ಸರ್ಕಾರಿ ಕಾಲೇಜುಗಳಲ್ಲಿ 5ರೂ.ಗೆ ಬಿಸಿಯೂಟ
ಬೆಂಗಳೂರು, ಜು. 25 : ಬೆಂಗಳೂರು ನಗರದ ಐದು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಬಿಸಿಯೂಟ ದೊರೆಯಲಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವ ಕುರಿತು ಸರ್ಕಾರ ಇಸ್ಕಾನ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದೆ ಎಂದು ಮೂಲ ಸೌಕರ್ಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ.
ಮಹಾರಾಣಿ
ಕಲೆ,
ವಾಣಿಜ್ಯ
ಮತ್ತು
ನಿರ್ವಹಣೆ
ಕಾಲೇಜಿನ
ಇತಿಹಾಸ,
ವಾಣಿಜ್ಯ
ಮತ್ತು
ನಿರ್ವಹಣೆ
ವಿಭಾಗದಿಂದ
ಗುರುವಾರ
ಆಯೋಜಿಸಿದ್ದ
'ಆಧುನಿಕ
ಯುಗದಲ್ಲಿ
ಮಹಾತ್ಮ
ಗಾಂಧಿ
ವಿಚಾರಧಾರೆಗಳ
ಮರುಶೋಧನೆ'
ಕುರಿತ
ರಾಷ್ಟ್ರೀಯ
ವಿಚಾರ
ಸಂಕಿರಣದಲ್ಲಿ
ಮಾತನಾಡಿದ
ಸಚಿವರು
ಬಿಸಿಯೂಟ
ಯೋಜನೆ
ಬಗ್ಗೆ
ಮಾಹಿತಿ
ನೀಡಿದರು.
ಬೆಂಗಳೂರು ನಗರ ಹಾಗೂ ಗ್ರಾಮಾಂತರದ ದೇವನಹಳ್ಳಿ, ಹೊಸಕೋಟೆ ಸುತ್ತಮುತ್ತಲ ಪ್ರದೇಶಗಳಿಂದ ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಬೆಳ್ಳಂಬೆಳಗ್ಗೆ ಅವರು ಮನೆಯಿಂದ ಹೊರಟು ಬರುತ್ತಾರೆ. ಅಂಥವರ ಹಸಿವು ನೀಗಿಸಲು ಬಿಸಿಯೂಟ ನೀಡಲು ನಿರ್ಧರಿಸಲಾಗಿದೆ ಎಂದು ರೋಷನ್ ಬೇಗ್ ಹೇಳಿದರು. [ವಾರಕ್ಕೊಮ್ಮೆ ಮಕ್ಕಳಿಗೆ ರಾಗಿಮುದ್ದೆ ಭಾಗ್ಯ!]
ವಿದ್ಯಾರ್ಥಿಗಳ ಜೊತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ ಊಟ ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಊಟಕ್ಕಾಗಿ 5 ನೀಡಿದರೆ, ಬೋಧಕೇತರ ಸಿಬ್ಬಂದಿ 10 ರೂ. ನೀಡಬೇಕಾಗುತ್ತದೆ, ಬೋಧಕ ಸಿಬ್ಬಂದಿಗೆ 20 ರೂ.ದರದಲ್ಲಿ ಊಟ ನೀಡುವ ಪ್ರಸ್ತಾವನೆ ಇದೆ ಎಂದರು.
ಮುಖ್ಯಮಂತ್ರಿಗಳು ಈ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ ರೋಷನ್ ಬೇಗ್, ಪ್ರಾಯೋಗಿಕವಾಗಿ ಈ ಯೋಜನೆಯನ್ನು ಮಹಾರಾಣಿ, ಎಸ್ ಜೆಪಿ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ವಿಎಚ್ ಡಿ ವಿಜ್ಞಾನ ಕಾಲೇಜುಗಳನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.