವಿಥ್ ಗೋವು!

ನಿಮ್ಮ ಅಕ್ಕಪಕ್ಕದವರಿಗೆ, ಶಾಲಾ ಮಕ್ಕಳಿಗೆ, ಸಹೋದ್ಯೋಗಿಗಳಿಗೆ, ಅಪರಿಚಿತಪರಿಚಿತರಿಗೆ ಹೀಗೆ ಯಾರಿಗೆಲ್ಲ ಸಾಧ್ಯವೋ ಅವರಿಗೆಲ್ಲ ಹಾಲಿನ ಪಾಯಸ, ಹಾಲು ಅಥವಾ ಮಜ್ಜಿಗೆಯನ್ನು ಪ್ರೀತಿಯಿಂದ ಕೊಟ್ಟು ಗೋಮಾತೆಯನ್ನು ಸ್ಮರಿಸಿ ಅವರೊಂದಿಗೆ ಸೆಲ್ಫಿಯೊಂದನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ‌#MilkFest ಎಂಬ ಹ್ಯಾಷಟ್ಯಾಗಿನೊಂದಿಗೆ ಪೋಸ್ಟ್ ಮಾಡುವುದು. ನಮಗಾಗಿಯೇ ಜೀವನ ಸವೆಸುವ ಗೋವುಗಳ ಜೀವ ಉಳಿಸಲು ಇಷ್ಟಾದರೂ ಮಾಡೋಣವೇ?

English summary
Milk fest is a counter for beef fest which has intiated by Ramachandrapur math to protect desi cows. This is a peaceful revolution of the math, which will help us to understanding importance of desi cows. The fest will be organised by Shri Math at Shri Bharati Vidyalaya, Vijayanagar, Bengaluru, on 11th June, Sunday, 3pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X