ಎಚ್1ಎನ್1 ಕುರಿತು ಜಾಗೃತಿಗೆ ಮುಂದಾದ ನಮ್ಮ ಮೆಟ್ರೋ
ಬೆಂಗಳೂರು, ನವೆಂಬರ್ 7: ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಎಚ್1ಎನ್1 ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಕುರಿತು ಎಚ್ಚರಿಕೆ ನೀಡಲು ನಮ್ಮ ಮೆಟ್ರೋ ಮುಂದಾಗಿದೆ.
ಇತ್ತೀಚಿಗಷ್ಟೆ ಕನ್ನಡದಲ್ಲಿ ಕನ್ನಡ ಹನಿಗವನ, ಚುಟುಕುಗಳನ್ನು ಪ್ರಸಾರ ಮಾಡುತ್ತಿದ್ದಾರೆ, ಕನ್ನಡ ರಾಜ್ಯೋತ್ಸವದ ತಿಂಗಳು ಪೂರ್ತಿಯಾಗಿ ಕನ್ನಡ ಘೋಷಣೆಗಳನ್ನು ಹಾಕಲಾಗುತ್ತಿದೆ. ಇದೀಗ ಎಚ್1ಎನ್1 ರೋಗದ ಕುರಿತು ಮಾಹಿತಿ ಹಾಗೂ ಎಚ್ಚರಿಕೆಯನ್ನು ಪ್ರಸಾರ ಮಾಡುತ್ತಿದೆ.
ಕರ್ನಾಟಕದಲ್ಲಿ ಈ ಬಾರಿ ಡೆಂಗ್ಯೂ ಹಾವಳಿ ನಿಯಂತ್ರಣದಲ್ಲಿ!
ಎಚ್1ಎನ್1 ರೋಗ ಮೊದಲೇ ಪತ್ತೆಯಾದಲ್ಲಿ ಅದನ್ನು ಸುಲಭವಾಗಿ ಕಡಿಮೆ ಮಾಡಬಹುದಾಗಿದೆ, ಈ ರೋಗದ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದು ಪ್ಲಾಟ್ಫಾರ್ಮ್ ಮಾತ್ರವಲ್ಲದೆ ಮೆಟ್ರೋ ನಿಲ್ದಾಣದಾದ್ಯಂತ ಪ್ರಸಾರ ಮಾಡಲಾಗುತ್ತಿದೆ. ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಈ ರೋಗದ ಬಗ್ಗೆ ಜಾಗೃತಿ ನೀಡುವ ಅಗತ್ಯವಿದೆ ಎನ್ನುವುದು ವೈದ್ಯರ ಮಾತು.
ಬೆಂಗಳೂರಲ್ಲಿ 10 ದಿನಗಳಲ್ಲಿ 23 ಎಚ್1ಎನ್1 ಪ್ರಕರಣ ಪತ್ತೆ
ಇದೀಗ ನಮ್ಮ ಮೆಟ್ರೋದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ಶೀಘ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾಲ್ ಗಳು, ಮಲ್ಟಿ ಪ್ಲೆಕ್ಸ್ಗಳನ್ನೂ ಈ ರೀತಿಯ ಜಾಗೃತಿ ಘೋಷಣೆಗಳನ್ನು ಪ್ರಸಾರ ಮಾಡ ಮಾಡಬೇಕಾಗುತ್ತದೆ.
ಬೆಂಗಳೂರಲ್ಲಿ ಎಚ್1ಎನ್1 46 ಪ್ರಕರಣ ಪತ್ತೆ: ರಾಜ್ಯಾದ್ಯಂತ ಹೈ ಅಲರ್ಟ್
ಮಾಸ್ಕ್ಗಳನ್ನು ಧರಿಸುವುದು, ಕರವಸ್ತ್ರವನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ. ನವೆಂಬರ್ 3ರವರೆಗೆ ರಾಜ್ಯದಲ್ಲಿ 17 ಹಂದಿ ಜ್ವರದಿಂದ ಮೃತಪಟ್ಟಿದ್ದಾರೆ. 2017ರಲ್ಲಿ ಒಟ್ಟು 15 ಮಂದಿ ಮೃತಪಟ್ಟಿದ್ದರು.